ಮೈಸೂರು : ಮೋದಿ ವಿಷ ಸರ್ಪ ಖರ್ಗೆ ಹೇಳಿಕೆ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ ಹೊರಹಾಕಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯ ಮತ್ತು ದೇಶದ ರಾಜಕೀಯ ದೊಡ್ಡ ವ್ಯಕ್ತಿ.ಆದರೆ ಹಲವು ಬಾರಿ ನಾಲಿಗೆ ಜಾರಿ ಮಾತನಾಡುತ್ತಾರೆ.ಈ ಹಿಂದೆ ಲೋಕಸಭೆಯಲ್ಲೂ ಸ್ವಾತಂತ್ರ್ಯಕ್ಕೆ ಬಿಜೆಪಿಯ ಒಂದು ನಾಯಿಕೂಡ ಸತ್ತಿಲ್ಲ ಅಂತ ಹೇಳಿದ್ರು.ಈಗ ಮೋದಿ ಜೀ ಬಗ್ಗೆ.ಕಾಂಗ್ರೇಸ್ ನ ಅಧ್ಯಕ್ಷ ಪದವಿ ಇರುವಂತಹ ವ್ಯಕ್ತಿಯಿಂದ ಇಂತಹ ಕುಬ್ಜ ಮಾತುಗಳನ್ನ ಸಹಿಸೋದಿಲ್ಲ ಎಂದು ಕಿಡಿಕಾರಿದರು.
ಖರ್ಗೆಯವರೇ ರಾಜ್ಯದಲ್ಲಿ ೭,೮ ಎಸ್ಸಿ ಎಸ್ಟಿ ರಿಸರ್ವ್ ಸೀಟುಗಳಿವೆ.ಅಷ್ಟುನ್ನೂ ಬಿಜೆಪಿಗೆ ಕೊಟ್ಟಿದ್ದೀರಾ.
ಇಡೀ ದೇಶದಾದ್ಯಂತ ೮೭ ಜನ ಎಸ್ಸಿ ಎಸ್ಟಿ ಸಂಸದರು ನಮ್ಮಲ್ಲಿದ್ದಾರೆ.ಇಡೀ ಹಿಂದೂಳಿದ ಜಾತಿ ಜನಾಂಗ ನಮ್ಮ ಪರವಾಗಿದೆ.ಆದ್ರೆ ನೀವು ಆ ಜಾತಿ ಜನಾಂಗಕ್ಕೆ ಸೇರಿ ಆ ಜನರ ವಿಶ್ವಾಸವನ್ನೇ ಗಳಿಸಿಲ್ಲ.೨೦೧೯ ರಲ್ಲಿ ಸೋಲು ಅನುಭವಿಸಿದ್ದೀರಿ.ನಿಮ್ಮ ಸಮಾಜವೇ ನಿಮ್ಮನ್ನ ಒಪ್ಪುತ್ತಿಲ್ಲ ಎಂದು ಮಾತಿನಲ್ಲೇ ತಿವಿದರು.
ಈ ರೀತಿ ಹತಾಶೆಯಿಂದ ಅಪ್ರಬುದ್ದವಾಗಿ ಮಾತನಾಡೋದು ಸರಿಯಿಲ್ಲ.ಇದು ಕಾಂಗ್ರೇಸ್ ಸಂಸ್ಕೃತಿಯನ್ನ ತೋರಿಸುತ್ತದೆ.ನಿಮ್ಮ ಹಿನ್ನೆಲೆ ಅನುಭವಕ್ಕೆ ಇದು ಶೋಭೆಯಲ್ಲ.ಇದನ್ನ ನಾವು ಖಂಡಿಸುತ್ತೇವೆ.
ನಿಮ್ಮ ಬಗ್ಗೆ ಗೌರವ ಇದೆ ಆದರೆ ನಿಮ್ಮ ಮಟ್ಟಕ್ಕೆ ಇಳಿದು ಮಾತನಾಡುತ್ತಿಲ್ಲ.ಕರ್ನಾಟಕ ನಾಚಿಕೆ ಪಡುವಂತ ಹೇಳಿಕೆ ಕೊಡಬೇಡಿ.ನೀವು ಇನ್ನೊಂದು ಸಿದ್ದರಾಮಯ್ಯ ಆಗಬೇಡಿ.
ಸಿದ್ದರಾಮಯ್ಯ ಛಾಳಿ ನಿಮಗೆ ಅಂಟೋದು ಬೇಡ.
ಅವರು ಮಾತ್ರ ಇನ್ನೋಬ್ಬರ ಬಗ್ಗೆ ಹೀಗೆ ತುಚ್ಚವಾಗಿ ಮಾತನಾಡೋದು.ದಯಮಾಡಿ ನೀವು ಮತ್ತೊಬ್ಬ ಸಿದ್ದರಾಮಯ್ಯ ಆಗಬೇಡಿ ಎಂದು ಪ್ರತಾಪ್ ಸಿಂಹ ಹೇಳಿದರು.