• ಇತ್ತೀಚಿನ
  • ರಾಜ್ಯ
  • ರಾಜಕೀಯ
  • ಜಿಲ್ಲೆ
    • ಉಡುಪಿ
    • ಉತ್ತರಕನ್ನಡ
    • ಕಲ್ಬುರ್ಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೆಂಗಳೂರು ಗ್ರಾಮಾಂತರ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ದೇಶ
  • ಪ್ರಪಂಚ
  • ಸಿನಿಮಾ
  • ಕ್ರೀಡೆ
  • ಇತರೆ
  • E-paper
Reading: ಕಬಿನಿ ಜಲಾಶಯ ಮುತ್ತಿಗೆಗೆ ರೈತರ ಯತ್ನ
Share
Aa
Rajyadharma NewsRajyadharma News
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಅಪರಾಧ
  • ಪ್ರವಾಸ
  • ವಿಜ್ಞಾನ
  • ತಂತ್ರಜ್ಞಾನ
  • ಫ್ಯಾಷನ್
Search
  • Home
  • Categories
    • ರಾಜಕೀಯ
    • ಸಿನಿಮಾ
    • ತಂತ್ರಜ್ಞಾನ
    • ಪ್ರವಾಸ
    • ಫ್ಯಾಷನ್
    • ವ್ಯವಹಾರ
    • ವಿಜ್ಞಾನ
    • ಆರೋಗ್ಯ
  • ಜಿಲ್ಲೆ
    • ಮೈಸೂರು
    • ಮಂಡ್ಯ
    • ಚಾಮರಾಜನಗರ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
Follow US
  • Advertise
© 2022 Foxiz News Network. Ruby Design Company. All Rights Reserved.
Rajyadharma News > Blog > ಜಿಲ್ಲೆ > ಮೈಸೂರು > ಕಬಿನಿ ಜಲಾಶಯ ಮುತ್ತಿಗೆಗೆ ರೈತರ ಯತ್ನ
ಜಿಲ್ಲೆಮೈಸೂರು

ಕಬಿನಿ ಜಲಾಶಯ ಮುತ್ತಿಗೆಗೆ ರೈತರ ಯತ್ನ

admin
Last updated: 2023/09/29 at 11:22 AM
admin
Share
3 Min Read
SHARE

– ಬೈಕ್ ರ್ಯಾಲಿ ಮೂಲಕ ಕಬಿನಿ ಜಲಾಶಯ ಮುತ್ತಿಗೆ !?

ಮೈಸೂರು : ಇಂದು ಕರ್ನಾಟಕ ಜಲ ಸಂರಕ್ಷಣಾ ಸಮಿತಿಯ ಮೈಸೂರು ಜಿಲ್ಲಾ ವತಿಯಿಂದ ಬೈಕ್ ರ್ಯಾಲಿ ಮೂಲಕ ಕಬಿನಿ ಜಲಾಶಯಕ್ಕೆ ಮುತ್ತಿಗೆ ಹಾಕಲಾಯಿತು

ಮೈಸೂರಿನ ಗನ್ ಹೌಸ್ ಬಳಿ ಸುಮಾರು ನೂರಕ್ಕೂ ಹೆಚ್ಚು ಬೈಕ್ ಗಳಲ್ಲಿ ಬಂದ ರೈತರು ತಮಿಳುನಾಡಿಗೆ ಕಬಿನಿ ಜಲಾಶಯದಿಂದ ನೀರು ಹರಿಸುತ್ತಿರುವುದನ್ನು ಖಂಡಿಸಿ ನೀರಾವರಿ ಮಂತ್ರಿ ಮುಖ್ಯಮಂತ್ರಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ತಕ್ಕಡಿಯನ್ನು ಹಿಡಿದುಕೊಂಡು ಒಂದು ಕಡೆ ಸರ್ಕಾರಗಳು ಇನ್ನೊಂದು ಕಡೆ ರೈತರ ಹಸಿರು ಶಾಲು ಹಾಕಿ ಯಾವಾಗಲೂ ತಮಿಳುನಾಡು ರಾಜ್ಯದ ಪರವಾಗಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಯನಿರ್ವಹಿಸಿ ಪ್ರತಿ ವರ್ಷವೂ ರಾಜ್ಯದ ರೈತರಿಗೆ ಹಾಗೂ ಜನರಿಗೆ ನ್ಯಾಯ ಕೊಡಿಸುವಲ್ಲಿ ಹಾಗೂ ನೀರು ಉಳಿಸಿಕೊಳ್ಳುವಲ್ಲಿ ವಿಫಲವಾಗುತ್ತಿದೆ ಎಂದು ಅಣುಕು ಪ್ರದರ್ಶನ ಮಾಡಿದರು.


