• ಇತ್ತೀಚಿನ
  • ರಾಜ್ಯ
  • ರಾಜಕೀಯ
  • ಜಿಲ್ಲೆ
    • ಉಡುಪಿ
    • ಉತ್ತರಕನ್ನಡ
    • ಕಲ್ಬುರ್ಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೆಂಗಳೂರು ಗ್ರಾಮಾಂತರ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ದೇಶ
  • ಪ್ರಪಂಚ
  • ಸಿನಿಮಾ
  • ಕ್ರೀಡೆ
  • ಇತರೆ
  • E-paper
Reading: ಮೈಸೂರು ಪದಾರ್ಥಗಳಿಗೆ ವಿಶ್ವ ಮಾರುಕಟ್ಟೆ ಕಲ್ಪಿಸಿ
Share
Aa
Rajyadharma NewsRajyadharma News
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಅಪರಾಧ
  • ಪ್ರವಾಸ
  • ವಿಜ್ಞಾನ
  • ತಂತ್ರಜ್ಞಾನ
  • ಫ್ಯಾಷನ್
Search
  • Home
  • Categories
    • ರಾಜಕೀಯ
    • ಸಿನಿಮಾ
    • ತಂತ್ರಜ್ಞಾನ
    • ಪ್ರವಾಸ
    • ಫ್ಯಾಷನ್
    • ವ್ಯವಹಾರ
    • ವಿಜ್ಞಾನ
    • ಆರೋಗ್ಯ
  • ಜಿಲ್ಲೆ
    • ಮೈಸೂರು
    • ಮಂಡ್ಯ
    • ಚಾಮರಾಜನಗರ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
Follow US
  • Advertise
© 2022 Foxiz News Network. Ruby Design Company. All Rights Reserved.
Rajyadharma News > Blog > ಜಿಲ್ಲೆ > ಮೈಸೂರು > ಮೈಸೂರು ಪದಾರ್ಥಗಳಿಗೆ ವಿಶ್ವ ಮಾರುಕಟ್ಟೆ ಕಲ್ಪಿಸಿ
ಜಿಲ್ಲೆಮೈಸೂರುರಾಜ್ಯ

ಮೈಸೂರು ಪದಾರ್ಥಗಳಿಗೆ ವಿಶ್ವ ಮಾರುಕಟ್ಟೆ ಕಲ್ಪಿಸಿ

Arjun Gowda
Last updated: 2023/04/30 at 3:12 PM
Arjun Gowda
Share
3 Min Read
SHARE

ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶಾಸಕ ಎಸ್.ಎ.ರಾಮದಾಸ್ ಮನವಿ

ಮೈಸೂರು : ಭೌಗೋಳಿಕವಾಗಿ ಗುರುತಿಸಲ್ಪಟ್ಟಿರುವ ಮೈಸೂರಿನ ಹೆಮ್ಮೆಯ ವಸ್ತುಗಳನ್ನು ವಿಶ್ವ ಮಾರುಕಟ್ಟೆಗೆ ಪರಚಯಿಸುವ ನಿಟ್ಟಿನಲ್ಲಿ ಪ್ರದಾನಿ ಮೋದಿ ಅವರಲ್ಲಿ ಮನವಿ ಮಾಡಲಾಗುವುದು ಎಂದು ಶಾಸಕ ಎಸ್.ಎ.ರಾಮದಾಸ್ ತಿಳಿಸಿದರು.

ಪ್ರಧಾನಮಂತ್ರಿ ಮೋದಿ ಅವರಿಗೆ ಮೈಸೂರಿನ ಭೂ ವಿಶೇಷತೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೈಸೂರು ಮೂಲದ ೧೮ ವಸ್ತುಗಳ ಬಗ್ಗೆ ಮೋದಿ ಅವರಿಗೆ ಉಡುಗೊರೆಯಾಗಿ ನೀಡಿ ಪರಿಚಯಿಸಲಾಗುವುದು ಎಂದರು.

ಮೈಸೂರು ವೀಳ್ಯದೆಲೆ, ಮೈಸೂರು ಪಾಕ್, ಗಂಧದ ಕಡ್ಡಿ, ಮೈಸೂರು ರೇಷ್ಮೆ, ಮೈಸೂರು ಸ್ಯಾಂಡಲ್ ಸೋಪು, ಮೈಸೂರು ಪೇಟ, ಮೈಸೂರು ಅರಮನೆಯ ಕಲಾಕೃತಿ, ರೇಷ್ಮೆಯ ಪಂಚೆ, ವಲ್ಲಿ ಸೇರಿದಂತೆ ಎಲ್ಲಾ ೧೮ ವಸ್ತುಗಳನ್ನೂ ಮೋದಿಯವರಿಗೆ ನೀಡಲಾಗುವುದು ಎಂದು ಹೇಳಿದರು.
ಮೈಸೂರು ನೆಲಮೂಲದ ಪದಾರ್ಥಗಳಿಗೆ ವಿಶ್ವ ಮಾರುಕಟ್ಟೆ ಕಲ್ಪಿಸುವ ನಿಟ್ಟಿನಲ್ಲಿ ಮೋದಿಯವರಲ್ಲಿ ಮನವಿ ಮಾಡಲಾಗುವುದು. ಆತ್ಮನಿರ್ಭರ ಯೋಜನೆ ಮೂಲಕ ಮುಂದಿನ ಹತ್ತು ವರ್ಷಗಳ ಅವಧಿಯ ಗುರಿಯೊಂದಿಗೆ ಮೈಸೂರಿನ ಈ ಎಲ್ಲಾ ಪದಾರ್ಥಗಳು ವಿಶ್ವ ಮಾರುಕಟ್ಟೆಯಲ್ಲಿ ತನ್ನ ಪಾಲು ಹೊಂದುವ ಮೂಲಕ ಇಲ್ಲಿನ ರೈತ ಸಮೂಹಕ್ಕೆ ನೆರವು ಕಲ್ಪಿಸಲಾಗುವುದು ಎಂದು ತಿಳಿಸಿದರು.

ದಶಕಗಳೇ ಕಳೆದರೂ ಮೈಸೂರಿನ ಈ ಉತ್ಪನ್ನಗಳಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬ್ರಾಂಡ್ ಕಲ್ಪಿಸುವ ಗುರಿ ಈಡೇರಿರಲಿಲ್ಲ. ಈಗ ಅದನ್ನು ಸಾಕಾರಗೊಳಿಸಲು ಹೆಜ್ಜೆ ಇಡಲಾಗಿದೆ ಎಂದು ಹೇಳಿದರು.

ಭೌಗೋಳಿಕ ಸೂಚಕ ಟ್ಯಾಗ್ : ರಾಜ್ಯದಲ್ಲಿ ಒಟ್ಟು ೪೨ ಭೌಗೋಳಿಕ ಸೂಚಕ ಟ್ಯಾಗ್ ಇದ್ದರೆ ಅದರಲ್ಲಿ ಮೈಸೂರು ಒಟ್ಟು ೧೮ ಭೌಗೋಳಿಕ ಸೂಚಕ ಟ್ಯಾಗ್ ಪಡೆದುಕೊಂಡಿದೆ. ಅದರಲ್ಲಿ ವಿಶೇಷ ವಸ್ತುಗಳನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ. ಮೈಸೂರಿನ ೧೮ ