ಮೈಸೂರು : ಮಹಿಷ ದಸರಾ ನಿಲ್ಲಿಸುವಂತೆ ಮೊಕದ್ದಮೆ ವಿಚಾರಕ್ಕೆ ದಸರಾ ಆಚರಣಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಪ್ರತಿಕ್ರಿಯೆ ನೀಡಿದ್ದಾರೆ.
ಅ.10 ರಂದು ನ್ಯಾಯಾಲಯದಿಂದ ಸಮನ್ಸ್ ಬಂದಿತ್ತು.
ನಿನ್ನೆ ಸಮನ್ಸ್ ಸ್ವೀಕರಿಸಿದ್ದೆ.ಅದರಂತೆ ಇಂದು ನ್ಯಾಯಾಲಯಕ್ಕೆ ಹಾಜರಾಗಿದ್ದೆ.
ವಿಚಾರಣೆ ವೇಳೆ ವಕೀಲರನ್ನು ನೇಮಿಸಿದ್ದೀರ ಎಂದು ಕೇಳಿದರು.ವಕೀಲರನ್ನು ನೇಮಿಸಲು ಕಾಲಾವಕಾಶ ಕೋರಿದೆ.ವಕೀಲರ ಸಮೇತ ಬರುವಂತೆ ನ್ಯಾಯಾಧೀಶರು ದಿನಾಂಕ ನಿಗದಿಸಿದರು.ಯಾವುದೇ ವಿಚಾರಣೆ ನಡೆದಿಲ್ಲ.
ಮುಂದಿನ ದಿನಗಳಲ್ಲಿ ಪ್ರಕರಣ ಹೈಕೋರ್ಟ್ಗೆ ಹೋಗಬಹುದು.ಏನಾಗುತ್ತೋ ನೋಡೋಣ ಎಂದರು.
ಪೂರ್ವ ನಿಗದಿಯಂತೆ ಮಹಿಷ ದಸರಾ ಆಚರಿಸುತ್ತೇವೆ.
ಪೋಲಿಸ್ ಇಲಾಖೆ ಏಕಮುಖ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ.ನಾವು ಈಗಾಗಲೇ ಸುಮಾರು 10 ಜಿಲ್ಲೆಗಳಿಂದ ಜನರು ಬರುವಂತೆ ಆಹ್ವಾನ ನೀಡಿದ್ದೇವೆ.
ಅವರೆಲ್ಲರು ಬರುತ್ತಾರೆ ನಾವು ಅಂದು
ಪುಷ್ಪಾರ್ಚನೆಗೆ ಅವಕಾಶ ಮಾಡಲು ಹೋಗೇ ಹೋಗುತ್ತೇವೆ.ಮಹಿಷ ದಸರಾ ಸಮಿತಿ ಅಧ್ಯಕ್ಷ ಪುರುಷೋತ್ತಮ್ ಹೇಳಿಕೆ.