ಮೈಸೂರು : ರಾಜೇಂದ್ರ ಶ್ರೀಗಳ ಪ್ರತಿಮೆ ಅನಾವರಣಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಕೆಲ ಸಂಘಟನೆಗಳ ವಿರೋಧದ ನಡುವೆಯೂ ನಡೆಯುತ್ತಿದ್ದ ರಾಜೇಂದ್ರ ಶ್ರೀಗಳ ಪ್ರತಿಮೆ ಅನಾವರಣಾ ಕಾರ್ಯಕ್ಕೆ ಬ್ರೇಕ್ ಬಿದ್ದಿದೆ.
ಯಥಾಸ್ಥಿತಿ ಕಾಪಾಡಿಕೊಳ್ಳಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಈ ಬಗ್ಗೆ ಹೈ ಕೋರ್ಟ್ ವಕೀಲ ಸುಬ್ರಮಣ್ಯರಿಂದ ಮಾಹಿತಿ ನೀಡಿದ್ದು,ಇಂದು 12.30 ರಲ್ಲಿ ತಡೆಯಾಜ್ಞೆ ಆದೇಶ ಆಗಿದೆ.ಅಧಿಕೃತ ಆದೇಶ ಕಾಪಿ ಸಂಜೆ ವರಗೆ ಬರಲಿದೆ ಎಂದರು.
ಅರಸು ಮಂಡಳಿ ಪರ ವಕಾಲತ್ತು ವಹಿಸಿರುವ ಹೈಕಮಾಂಡ್ ಲಾಯರ್ ಸುಬ್ರಮಣ್ಯ.
ಸುಪ್ರೀಂ ಕೋರ್ಟಿನ ತ್ರಿ ಸದಸ್ಯ ಪೀಠದಿಂದ ಆದೇಶವಾಗಿದೆ.ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ, ಪ್ರಶಾಂತ ಕುಮಾರ್ ಮಿಶ್ರ ರನ್ನ ಒಳಗೊಂಡ ತ್ರಿಪೀಠ ಸದಸ್ಯರಿದ್ದ ನ್ಯಾಯಮೂರ್ತಿಗಳಿಂದ ಆದೇಶ ಬಂದಿದೆ ಕಾಮಗಾರಿ ಮುಂದುವರಿಯದಂತೆ ಯಥಾಸ್ಥಿತಿ ಕಾಪಾಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದರು