ಮೈಸೂರು : ಗುರುತು ಪತ್ತೆ ಆಗದಂತೆ ಯುವತಿಯನ್ನ ಸುಟ್ಟು ಹಾಕಿರೋ ಘಟನೆ ಮೈಸೂರು ತಾಲೂಕಿನ ಸಾಗರಕಟ್ಟೆ ಬಳಿ ನಡೆದಿದೆ.
ಕೆ.ಅರ್.ಎಸ್ ಹಿನ್ನಿರಿನಲ್ಲಿ ಸುಟ್ಟುಹಾಕಿರೋ ದುಷ್ಕರ್ಮಿಗಳು. ನಿನ್ನೆ ಸಂಜೆ 4 ಗಂಟೆ ಸುಮಾರಿಗೆ ನಡೆದಿರೋ ಘಟನೆ.ಸ್ಥಳಕ್ಕೆ ಮೈಸೂರಿನ ಇಲವಾಲ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶವಗಾರಕ್ಕೆ ಅಪರಿಚಿತ ಯುವತಿ ಮೃತದೇಹ ರವಾನೆ ಮಾಡಲಾಗಿದೆ.ಅಪರಿಚಿತ ಯುವತಿ ಬಗ್ಗೆ ಮಾಹಿತಿಯನ್ನು ಪೋಲೀಸರು ಕಲೆ ಹಾಕುತ್ತಿದ್ದಾರೆ ಅಲ್ಲದೆ ಯುವತಿಯನ್ನು ಸಜೀವವಾಗಿ ಸುಟ್ಟು ಹಾಕಿರುವ ಶಂಕೆ ವ್ಯಕ್ತವಾಗಿದೆ.