• ಇತ್ತೀಚಿನ
  • ರಾಜ್ಯ
  • ರಾಜಕೀಯ
  • ಜಿಲ್ಲೆ
    • ಉಡುಪಿ
    • ಉತ್ತರಕನ್ನಡ
    • ಕಲ್ಬುರ್ಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೆಂಗಳೂರು ಗ್ರಾಮಾಂತರ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ದೇಶ
  • ಪ್ರಪಂಚ
  • ಸಿನಿಮಾ
  • ಕ್ರೀಡೆ
  • ಇತರೆ
  • E-paper
Reading: ನುಡಿದಂತೆ ನಡೆಯದ ಬಜೆಟ್ ನ ಘೋಷಣೆಗಳಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ – ಡಾ ಹೆಚ್ ಸಿ ಮಹದೇವಪ್ಪ
Share
Aa
Rajyadharma NewsRajyadharma News
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಅಪರಾಧ
  • ಪ್ರವಾಸ
  • ವಿಜ್ಞಾನ
  • ತಂತ್ರಜ್ಞಾನ
  • ಫ್ಯಾಷನ್
Search
  • Home
  • Categories
    • ರಾಜಕೀಯ
    • ಸಿನಿಮಾ
    • ತಂತ್ರಜ್ಞಾನ
    • ಪ್ರವಾಸ
    • ಫ್ಯಾಷನ್
    • ವ್ಯವಹಾರ
    • ವಿಜ್ಞಾನ
    • ಆರೋಗ್ಯ
  • ಜಿಲ್ಲೆ
    • ಮೈಸೂರು
    • ಮಂಡ್ಯ
    • ಚಾಮರಾಜನಗರ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
Follow US
  • Advertise
© 2022 Foxiz News Network. Ruby Design Company. All Rights Reserved.
Rajyadharma News > Blog > ರಾಜಕೀಯ > ನುಡಿದಂತೆ ನಡೆಯದ ಬಜೆಟ್ ನ ಘೋಷಣೆಗಳಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ – ಡಾ ಹೆಚ್ ಸಿ ಮಹದೇವಪ್ಪ
ರಾಜಕೀಯರಾಜ್ಯ

ನುಡಿದಂತೆ ನಡೆಯದ ಬಜೆಟ್ ನ ಘೋಷಣೆಗಳಿಂದ ಜನರಿಗೆ ಯಾವುದೇ ಪ್ರಯೋಜನವಿಲ್ಲ – ಡಾ ಹೆಚ್ ಸಿ ಮಹದೇವಪ್ಪ

admin
Last updated: 2024/02/02 at 12:23 PM
admin
Share
2 Min Read
SHARE

ನಿನ್ನೆಯ ಕೇಂದ್ರದ ಬಜೆಟ್ ಅನ್ನು ಸೂಕ್ಷ್ಮವಾಗಿ ನೋಡುವಾಗಿ ಜನರ ಬದುಕಿನ ದೃಷ್ಟಿಯಿಂದ ರೂಪಿಸಲಾಗುವ ನಿನ್ನೆಯ ಬಜೆಟ್ ನಲ್ಲಿ ಸಾಕಷ್ಟು ಅಂಶಗಳು ಇಲ್ಲದಂತೆಯೇ ತೋರಿತು. ಮುಖ್ಯವಾಗಿ ಜನರ ಸಂಖ್ಯೆ ಮತ್ತು ಅವರ ಅಸ್ತಿತ್ವವನ್ನು ಅರಿತುಕೊಳ್ಳುವ ಸಲುವಾಗಿ ಜನ ಗಣತಿಯನ್ನು 2021 ರಲ್ಲೇ ಮಾಡಬೇಕಿತ್ತು. ಆದರೆ ಈಗಲೂ ಜನಗಣತಿಯ ಬಗ್ಗೆ ತಲೆ ಕೆಡಿಸಿಕೊಳ್ಳದೇ ಜನಗಣತಿಯ ಅನುದಾನದ ಏರಿಕೆ ಮತ್ತು ಇಳಿಕೆಯ ಬಗ್ಗೆಯೇ ಕೇಂದ್ರವು ಚಿಂತಿಸುತ್ತಿದೆ.


