ಮೈಸೂರು : ಜಿಂಕೆ ಭೇಟೆಯಾಡಿದ್ದ ನಾಲ್ವರು ಆರೋಪಿಗಳ ಪೈಕಿ ಇಬ್ಬರನ್ನು ಬಂಧಿಸಲಾಗಿದೆ.
ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ನೇಗತ್ತೂರು ಗ್ರಾಮದಲ್ಲಿ ಘಟನೆ ಜಿಂಕೆ ಬೇಟೆಯಾಡಿದ್ದ ಕಿಡಿಗೇಡಿಗಳು.

ಅಬ್ಬೂರಿನ ಮಧು,ಸಿಂಡೇನಹಳ್ಳಿ ಗ್ರಾಮದ ಪ್ರದೀಪ್ ಬಂಧಿತ ಆರೋಪಿಗಳು.ಉಳಿದ ಇಬ್ಬರು ಆರೋಪಿಗಳಾದ ರಾಜು,ಪ್ರಸನ್ನ ಬಂಧನಕ್ಕೆ ಬಲೆ ಬೀಸಿರುವ ಅರಣ್ಯ ಇಲಾಖೆ ಅಧಿಕಾರಿಗಳು.ಅರಣ್ಯಧಿಕಾರಿ ಹರ್ಷಕುಮಾರ್ ಮತ್ತು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದಯಾನಂದ್ ಆದೇಶದ ಮೇರೆಗೆ ದಾಳಿ ನಡೆಸಿರುವ ಅರಣ್ಯಾಧಿಕಾರಿಗಳು.
ನಾಲ್ವರು ಆರೋಪಿಗಳು ಹುಣಸೂರು ತಾಲ್ಲೂಕಿನ ಹನಗೋಡು ಹೋಬಳಿ ವ್ಯಾಪ್ತಿಯ ವನ್ಯ ಜೀವಿ ಪ್ರದೇಶದಲ್ಲಿ ಜಿಂಕೆಯನ್ನ ಭೇಟೆಯಾಡಿ.
ಹೊಲದಲ್ಲಿ ಮಾಂಸವನ್ನ ಬಚ್ಚಿಟ್ಟಿದ್ದನ್ನ ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಬಂಧಿತ ಆರೋಪಿಗಳಿಂದ ಕೃತ್ಯಕ್ಕೆ ಬಳಿಸಿದ್ದ 3ಕತ್ತಿ ಹಾಗೂ ಜಿಂಕೆ ಮಾಂಸ ವಶ ಪಡಿಸಿಕೊಳ್ಳಲಾಗಿದೆ.
ಈ ಕಾರ್ಯಾಚರಣೆಯಲ್ಲಿ ಅರಣ್ಯಧಿಕಾರಿಗಳಾದ ರತನ್ ಕುನಾರ್,ಗಣರಾಜ್ ಪಟಕಾರ್,ಸಿದ್ದರಾಜು,ಪ್ರಸನ್ನ ಕುಮಾರ್ ಸೇರಿದಂತೆ ಮತ್ತಿತರರು ಭಾಗಿಯಾಗಿದ್ದರು