ಬೆಳಿಗ್ಗೆ 11:30ಕ್ಕೆ ಹೊರಟ ಬೈಕ್ ರ್ಯಾಲಿ ಅಗ್ರಹಾರ ಸಿದ್ದಪ್ಪ ಸ್ಕ್ವೇರ್ ನಂಜು ಮಳಿಗೆ ಸಿಲ್ಕ್ ಫ್ಯಾಕ್ಟರಿ ಪಾಳ್ಯ ಶಿವಪುರ ಮಾರ್ಗವಾಗಿ ಶ್ರೀರಾಂಪುರ ರಿಂಗ್ ರಸ್ತೆ ತಲುಪಿ ಅಲ್ಲಿಂದ ಹೆಚ್‍ ಡಿ ಕೋಟೆ ರಸ್ತೆಯ ಮೂಲಕ ಹೋಗುವ ದಾರಿ ಮಧ್ಯೆ ಜಯಪುರದ ಸರ್ಕಲ್ ನಲ್ಲಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬರಡನಪುರ ನಾಗರಾಜ್ ಈಗಾಗಲೇ ರಾಜ್ಯ ಸರ್ಕಾರ ರೈತರ ಬೆಳೆಗಳಿಗೆ ಮರಣ ಶಾಸನ ಬರೆದಿದ್ದು ರೈತರಿಗೆ ಸಂಕಷ್ಟ ತಂದಿದ್ದಾರೆ ಇನ್ನುಳಿದಿರುವ ನೀರನ್ನಾದರೂ ಜನ ಜಾನುವಾರುಗಳಿಗೆ ಕುಡಿಯಲು ನೀರನ್ನು ಉಳಿಸಿಕೊಳ್ಳಬೇಕು ಈಗಾಗಲೇ ಈ ಭಾಗದ ಹಳ್ಳಿಗಳಿಗೆ ಕಬಿನಿ ನೀರನ್ನು ಎರಡು ದಿನಕ್ಕೊಮ್ಮೆ ಬಿಡುತ್ತಿದ್ದಾರೆ ಆದ್ದರಿಂದ ಎಲ್ಲರೂ ಈ ನಮ್ಮ ಹೋರಾಟಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡರು.


ಅಲ್ಲಿಂದ ಕಬಿನಿ ಜಲಾಶಯಕ್ಕೆ ತಲುಪಿ 2002ರಲ್ಲಿ ಕಬಿನಿ ನೀರಿಗಾಗಿ ಹೋರಾಟ ಮಾಡುವ ವೇಳೆ ಹುತಾತ್ಮರಾದ ದಿವಂಗತ ರೈತ ಗುರುಸ್ವಾಮಿ ರವರ ಪುತ್ತಳಿಗೆ ಮಾಲಾರ್ಪಣೆ ಮಾಡಿ ನಂತರ ಮುತ್ತಿಗೆ ಹಾಕಲು ಯತ್ನಿಸಿದ ಹೋರಾಟಗಾರರನ್ನು ಪೊಲೀಸರು ತಡೆದಾಗ ಕಿರಗಸೂರು ಶಂಕರ್ ಮಾತನಾಡಿ ನಾವು ಬಂದಿರುವುದು ನಮ್ಮ ನೀರನ್ನು ಉಳಿಸಿಕೊಳ್ಳಲು ತಡೆಯಲು ನೀವು ಯಾರು? ಇಲ್ಲಿ ಕೆಲಸ ಮಾಡುವ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸಿದರೆ ನಾವು ಏಕೆ ಬರುತ್ತಿದ್ದೆವು? ನಾವೇ ನೀರನ್ನು ತಡೆದಿಟ್ಟುಕೊಳ್ಳುತ್ತೇವೆ ಬೇಕಾದರೆ ನೀವು ನಮ್ಮ ಜೊತೆಗೆ ಸಹಕಾರ ನೀಡಿ ಇದೇ ರೀತಿ 2002ರಲ್ಲಿ ಕಬಿನಿ ನೀರನ್ನು ತಮಿಳುನಾಡಿಗೆ ಬಿಡಬಾರದೆಂದು ಹೋರಾಟ ಮಾಡಿದಾಗ ಸರ್ಕಾರ ಎಚ್ಚೆತ್ತುಕೊಂಡಿದ್ದರೆ ನಮ್ಮ ರೈತ ಗುರುಸ್ವಾಮಿ ರವರು ಬಲಿಯಾಗುತ್ತಿರಲಿಲ್ಲ ಆದ್ದರಿಂದ ಪದೇಪದೇ ಇದೇ ರೀತಿ ನಮ್ಮ ರಾಜ್ಯದ ರೈತರಿಗೆ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ ಎಂದು ಆಕ್ರೋಷ ವ್ಯಕ್ತಪಡಿಸಿದರು.


