ಮೈಸೂರು : 30 ವರ್ಷಗಳ ಹಳೆಯ ಪ್ರಕರಣದಲ್ಲಿ ಹಿಂದೂ ಕಾರ್ಯಕರ್ತರನ್ನು ಮತ್ತೆ ಬಂಧಿಸುತ್ತಿರುವುದನ್ನು ಖಂಡಿಸಿ ನಗರದ ಗಾಂಧಿಚೌಕದಲ್ಲಿ ಜಿಲ್ಲಾ ಬಿಜೆಪಿ ಪ್ರತಿಭಟನೆ ನಡೆಸಿತು.
ಮಾನವ ಸರಪಳಿ ನಿರ್ಮಿಸಿ ಕಾಂಗ್ರೆಸ್ ಸರ್ಕಾರದ ವಿರುದ್ದ ಘೊಷಣೆ ಕೂಗಿ ನಮ್ಮನ್ನು ಬಂಧಿಸಿ ಎಂದು ಸಿದ್ದರಾಮಯ್ಯ ವಿರುದ್ದ ಆಕ್ರೋಶ ಹೊರ ಹಾಕಿದರು.
1992ರಲ್ಲಿ ಘಟನೆಗೆ ಮತ್ತೆ ಮರುಜೀವ ನೀಡಲಾಗಿದೆ.
ಅಂದಿನ ರಾಮ ಜನ್ಮ ಭೂಮಿ ಹೋರಾಟದಲ್ಲಿ ನಾವು ಭಾಗಿಯಾಗಿದ್ದೇವೆ, ನಮ್ಮನ್ನು ಬಂಧಿಸಿ.
ಸಿದ್ದರಾಮಯ್ಯನವರೆ ನಿಮ್ಮ ಹೆಸರಿನಲ್ಲಿ ರಾಮ ಇದ್ದಾನೆ.
ರಾಮನ ರೀತಿ ವರ್ತನೆ ಮಾಡಿ ರಾವಣನ ರೀತಿ ನಡೆದುಕೊಳ್ಳಬೇಡಿ.ಡಿಕೆ ಶಿವಕುಮಾರ್, ಪರಮೇಶ್ವರ್ ಹೆಸರಿನಲ್ಲೂ ದೇವರಿದ್ದಾನೆ.ನಿಮ್ಮ ಹೆಸರುಗಳಿಗೆ ಮಾತ್ರ ದೇವರ ನಾಮ ಬೇಕು ಆಚರಣೆಗೆ ಬೇಡವೇ.
2013ರಲ್ಲಿ ನಿಮ್ಮದೇ ಸರ್ಕಾರವಿತ್ತು ಆಗ ಯಾಕೆ ಮರು ತನಿಖೆ ಮಾಡಲಿಲ್ಲ.22ಕ್ಕೆ ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿದೆ.
ಇಂತಹ ವೇಳೆಯಲ್ಲಿ ಕರಸೇವಕರನ್ನ ಬಂಧಿಸಿರುವುದು ಸರಿಯೇ.ನಾವೆಲ್ಲರೂ ಜೈಲಿಗೆ ಹೋಗುತ್ತೇವೆ ನೀವೇ ಮಂತ್ರಾಕ್ಷತೆ ಹಂಚಿ ಎಂದು ಕಾಂಗ್ರೆಸ್ ನಾಯಕರಿಗೆ ಶಾಸಕ ಶ್ರೀವತ್ಸ ಸವಾಲ್ ಹಾಕಿದರು