ಮೈಸೂರು : ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರದಲ್ಲಿ ಕೇಂದ್ರ ಹಾಗು ರಾಜ್ಯದ ನಾಯಕರು ನಿರ್ಧಾರ ಮಾಡಲಿದ್ದಾರೆ
ಈ ವಿಚಾರ ಯಡಿಯೂರಪ್ಪ ಅವರ ಬಾಯಿಯಿಂದ ಬಂದಿದೆ ಎಂದರೆ ಸತ್ಯವಿದೆ ಎಂದು ಅರ್ಥ ಎಂದು ಶಾಸಕ ಶ್ರೀವತ್ಸ ಹೇಳಿದರು.
ಮೈತ್ರಿ ಬಗ್ಗೆ ಬಿಜೆಪಿಯಲ್ಲಿ ಯಾವುದೇ ರೀತಿಯ ಅಸಮಾಧಾನ ಇಲ್ಲ.ಇದನ್ನು ಸ್ವಾಗತ ಮಾಡುತ್ತೇವೆ.
ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆದಿರುವುದು ನಮ್ಮ ಗಮನಕ್ಕೆ ಬಂದಿಲ್ಲ.ವಿರೋಧಿಗಳೆಲ್ಲರೂ ಒಂದಾಗಿದ್ದಾರೆ.
ಹಾಗಾಗಿ ಪಕ್ಷ ಹಾಗು ದೇಶದ ಹಿತದೃಷ್ಟಿಯಿಂದ ಬಿಜೆಪಿ-ಜೆಡಿಎಸ್ ಮೈತ್ರಿಯಾದರೆ ಒಳಿತು.
ಏಕೆಂದರೆ ಒಂದೊಂದು ಕ್ಷೇತ್ರದ ಗೆಲುವು ಮುಖ್ಯವಾಗಿದೆ.
ಎರಡು ಪಕ್ಷಗಳ ಮೈತ್ರಿಯಾದರೆ ಸಹಜವಾಗಿಯೇ ಬಲ ಹೆಚ್ಚಲಿದೆ ಎಂದರು.
ಹೆಚ್ ಡಿ ದೇವೇಗೌಡ- ಬಿ ಎಸ್ ಯಡಿಯೂರಪ್ಪ ಅವರಿಗೆ ಹೆಚ್ಚಿನ ಪ್ರಭಾವವಿದೆ.ಇಬ್ಬರೂ ಒಂದಾದರೆ ಬಲ ಹೆಚ್ಚಲಿದೆ.
ಮೈತ್ರಿ ಕೇವಲ ಲೋಕಸಭೆ ಚುನಾವಣೆಗೆ ಸೀಮಿತವಾಗಬಾರದು.ಮುಂಬರುವ ಪಾಲಿಕೆ ಸೇರಿದಂತೆ ಎಲ್ಲಾ ಹಂತದ ಚುನಾವಣೆಗೂ ಮೈತ್ರಿ ಮುಂದುವರಿಯಬೇಕು.ಎರಡು ಪಕ್ಷಗಳ ಮೈತ್ರಿಯ ಜೊತೆಗೆ ತಳಮಟ್ಟದಲ್ಲಿ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಒಗ್ಗೂಡಿಸಬೇಕು.ಎರಡು ಪಕ್ಷಗಳ ಕಾರ್ಯಕರ್ತರು ಒಂದಾಗಬೇಕು.ಆಗ ಮಾತ್ರ ಬಿಜೆಪಿ-ಜೆಡಿಎಸ್ ಮೈತ್ರಿ ಯಶಸ್ವಿಯಾಗಲಿದೆ ಎಂದರು