ಇನ್ನು ಬಾಬಾ ಸಾಹೇಬರು ಹೇಳಿದಂತೆ ಜಾತಿ ಗಣತಿಯು ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಕೀಲಿಕೈ ಆಗಿದ್ದು ಇದರಿಂದ ವಿವಿಧ ಸಮುದಾಯಗಳಲ್ಲಿನ ಜನರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಅರಿವಾಗಲಿದ್ದು ಅವರ ಬಡತನದಲ್ಲಿ ಸಾಮಾಜಿಕ ಕಾರಣಗಳು ಎಷ್ಟು ಆರ್ಥಿಕತೆಯ ಕಾರಣಗಳು ಎಷ್ಟು ಎಂಬುದನ್ನು ಅರಿಯಲು ಇದು ನೆರವಾಗಲಿದೆ. ಆದರೆ ಕೇಂದ್ರ ಸರ್ಕಾರವು ಇನ್ನೂ ಕೂಡಾ ಜಾತಿಗಣತಿಯನ್ನು ನಡೆಸದೇ ನೇರವಾಗಿ ಇವರು 25 ಕೋಟಿ ಜನರು ಬಡತನದಿಂದ ಮುಕ್ತರಾಗಿದ್ದಾರೆ ಎಂದು ಘೋಷಣೆ ಮಾಡುತ್ತಿದ್ದು ಇದೊಂದು ಆಧಾರರಹಿತವಾದ ಮತ್ತು ತರ್ಕವಿಲ್ಲದ ಸಂಗತಿಯಾಗಿದೆ.
ಇನ್ನೂ ಮುಖ್ಯವಾಗಿ ಗಮನಿಸುವುದಾದರೆ ಭಾರತವು ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 2014 ರ ವೇಳೆಗೆ 55 ನೇ ಸ್ಥಾನದಲ್ಲಿದ್ದು ಈ ದಿನ ಅದು 103 ನೇ ಸ್ಥಾನಕ್ಕೆ ಕುಸಿದಿದೆ. ಇದು ಬಡತನದ ಸಂಕೇತವೇ ಹೊರತು ಶ್ರೀಮಂತಿಕೆಯ ಸೂಚಕವಲ್ಲ. ಹೀಗಾಗಿ ಕೇಂದ್ರ ಸರ್ಕಾರದ ಘೋಷಣೆಯು ಮಹಾನ್ ಸುಳ್ಳುಗಳ ಕಂತೆಯಾಗಿದೆ.

ಇದಾದ ಬಳಿಕ ಕೇಂದ್ರ ಸರ್ಕಾರವು ತಮ್ಮ ಬಜೆಟ್ ನಲ್ಲಿ ಯುವಕರು, ಮಹಿಳೆಯರು, ನಿರುದ್ಯೋಗ ಹಾಗೂ ರೈತರು ಎಂಬ ಪದಗಳನ್ನು ಜನರ ಎದುರು ಹೇಳಿದೆ. ಈ ಪ್ರಕಾರವಾಗಿ ನೋಡುವುದಾದರೆ 2014 ರ ಚುನಾವಣೆಯಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ದು ಆ ಭರವಸೆಯನ್ನು ಈಡೇರಿಸಿಲ್ಲ, ಜೊತೆಗೆ ರೈತರ ಆದಾಯ ಡಬಲ್ ಮಾಡುತ್ತೇವೆ ಎಂದಿದ್ದರು. ಈಗ ನೋಡಿದರೆ ಆ ಭರವಸೆ ಈಡೇರಿಲ್ಲ. ಅಲ್ಲದೇ ಮಹಿಳೆಯರ ಮೇಲಿನ ದೌರ್ಜನ್ಯದ ಪ್ರಕರಣಗಳು ಹೆಚ್ಚುತ್ತಿದ್ದು ಮಹಿಳೆಯರ ರಕ್ಷಣಾ ದರದ ಪ್ರಮಾಣವೂ ಕುಸಿದಿದೆ. ಹೀಗಾಗಿ ಇವರ ಬಜೆಟ್ ನ ಘೋಷಣೆಗಳು ವಾಸ್ತವದಲ್ಲಿ ಅವರನ್ನೇ ಅಣಕಿಸಿಕೊಳ್ಳುವ ಘೋಷಣೆಗಳಾಗಿವೆ.

