ಮೈಸೂರು : ಟಿ.ನರಸೀಪುರ ತಾಲ್ಲೂಕಿನ ಗುಡ್ಡದಕೊಪ್ಪಲು ಗ್ರಾಮದಲ್ಲಿ ಘಟನೆ ಬೆಳ್ಳಂ ಬೆಳಿಗ್ಗೆ ಚಿರತೆ ಬೋನಿಗೆ ಬಿದ್ದಿದೆ.ಗುಡ್ಡದಕೊಪ್ಪಲು ಗ್ರಾಮದ ದೊರೆಸ್ವಾಮಿ ಎಂಬುವರ ಕಬ್ಬಿನ ಗದ್ದೆಯಲ್ಲಿ ಚಿರತೆ ಸೆರೆ ಸಿಕ್ಕಿದೆ.
ನೆನ್ನೆಯಷ್ಟೇ ದೊರೆಸ್ವಾಮಿಯವರ ಕಬ್ಬಿನ ಗದ್ದೆಯಲ್ಲಿ ಪತ್ತೆಯಾಗಿದ್ದ 2ಚಿರತೆ ಮರಿಗಳು.ಚಿರತೆ ಮರಿಗಳು ಸಿಕ್ಕ ಬೆನ್ನಲ್ಲೇ ತಾಯಿ ಚಿರತೆಗಾಗಿ ಬೋನಿರಿಸಿದ್ದ ಅರಣ್ಯ ಇಲಾಖೆ.ಇದೀಗ ತಾಯಿ ಚಿರತೆ ಕೂಡ ಬೋನಿಗೆ ಬಿದ್ದಿದೆ.
ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಚಿರತೆ ಸ್ಥಳಾಂತರಕ್ಕೆ ಮುಂದಾಗಿದ್ದಾರೆ.ಸದ್ಯ ತಾಯಿ ಚಿರತೆ ಸೆರೆ ಸಿಕ್ಕ ಬೆನ್ನಲ್ಲೇ ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