ಕಾಂಗ್ರೆಸ್ ಸಂವಿಧಾನವನ್ನು ಅತಿಹೆಚ್ಚು ಬಾರಿ ತಿದ್ದುಪಡಿ ಮಾಡಿದೆ. ದಲಿತರನ್ನ ಬಿಜೆಪಿ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡಿಕೊಂಡು ಕಾಂಗ್ರೆಸ್ ಬಂದಿದೆ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್
ಅಂಬೇಡ್ಕರ್ ಬಳಿ ಸಹಾಯಕನಾಗಿ ಇದ್ದ ಒಬ್ಬ ವ್ಯಕ್ತಿಯನ್ನು ನಿಲ್ಲಿಸಿ ಸೋಲಿಸಿ ಅವಮಾನ ಮಾಡಿದ್ದು ಕಾಂಗ್ರೆಸ್ ಎಂದು ಮಾಜಿ ಮೇಯರ್ ಶಿವಕುಮಾರ್ ವಾಗ್ದಾಳಿ ನಡೆಸಿದರು.
ಅಂಬೇಡ್ಕರ್ ಸೋಲಿಸಿದ ವ್ಯಕ್ತಿಗೆ ಕಾಂಗ್ರೆಸ್ ಪ್ರಶಸ್ತಿ ಕೊಟ್ಟಿದೆ. ಅಂಬೇಡ್ಕರ್ ಅವರಿಗೆ ಭಾರತ ರತ್ನ ಕೊಟ್ಟಿರುವುದು ಬಿಜೆಪಿ ಸರ್ಕಾರ ದಲಿತ ಬಂದುಗಳು ಇದನ್ನು ನೆನಪಿಟ್ಟುಕೊಳ್ಳಬೇಕು ಎಂದರು.
ಕಾಂಗ್ರೆಸ್ ಪೌರ ಕಾರ್ಮಿಕರಿಗೆ ಏನು ಮಾಡಿಲ್ಲ.
44 ಸಾವಿರ ನೇರ ನೇಮಕಾತಿ ಇರುವ ಕಾರ್ಮಿಕರಿದ್ದಾರೆ
ಈ ಹಿಂದೆಯೂ ಸಿಎಂ ಆಗಿದ್ದ ಸಿದ್ದರಾಮಯ್ಯ ಪೌರ ಕಾರ್ಮಿಕರನ್ನು ಖಾಯಂ ಮಾಡಲಿಲ್ಲ.
ಬೊಮ್ಮಾಯಿ ಅವರು ಹಂತ ಹಂತವಾಗಿ ಖಾಯಂ ಮಾಡುವ ಕೆಲಸ ಮಾಡಿದರು. ಮೊದಲು 11 ಸಾವಿರ ನಂತರ 12 ಸಾವಿರ ಜನರಿಗೆ ಕೆಲಸ ಖಾಯಂ ಮಾಡಿದೆ
ಪೌರ ಕಾರ್ಮಿಕರ ಅಭಿವೃದ್ದಿಗೆ ಬಿಜೆಪಿ ಅನೇಕ ಕೆಲಸಗಳನ್ನು ಜಾರಿಗೆ ತಂದಿದೆ. ಸಂಕಷ್ಟ ಪರಿಹಾರ ಯೋಜನೆ ಜಾರಿಗೆ ತಂದಿದ್ದು ಬಿಜೆಪಿ ಸರ್ಕಾರ
ಪೌರ ಕಾರ್ಮಿಕರನ್ನು ವಿದೇಶಕ್ಕೆ ಅಧ್ಯಯನಕ್ಕೆ ಕರೆದುಕೊಂಡು ಹೋದ ಸರ್ಕಾರ ಬಿಜೆಪಿ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಮೇಯರ್ ಶಿವಕುಮಾರ್ ಹರಿಹಾಯ್ದರು. ಅಲ್ಲದೆ ಈ ಬಾರಿ ಮೈತ್ರಿ ಅಭ್ಯರ್ಥಿ ಯದುವೀರ್ ಒಡೆಯರ್ ಅವರಿಗೆ ಮತ ನೀಡಿ ಗೆಲ್ಲಿಸಬೇಕು ಎಂದು ಮನವಿ ಮಾಡಿದರು.