ಮೈಸೂರು : ದೇಶದ ಪ್ರಧಾನಿ ಆಗುವ ಅರ್ಹತೆ,ಜನ ಬೆಂಬಲ ಮೋದಿ ಬಿಟ್ಟರೆ,ಇನ್ಯಾರಿಗೂ ಇಲ್ಲ.
ಮೋದಿಗೆ ಪರ್ಯಾಯ ನಾಯಕ ದೇಶದಲ್ಲಿ ಇನ್ಯಾರು ಇಲ್ಲ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಹಿರಿಯ ಶಾಸಕ ಜಿಟಿ ದೇವೇಗೌಡ ಹೇಳಿದರು.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 21 ನೇ ಶತಮಾನದ ಆಧುನಿಕ ಯುಗದಲ್ಲಿ ದೇಶದ ಏಕತೆ,ಅಖಂಡತೆ,ದೇಶದ ರಕ್ಷಣೆ ಮತ್ತು ಅಭಿವೃದ್ಧಿಗೆ ಮೋದಿ ಅವರಿಂದಲೇ ಸಾಧ್ಯ.
ಇನ್ನಯಾರು ಅವರಿಗೆ ಸಮಾನರಿಲ್ಲ. ಅವರನ್ನ ಮತ್ತೆ ಪ್ರಧಾನಿಯಾಗಿಸುವ ಒಂದೇ ಒಂದು ಗುರಿ ಬಿಟ್ಟರೆ ಬೇರೇನು ಇಲ್ಲ.ನಮಗೆ ಎಷ್ಟು ಸ್ಥಾನ ಬೇಕು ಬೇಡ ಅನ್ನೋದು ಮುಖ್ಯ ಅಲ್ಲ ಈ ರಾಷ್ಟ್ರಕ್ಕೆ ಮೋದಿ ಅವರ ನೇತೃತ್ವ ಬೇಕು.ಅದಕ್ಕಾಗಿ ನಾವು ನಮಗೆ ಇಷ್ಟು ಸೀಟು ಬೇಕು ಬೇಡ ಅಂತ ಬೇಡಿಕೆ ಇಟ್ಟಿಲ್ಲ.ಈಗಾಗಲೇ ಕೆಲ ಕ್ಷೇತ್ರಗಳ ಬಿಟ್ಟುಕೊಡಲು ಒಪ್ಪಿಗೆ ಸೂಚಿಸಿದ್ದಾರೆ.
ನಮ್ಮ ಪಕ್ಷ ಎಲ್ಲೆಲ್ಲಿ ಶಕ್ತಿಯುತವಾಗಿದೆ ಅಲ್ಲಿ ನಾವು ಸ್ಪರ್ಧೆ ಮಾಡುತ್ತೇವೆ.ಗೆಲ್ಲುವ ಪ್ರಯತ್ನ ಮಾಡಿ ಮೋದಿ ಅವರನ್ನು ಪ್ರಧಾನಿ ಮಾಡುವುದು ನಮ್ಮ ಏಕೈಕ ಗುರಿ ಎನ್ನುವ ಮೂಲಕ ಪ್ರಧಾನಿ ಮೋದಿಗೆ ಜಿಟಿಡಿ ಬಹುಪರಾಕ್ ಹೇಳಿದ್ದಾರೆ
ಜಾತ್ಯಾತೀತ ಅಂದರೆ ಏನು? ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಜಾತ್ಯಾತೀತವಾಗಿ ಉಳಿದಿಲ್ಲ ಎಂಬ ಕಾಂಗ್ರೆಸ್ ನಾಯರಿಗೆ ಜಿ ಟಿ ದೇವೇಗೌಡ ತಿರುಗೇಟು ಕೊಟ್ಟಿದ್ದಾರೆ. ಜಾತ್ಯಾತೀತ ಅಂದರೆ ಏನು? ಮೊದಲು ಹೇಳಿ. ಸಿದ್ದರಾಮಯ್ಯ ಜೊತೆ ಕುರುಬರು, ದೇವೇಗೌಡರ ಜೊತೆ ಒಕ್ಕಲಿಗರು, ಯಡಿಯೂರಪ್ಪ ಜೊತೆ ಲಿಂಗಾಯತರು, ಮಲ್ಲಿಕಾರ್ಜುನಖರ್ಗೆ ಜೊತೆ ದಲಿತರು ಮಾತ್ರ ಇರೋದು ಜಾತ್ಯಾತೀತಾನ. ?
ಜಾತ್ಯಾತೀತ ಅಂದರೆ ಏನು? ಎಂದು ಜಾತ್ಯಾತೀತ ಪದದ ಕುರಿತು ಶಾಸಕ ಜಿ ಟಿ ದೇವೇಗೌಡ ಹರಿಹಾಯ್ದರು.