ಇನ್ನು ಕೇಂದ್ರ ಸರ್ಕಾರದ ಒಳಗೆ ಲಕ್ಷಾಂತರ ಬ್ಯಾಕ್ ಲಾಗ್ ಹುದ್ದೆಗಳು ಇದ್ದು ಅವುಗಳನ್ನು ತುಂಬುವ ಬಗ್ಗೆ ಇವರು ಕನಿಷ್ಠ ಯೋಚನೆಯನ್ನೂ ಮಾಡದೇ ನಮ್ಮ ಸರ್ಕಾರ ಯುವಕರ ಪರವಾಗಿದೆ ಎಂದು ಹೇಳುವುದನ್ನು ನೋಡಿದರೆ ನಗಬೇಕೋ ಅಳಬೇಕೋ ಎಂದು ತಿಳಿಯದಾಗಿದೆ.ಇನ್ನು ಹೊಸದಾಗಿ ಮಾಡುವ ಜನಗಣತಿಯ ಆಧಾರದಲ್ಲಿ ಮತಕ್ಷೇತ್ರಗಳ ಪುನರ್ ವಿಂಗಡಣೆ ಮಾಡಬೇಕಾದ್ದು ಸರ್ಕಾರದ ಜವಾಬ್ದಾರಿ ಆಗಿದೆ. ಆದರೆ ಒಂದು ಸರಳವಾದ ಜನಗಣತಿಯನ್ನೇ ಮಾಡದೇ ಇರುವಂತಹ ಸಂದರ್ಭದಲ್ಲಿ ಜನಗಣತಿಯ ಆಧಾರದಲ್ಲಿ ಪುನರ್ ವಿಂಗಡಣೆ ಮಾಡುತ್ತಾರೆಯೇ?
ಇನ್ನು ಇವರುಗಳು ಕಳೆದ 10 ವರ್ಷಗಳ ತಮ್ಮ ಆಡಳಿತದಲ್ಲಿ ಸಾಕಷ್ಟು ಸರ್ಕಾರಿ ಉದ್ಯಮಗಳನ್ನು ಖಾಸಗೀಕರಣಗೊಳಿಸಿದ್ದು ಸಂವಿಧಾನಾತ್ಮಕ ಮೀಸಲಾತಿ ಕಲ್ಪನೆಯ ವಿರುದ್ಧ ಕೆಲಸ ಮಾಡಿದ್ದು ಮೀಸಲಾತಿಯನ್ನು ಕ್ರಮೇಣವಾಗಿ ಇಲ್ಲವಾಗಿಸುವ ಕೆಟ್ಟ ಉದ್ದೇಶವನ್ನು ಹೊಂದಿರುವುದು ಈ ಮೂಲಕ ಸ್ಪಷ್ಟವಾಗಿದೆ.
ಈ ಮೂಲಕ ಮಧ್ಯಂತರ ಬಜೆಟ್ ಎಂಬುದು ಯಾವುದೇ ರೀತಿಯಲ್ಲಿ ದೂರದೃಷ್ಟಿ ಇಲ್ಲದ ಮತ್ತು ವಿವರಗಳನ್ನು ಅರಿಯದೆ ಇರುವ ಬಹುಜನರ ಆಶೋತ್ತರಗಳನ್ನು ಮಣ್ಣುಪಾಲು ಮಾಡುವ ಬಜೆಟ್ ಆಗಿದ್ದು ಇದು ಸಾಮಾಜಿಕ ನ್ಯಾಯಕ್ಕೆ ಮತ್ತು ಅವರೇ ಹೇಳಿದ ಭರವಸೆಗಳಿಗೆ ವಿರುದ್ಧವಾಗಿರುವ ಸಂಗತಿಯಾಗಿದೆ.

