ಚಾಮರಾಜನಗರ : ಬೆಂಗಳೂರಿನ ಕಾರ್ಮಿಕ ಇಲಾಖೆಯ ಉಪ ನಿರ್ದೇಶಕ ಶ್ರೀನಿವಾಸ್ ರವರ ಮನೆ ಹಾಗೂ ತೋಟದ ಮನೆಯ ಮೇಲೆ ಲೋಕಾಯುಕ್ತರು ದಾಳಿ ನಡೆಸಿದ ಬೆನ್ನ ಹಿಂದೆಯೇ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಉಪ್ಪಾರ ಮೋಳೆಯಲ್ಲಿರುವ ಶ್ರೀನಿವಾಸ್ ರವರ ಸಂಬಂಧಿಕರ ಮನೆಯ ಮೇಲೂ ಲೋಕಾಯುಕ್ತರು ದಾಳಿ ನಡೆಸಿದ ಪರಿಶೀಲನೆ ನಡೆಸುತ್ತಿದ್ದಾರೆ.
ಕೊಳ್ಳೇಗಾಲ ಪಟ್ಟಣದ ಉಪ್ಪಾರ ಮೋಳೆ ಬಡಾವಣೆಯ ನಿವಾಸಿ ಮಾಜಿ ನಗರಸಭಾ ನಾಮ ನಿರ್ದೇಶನ ಸದಸ್ಯ ನಟರಾಜ್ ರವರ ಮನೆಯ ಮೇಲೆ ಲೋಕಾಯಕ್ತರು ಸೋಮವಾರ ಬೆಳಗ್ಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಲೋಕಾಯುಕ್ತರಿಗೆ ನಟರಾಜು ಮತ್ತು ಕುಟುಂಬದವರು ಸಹಕಾರ ನೀಡಿದರು. ಇದಲ್ಲದೆ ಸತ್ತೇಗಾಲದಲ್ಲಿರುವ ತೋಟದ ಮನೆಯ ಮೇಲೂ ಸಹ ಲೋಕಾಯುಕ್ತರು ದಾಳಿ ನಡೆಸಿ ಪರಿಶೀಲನೆ ನಡೆಸಿದರು.