ಮೈಸೂರು : ಮೈಸೂರಿನ ಗನ್ ಹೌಸ್ ವೃತ್ತದಲ್ಲಿ ವಿವಾದಿತ ಪ್ರತಿಮೆ ತೆರವುಗೊಳಿಸುವಂತೆ ಆಗ್ರಹಿಸಿ ಮೈಸೂರಿನ ಹಳೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಯಿತು.
ಮೈಸೂರಿನ ಗೌಸ್ ವೃತ್ತದಲ್ಲಿ ರಾತ್ರೋರಾತ್ರಿ ರಾಜೇಂದ್ರ ಶ್ರೀಗಳ ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಆ ಮೂಲಕ ರಾಜೇಂದ್ರ ಶ್ರೀಗಳಿಗೆ ಅವಮಾನ ಮಾಡಲಿಕ್ಕೆ ಕೆಲವರು ಮುಂದಾಗಿದ್ದಾರೆ.ಮೈಸೂರು ಅರಮನೆ ಸುತ್ತ ಮಹಾರಾಜರ ಪ್ರತಿಮೆಗಳು ಇವೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ನಿಧನ ಬಳಿಕ.
ಮೈಸೂರು ಮಹಾನಗರ ಪಾಲಿಕೆಯಲ್ಲಿ ಪ್ರತಿಮೆ ನಿರ್ಮಾಣಕ್ಕೆ ಅನುಮತಿ ಕೊರಿದ್ದೆವು. ಆದರೆ ಪಾಲಿಕೆ ಅನುಮತಿ ನಿರಾಕರಣೆ ಮಾಡಿತು. ಈಗ ಅದೇ ವೃತ್ತದಲ್ಲಿ ರಾಜೇಂದ್ರ ಶ್ರೀಗಳ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ.
ಕೂಡಲೇ ವಿವಾದಿತ ಪ್ರತಿಮೆಯನ್ನ ತೆರವು ಮಾಡಬೇಕು ಎಂದು ಕಾನೂನು ಬಾಹಿರ ಪ್ರತಿಮೆ ತೆರವು ಹೋರಾಟ ಸಮಿತಿ ಸದಸ್ಯರ ಮನವಿ ಮಾಡಿದರು