ಮೈಸೂರು : ಕರಾಮುವಿ ಹಣಕಾಸು ಅಧಿಕಾರಿಯಾಗಿದ್ದ ಖಾದರ್ ಪಾಷಾ. ಎ ಸರ್ಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಈ ಹಿಂದೆ ಮೂರು ಬಾರಿ ವರ್ಗಾವಣೆಯಾದರೂ ಕಾರಾಮುವಿ ಅಧಿಕಾರ ಬಿಡದೆ ಅಧಿಕಾರ ಹಸ್ತಂತರ ಮಾಡಲು ಖಾದರ್ ಪಾಷಾ ದೊಂಬರಾಟ ಮಾಡಿದ್ದರು ಎಂದು ತಿಳಿದು ಬಂದಿದೆ. ಅಧಿಕಾರ ದುರುಪಯೋಗ ಪಡಿಸಿಕೊಂಡು ಅನಾಚಾರ ಭ್ರಷ್ಟಾಚಾರ ನಡೆಸಿರುವ ಆರೋಪ ಹೊತ್ತಿರುವ ಖಾದರ್ ಪಾಷಾ ವಿರುದ್ಧ ಶಿಕ್ಷಕರ ಸಂಘ ತಿರುಗಿಬಿದ್ದಿದೆ.
ವರ್ಗಾವಣೆ ದಂಧೆಯಲ್ಲಿ ಸಾಕಷ್ಟು ಹಣ ಮಾಡಿದ್ದಾರೆ
ಉಚ್ಚ ನ್ಯಾಯಾಲಯದ ಸ್ಪಷ್ಟ ಆದೇಶವಿದ್ದರು ಶಿಕ್ಷಕರ ಸವಲತ್ತು ನೀಡಲು ಹಣ ಪಡೆದಿದ್ದಾರೆ
ತಮ್ಮ ಅಳಿಯನನ್ನು ತಂದು ಕೆಲಸ ನೀಡಿ ಪದನಾಮ ಬದಲಾಯಿಸಿ ಸಂಬಳ ಜಾಸ್ತಿ ಮಾಡಿಸಿದ್ದಾರೆ
ಕರಾಮುವಿ ಹಣವನ್ನೂ ನುಂಗಿದ್ದಾರೆ
45ರಿಂದ 50ಕೋಟಿ ಡಿಡಿ ಹಣ ವಿವಿಯ ಖಾತೆಗೆ ಇನ್ನೂ ಜಮಾ ಆಗಿಲ್ಲ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.
ರಾಜ್ಯ ಲೆಕ್ಕ ತಪಾಸಣೆ ವಿಚಾರಣೆ ಪತ್ರ ಬರೆದರು ಹಲವು ಖಾತೆಗಳ ವಿವರ ನೀಡಿಲ್ಲ
ಈಗಲಾದರೂ ರಾಜ್ಯ ಸರ್ಕಾರದ ವರ್ಗಾವಣೆ ಆದೇಶಕ್ಕೆ ತಲೆಬಾಗಿ ಹೋದರೆ ಒಳ್ಳೆಯದು
ಇಲ್ಲದಿದ್ದರೆ ಅವಕಾಶ ಕೊಡಿ ಸಾಕ್ಷಿ ಸಮೇತ ಕಾವೇರಿ ಸಭಾಂಗಣದಲ್ಲಿ ಬಹಿರಂಗ ಪಡಿಸುತ್ತೇವೆ ಎಂದು
ಕರಾಮುವಿ ವಿವಿಗೆ ಕರ್ನಾಟಕ ರಾಜ್ಯ ಮುಕ್ತ ವಿವಿ ಖಾಯಂ ಅಧ್ಯಾಪಕರ ಸಂಘ ಪತ್ರ ಬರೆದಿದೆ.