ಮೈಸೂರು : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಜಿಲ್ಲಾಧಿಕಾರಿ ಕಚೇರಿಗೆ ರೈತರ ಮುತ್ತಿಗೆ ಚಳವಳಿ ನಡೆಸಿದ್ದಾರೆ .
ಲಲಿತ ಮಹಾಲ್ ಮೈದಾನದಿಂದ ಡಿ.ಸಿ ಕಚೇರಿ ವರೆಗೆ ಮೆರವಣಿಗೆ ಮಾಡಲಾಯಿತು. ರಾಜ್ಯ ರೈತ ಸಂಘಗಳ ಒಕ್ಕೂಟ ಮತ್ತು ರಾಜ್ಯ ಕಬ್ಬು ಬೆಳಗಾರರ ಸಂಘದ ವತಿಯಿಂದ ರೈತ ಮುಖಂಡ ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಪ್ರತಿಭಟನಾ ಧರಣಿ ಹಮ್ಮಿಕೊಂಡಿದ್ದರು.
ಕಬ್ಬಿನ ಬಾಕಿ 150 ರೂ, ಕೃಷಿ ಪಂಪ್ ಸೆಟ್ಗಳಿಗೆ ನಿರಂತರ ವಿದ್ಯುತ್ ಪೂರೈಕೆ, ನಾಲೆಗಳಿಗೆ ನೀರು ಬಿಡುವುದು, ಕಬ್ಬಿನ ಎಫ್.ಆರ್.ಪಿ ದರದ ಆಧಾರ ಮೇಲೆ ಕಾರ್ಖಾನೆಗಳು ಹಣ ನೀಡಬೇಕು ಎಂಬ ಹಲವು ಬೇಡಿಕೆಗಳ ಈಡೇರಿಕೆಗೆ ರೈತರು ಆಗ್ರಹಿಸಿದರು.
ಸರ್ಕಾರದ ಗಮನ ಸೆಳೆಯಲು ಇಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ರೈತರ ಯತ್ನ. ಮಾಡಿದ ರೈತರನ್ನು ಪೋಲಿಸರು ತಡೆದರು. ಈ ವೇಳೆ
ಪೋಲಿಸ್ ಮತ್ತು ರೈತರ ನಡುವೆ ಮಾತಿನ ಚಕಮಕಿ ಉಂಟಾಯಿತು ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಬರುವಂತೆ ರೈತರ ಪಟ್ಟು ಹಿಡಿದರು. ನಂತರ ಜಿಲ್ಲಾಧಿಕಾರಿ ರಾಜೇಂದ್ರ ರೈತರೊಂದಿಗೆ ಮಾತನಾಡಿದ ಸಭೆ ನಡೆಸಲು ಮುಂದದಾಗ ರೈತರು ಸಮಾಧಾನಗೊಂಡರು