You Might Also Like

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ

ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್

ಕರ್ನಾಟಕದಲ್ಲಿ ಕನ್ನಡ ವಾತಾವರಣವನ್ನು ನಿರ್ಮಾಣ ಮಾಡುವುದು ಅತ್ಯಂತ ಅವಶ್ಯಕ: ಸಿಎಂ ಸಿದ್ದರಾಮಯ್ಯ

ಮೈಸೂರು ಮಾರುಕಟ್ಟೆಗೆ ಪರಿಸರ ಸ್ನೇಹಿ ಇವಿ ಪೆಸೆಂಜರ್ ಹಾಗೂ ಗೂಡ್ಸ್ ಆಟೋ ಎಂಟ್ರಿ : ಬಿಬಿ ಮೋಟಾರ್ಸ್ ಗೆ ಮತ್ತೊಂದು ಗರಿ

ಎಲ್ಲರಲ್ಲೂ ಮನುಷ್ಯತ್ವ ಬೆಳೆಯಲಿ. ಸಹಿಷ್ಣುತೆ, ಪ್ರೀತಿ ವಿಶ್ವಾಸ ಬೆಳೆಯಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ

TAGGED: Mysuru Hcmahadevappa Budget2024 modi Amithsha Nirmalaseetharaman
admin February 2, 2024
Share this Article
Facebook Twitter Whatsapp Whatsapp LinkedIn Copy Link
Previous Article ಮದುವೆ ಮನೆಯಲ್ಲಿ ಮೋದಿ ಹವಾ ಮೋದಿ ಗೆದ್ದರೆ ದೇಶ ಗೆದ್ದಂತೆ !
Next Article ಬಂಡೆ ಒಡೆದಷ್ಟು ಸುಲಭವಲ್ಲ ದೇಶ ಒಡೆಯುವುದು : ಯತ್ನಾಳ್
Leave a comment Leave a comment

Leave a Reply Cancel reply

Your email address will not be published. Required fields are marked *

Join our group

Stay Connected

235.3k Followers Like
69.1k Followers Follow
56.4k Followers Follow
- Advertisement -
Ad imageAd image

Latest News

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ
ಜಿಲ್ಲೆ ಮೈಸೂರು ರಾಜ್ಯ September 8, 2025
ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್
ಜಿಲ್ಲೆ ಮೈಸೂರು ರಾಜ್ಯ September 7, 2025
ದಸರಾ ಉದ್ಘಾಟಕರ ಪರ ಪ್ರತಿಭಟನೆ
ಇತರೆ ಮೈಸೂರು September 6, 2025
ಕಾರ್ಮಿಕರ ಸ್ಥಳಕ್ಕೆಬಂದ ಕೈ ಶಾಸಕ ಧರಣಿಕೂರುವ ಎಚ್ವರಿಕೆ ಕೊಟ್ಟು ಕೆಂಡಾಮಂಡಲ!?
ಜಿಲ್ಲೆ ಮೈಸೂರು August 1, 2024

ರಾಜ್ಯ ರಾಜಕೀಯ, ಸಿನಿಮಾ ಸುದ್ದಿಗಳು, ಕ್ರೈಮ್ ಸ್ಟೋರಿಗಳು ಮೈಸೂರು ಸುತ್ತಮುತ್ತಲಿನ ಇಂಟ್ರೆಸ್ಟಿಂಗ್ ಸುದ್ದಿಗಳಿಗಾಗಿ ನೋಡ್ತಾ ಇರಿ ರಾಜ್ಯಧರ್ಮ ನ್ಯೂಸ್ ಸತ್ಯವೇ ನಮ್ಮ ಧರ್ಮ

Follow US

© 2023 Rajyadharma News. All Rights Reserved | Developed By Interwebplus.com

Removed from reading list

Undo
Welcome Back!

Sign in to your account

Lost your password?