ಸ್ಥಳದಲ್ಲಿದ್ದ ತಾಲೂಕು ದಂಡಾಧಿಕಾರಿ ಸಣ್ಣ ರಾಮಯ್ಯ ರಾಜ್ಯ ಸರ್ಕಾರ 144 ಸೆಕ್ಷನ್ ವಿಧಿಸಿರುವುದರಿಂದ ತಾವುಗಳು ದಯವಿಟ್ಟು ಸಹಕಾರ ನೀಡಬೇಕೆಂದು ಪ್ರತಿಭಟನಾಕಾರರಿಗೆ ಮನವಿ ಮಾಡಿಕೊಂಡರು
ಸ್ಥಳದಲ್ಲೇ ಇದ್ದ ಕಾರ್ಯಪಾಲಕ ಅಭಿಯಂತರರಾದ ಚಂದ್ರಶೇಖರ್ ರವರನ್ನು ತರಾಟೆಗೆ ತೆಗೆದುಕೊಂಡಾಗ ಅವರು ಮಾತನಾಡಿ ನಾವು ಕೇವಲ 1500 ಕ್ಯೂಸೆಸ್ ನೀರನ್ನು ಹುಲ್ಲಳ್ಳಿ ರಾಂಪುರ ನಾಲೆಗಳ ಮೂಲಕ ಹರಿಸುತ್ತಿದ್ದೇವೆ ಎಂದು ತಿಳಿಸಿದಾಗ ರೈತರು ಅಕ್ರೋಶಗೊಂಡು ಒಂದು ಹನಿ ನೀರನ್ನು ಬಿಡುವುದು ಬೇಡ ಈಗಾಗಲೇ ರೈತರ ಬೆಳೆ ನಾಶವಾಗಿದೆ ನಿಮ್ಮ ನಾಟಕ ಬೇಡ ಎಂದು ಪೊಲೀಸರ ಸರ್ಪಗಾವಲನ್ನು ಭೇದಿಸಿ ನುಗ್ಗಲು ಯತ್ನಿಸಿದಾಗ ಸುಮಾರು ನೂರಕ್ಕೂ ಹೆಚ್ಚು ಜನ ರೈತರನ್ನು ಬಂಧಿಸಿ ಸಂಜೆ ವೇಳೆ ಬಿಡುಗಡೆಗೊಳಿಸಿದರು


ಬೈಕ್ ರ್ಯಾಲಿಯಲ್ಲಿ ಜಿಲ್ಲಾಧ್ಯಕ್ಷರಾದ ಪಿ ಸೋಮಶೇಖರ್,ಜಿಲ್ಲಾ ಉಪಾಧ್ಯಕ್ಷರಾದ ಪಟೇಲ್ ಶಿವಮೂರ್ತಿ, ಕೆರೆಹುಂಡಿ ರಾಜಣ್ಣ, ತಾಲೋಕು ಅಧ್ಯಕ್ಷರುಗಳಾದ ಬಿದರಹಳ್ಳಿ ಮಾದಪ್ಪ, ಹಂಪಾಪುರ ರಾಜೇಶ್, ಕುರುಬೂರು ಸಿದ್ದೇಶ್, ಕೆಂಡಗಣ್ಣ ಸ್ವಾಮಿ, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ರಂಗಯ್ಯ, ಹನುಮಯ್ಯ, ಕಬ್ಬು ಬೆಳೆಗಾರರ ಸಂಘದ ಮುಖಂಡರುಗಳಾದ ಕೋಟೆ ಸುನಿಲ್ ಅಂಬಳೆ ಮಂಜುನಾಥ, ವರಕೋಡು ನಾಗೇಶ್, ಹಿರೇನಂದಿ ಮಾದೇವಪ್ಪ, ಚುಂಚುರಾಯನಹುಂಡಿ ಸಿದ್ದರಾಮ, ಗಿರೀಶ್, ನಂಜುಂಡಪ್ಪ, ಸೋಮಶೇಖರ್, ಮಾದೇವಸ್ವಾಮಿ, ಪ್ರಕಾಶ್, ಕಾಟೂರು ಮಾದೇವಸ್ವಾಮಿ, ಶ್ರೀಕಂಠ, ನಾಗೇಶ್, ಮಾರ್ಬಳ್ಳಿ ನೀಲಕಂಠಪ್ಪ, ಸಾತಗಳ್ಳಿ ಬಸವರಾಜ್,ಅಪ್ಪಣ್ಣ, ತರಕಾರಿ ಲಿಂಗರಾಜು, ಪರಶಿವಮೂರ್ತಿ, ಹೆಗ್ಗೋಟಾರ ಶಿವಸ್ವಾಮಿ, ಉಡಿಗಾಲ ಗುರುಪ್ರಸಾದ್, ರೇವಣ್ಣ, ಸುಂದರಪ್ಪ,ರಾಜು ಸುರೇಶ್ ನೆಲ್ಲಿ ಮಂಟೇಲಿಂಗು, ಕುಪ್ಯಾ ಪುಟ್ಟಸ್ವಾಮಿ, ಯಾಕನೂರ್ ರಾಜೇಶ್ ಮಲೇಶ್ ಶಂಬು ನಾಗೇಶ್ ಹೆಗ್ಗೂರು ರಂಗರಾಜು ನೀಲಸೋಗೆ ನಾಗರಾಜು, ಬಸವಲಿಂಗ, ಗುರು, ಶಿವಕುಮಾರ್, ಸತೀಶ್, ಹೇಮಂತ್, ಲಿಂಗಣ್ಣ , ಹೊಸಹೂಳಲು ಬೈರೇಗೌಡ, ಉಮೇಶ್, ಮಾದೇವ, ಸೇರಿದಂತೆ ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು

