ತುಮಕೂರು : ಆಧುನಿಕತೆ ಯುಗದಲ್ಲೂ ತುಮಕೂರಿನಲ್ಲೋಂದು ಅಮಾನವೀಯ ಘಟನೆ ನಡೆದಿದ್ದು ಸೂತಕ ಎಂದು ಹಸುಗೂಸು ಹಾಗೂ ಬಾಣಂತಿಯನ್ನು ಊರ ಹೊರಗಿಟ್ಟುರುವ ಘಟನೆ ಮೆಲ್ಲ್ಲೇನಹಳ್ಳಿಯ ಗೊಲ್ಲರಹಟ್ಟಿಯಲ್ಲಿ ನಡೆದಿದೆ.
ಮೌಢ್ಯಾಚರಣೆಯಿಂದ ಇನ್ನೂ ಹೊರ ಬಾರದ ಜನ.
ಮೌಢ್ಯದ ಪರಾಕಾಷ್ಠೆತೆ ಮೆರೆದ ಕಾಡು ಗೊಲ್ಲ ಸಮುದಾಯ.ಸೂತಕದ ಎಂದು ಹಸುಗೂಸು, ಬಾಣಂತಿಯನ್ನ ಊರ ಹೊರಗಿಟ್ಟ ಗೊಲ್ಲ ಸಮುದಾಯ.
ಊರ ಹೊರಗಿನ ಗುಡಿಸಿನಲ್ಲಿ ಬಾಣಂತಿ,ಹಸುಗೂಸು ಏಕಾಂಗಿ ವಾಸ ಮಾಡಿದ್ದಾರೆ.
ಮಳೆ,ಚಳಿ ಎನ್ನದೆ ಹಸುಗೂಸು ಬಾಣಂತಿಯನ್ನ ಊರ ಹೊರಗಿಟ್ಟು ಗ್ರಾಮಸ್ಥರು ಕ್ರೂರತೆ ಮೆರೆದಿದ್ದಾರೆ.
ಎರಡು ತಿಂಗಳ ಕಾಲ ಊರ ಹೊರಗಿನ ಗುಡಿಸಿಲಿನಲ್ಲೇ ವಾಸಮಾಡಲು ಗ್ರಾಮಸ್ಥರು ಸೂಚನೆ ನೀಡಿದ್ದಾರೆ.
ವಸಂತ ಎಂಬ ಬಾಣಂತಿಯನ್ನು ಊರಿನಿಂದ ಆಚೆ ಇಟ್ಟ ಕುಟುಂಬಸ್ಥರು.5 ದಿನಗಳ ಹಿಂದೆ ಅವಳಿ ಶಿಶುವಿಗೆ ಜನ್ಮನೀಡಿರುವ ವಸಂತ.ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ವಸಂತ ಎಂಬ ಮಹಿಳೆಗೆ ಹೆರಿಗೆ ಆಗಿತ್ತು.
ಹೆರಿಗೆ ಮುಗಿಸಿ ವಾಪಸ್ ಬಂದಾದ ಊರ ಹೊರಗೆ ಇರಿಸಿದ ಕುಟುಂಬಸ್ಥರು.
ಹೆರಿಗೆ ಸಂದರ್ಭದಲ್ಲಿ ಗಂಡು ಮಗು ಸಾವು.
ಬದುಕಿರುವ ನವಜಾತ ಹೆಣ್ಣು ಮಗುವಿನೊಂದಿಗೆ ತಾಯಿ ವಾಸ ಮಾಡುತ್ತಿದ್ದಾರೆ.ನಮ್ಮ ದೇವರಿಗೆ ಸೂತಕ ಆಗುತ್ತದೆ
ಹಾಗಾಗಿ ನಾವು ಒಳಗೆ ಬಿಟ್ಟುಕೊಳ್ಳುವುದಿಲ್ಲ ಎನ್ನುತ್ತಿದ್ದಾರೆ ಗೊಲ್ಲ ಸಮುದಾಯದವರು.ಸೂತಕದ ಬಾಣಂತಿ ಊರಿಗೆ ಬಂದರೆ ಕೇಡು.ನಮ್ಮ ಊರ ದೇವರು ಜುಂಜಪ್ಪ ಹಾಗೂ ಯತ್ತಪ್ಪ ದೇವರಿಗೆ ಸೂತಕ ಆಗುತ್ತದೆ ಎಂಬದು ಜನರ ನಂಬಿಕೆ.
ಈ ಹಿಂದಿನಿಂದಲ್ಲೂ ಗ್ರಾಮದ ಜನರು ಈ ಆಚರಣೆ ಮಾಡಿಕೊಂಡು ಬಂದಿದ್ದಾರೆ.ಈ ಅಮಾನವೀಯ ಕೃತ್ಯಕ್ಕೆ ಸಾರ್ವಜನಿಕರ ಆಕ್ಷೇಪ ವ್ಯಕ್ತಪಡಿಸಿದ್ದಾರೆ