ಮೈಸೂರು : ಮುಂದಿನ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆ ಜಾರಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ವಕೀಲರ ರಾಜ್ಯಮಟ್ಟದ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಕೂಡ ವಕೀಲನಾಗಿ ಸೇವೆ ಸಲ್ಲಿಸಿದವನು.ಮೈಸೂರು ಬಾರ್ ನಲ್ಲೇ ಪ್ರಾಕ್ಟೀಸ್ ಮಾಡಿದವನು.14 ವರ್ಷಗಳ ನಂತರ ತವರು ಜಿಲ್ಲೆಯಲ್ಲಿ ಸಮಾವೇಶ ನಡೆಯುತ್ತಿದೆ.ವಕೀಲ ವೃತ್ತಿ ನೆನೆದು ನನಗೆ ಅತೀವ ಸಂತಸ ಎಂದ ಸಿಎಂ.ವಕೀಲರ ಎಲ್ಲಾ ಬೇಡಿಕೆ ಈಡೇರಿಸಲು ಒಮ್ಮೆಲೆ ಸಾಧ್ಯವಿಲ್ಲ.ಆದರೆ, ಬೇಡಿಕೆಗಳನ್ನ ಹಂತವಾಗಿ ಈಡೇರಿಕೆ ಮಾಡುತ್ತೇವೆ ಎಂದರು.
ವಕೀಲರ ಸಂರಕ್ಷಣಾ ಕಾಯ್ದೆಗೆ ನಾನು ಬದ್ಧ.
ಬೆಳಗಾವಿ ಅಧಿವೇಶನದಲ್ಲಿ ನಾನು ಹೇಳಿದ್ದೆ.
ಹಿಂದಿನ ಸರ್ಕಾರ ಈ ಕಾನೂನು ಕುರಿತು ಪ್ರಸ್ತಾಪಿಸಿತ್ತು.
ಮೊದಲ ಅಧಿವೇಶನದಲ್ಲೇ ಆ ಕಾಯ್ದೆ ಪಾಸ್ ಮಾಡಬೇಕಿತ್ತು.ಅನಿವಾರ್ಯವಾಗಿ ಅದು ಸಾಧ್ಯವಾಗಲಿಲ್ಲ.ಮುಂದಿನ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆ ಜಾರಿ ಮಾಡುತ್ತೇವೆ ಎಂದು ತಿಳಿಸಿದರು.