You Might Also Like

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ

ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್

ದಸರಾ ಉದ್ಘಾಟಕರ ಪರ ಪ್ರತಿಭಟನೆ

ಕಾರ್ಮಿಕರ ಸ್ಥಳಕ್ಕೆಬಂದ ಕೈ ಶಾಸಕ ಧರಣಿಕೂರುವ ಎಚ್ವರಿಕೆ ಕೊಟ್ಟು ಕೆಂಡಾಮಂಡಲ!?

ಚುಂಚನಕಟ್ಟೆ ಜಲಪಾತದ ಮೆರಗು

TAGGED: Mysuru Kaveriwater Krs Kabini HDkote
admin September 29, 2023
Share this Article
Facebook Twitter Whatsapp Whatsapp LinkedIn Copy Link
Previous Article ಕಾವೇರಿ ಹೋರಾಟಕ್ಕೆ ಪತ್ರಕರ್ತರ ಬೆಂಬಲ ಮೌನ ಪ್ರತಿಭಟನೆ
Next Article ಬಾಲಕಿ ನೇಣುಬಿಗಿದು ಆತ್ಮಹತ್ಯೆ
Leave a comment Leave a comment

Leave a Reply Cancel reply

Your email address will not be published. Required fields are marked *

Join our group

Stay Connected

235.3k Followers Like
69.1k Followers Follow
56.4k Followers Follow
- Advertisement -
Ad imageAd image

Latest News

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ
ಜಿಲ್ಲೆ ಮೈಸೂರು ರಾಜ್ಯ September 8, 2025
ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್
ಜಿಲ್ಲೆ ಮೈಸೂರು ರಾಜ್ಯ September 7, 2025
ದಸರಾ ಉದ್ಘಾಟಕರ ಪರ ಪ್ರತಿಭಟನೆ
ಇತರೆ ಮೈಸೂರು September 6, 2025
ಕಾರ್ಮಿಕರ ಸ್ಥಳಕ್ಕೆಬಂದ ಕೈ ಶಾಸಕ ಧರಣಿಕೂರುವ ಎಚ್ವರಿಕೆ ಕೊಟ್ಟು ಕೆಂಡಾಮಂಡಲ!?
ಜಿಲ್ಲೆ ಮೈಸೂರು August 1, 2024

ರಾಜ್ಯ ರಾಜಕೀಯ, ಸಿನಿಮಾ ಸುದ್ದಿಗಳು, ಕ್ರೈಮ್ ಸ್ಟೋರಿಗಳು ಮೈಸೂರು ಸುತ್ತಮುತ್ತಲಿನ ಇಂಟ್ರೆಸ್ಟಿಂಗ್ ಸುದ್ದಿಗಳಿಗಾಗಿ ನೋಡ್ತಾ ಇರಿ ರಾಜ್ಯಧರ್ಮ ನ್ಯೂಸ್ ಸತ್ಯವೇ ನಮ್ಮ ಧರ್ಮ

Follow US

© 2023 Rajyadharma News. All Rights Reserved | Developed By Interwebplus.com

Removed from reading list

Undo
Welcome Back!

Sign in to your account

Lost your password?