ಮೈಸೂರು : ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣಕ್ಕೆ ಸಂಭಂದಿಸಿದಂತೆ ಮೈಸೂರಿನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳ ಕಾರ್ಯಾಚರಣೆ ಮುಂದುವರೆದಿದೆ.
ಮೈಸೂರಿನ ಶ್ರೀದೇವಿ ನರ್ಸಿಂಗ್ ಹೋಮ್ಗೆ ಬೀಗ ಹಾಕಲಾಗಿದ್ದು, ಬೋಗಾದಿ ಬಡಾವಣೆಯಲ್ಲಿರುವ ನರ್ಸಿಂಗ್ ಹೋಮ್ ಕೆಪಿಎಂಇ ಅನುಮತಿ ಪತ್ರ ಇಲ್ಲದಿರುವುದು ಕಂಡು ಬಂದಿದೆ.
ಅಂಕಿ ಅಂಶಗಳ ನಿಖರ ಮಾಹಿತಿ ದಾಖಲೆ ಹಿನ್ನೆಲೆ ಬಂದ್ ಮಾಡಲಾಗಿದೆ. ಭ್ರೂಣ ಪತ್ತೆ ಸ್ಕ್ಯಾನಿಂಗ್ ಯಂತ್ರದ ಬಗ್ಗೆಯೂ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ
ಅನುಮತಿ ಪಡೆದಿರುವ ಯಂತ್ರ ಬಿಟ್ಟು ಬೇರೆ ಯಂತ್ರ ಬಳಸುತ್ತಿರುವ ಆರೋಪ ಸಹ ಕೇಳಿ ಬಂದಿದೆ.
ಸ್ತ್ರೀರೋಗ ತಜ್ಞ ವೈದ್ಯರ ಭೇಟಿಯ ಬಗ್ಗೆಯೂ ಗೊಂದಲ
ಈ ಎಲ್ಲಾ ವಿಚಾರಗಳ ಬಗ್ಗೆ ದಾಖಲೆ ನೀಡದ ಹಿನ್ನೆಲೆ ನರ್ಸಿಂಗ್ ಹೋಮ್ ಬಂದ್ ಮಾಡಲು ಸೂಚನೆ ನೀಡಲಾಗಿದೆ.ಅಲ್ಲದೆ ದಾಖಲೆ ನೀಡಿದ ನಂತರ ಕ್ರಮದ ಬಗ್ಗೆ ಪರಿಶೀಲನೆ ನಡೆಸುತ್ತೇವೆ ಎಂದು ಆರೋಗ್ಯ ಇಲಾಖೆ ರಾಜ್ಯ ಯೋಜನಾ ನಿರ್ದೇಶಕ ಡಾ ಶ್ರೀನಿವಾಸ್ ಹೇಳಿದ್ದಾರೆ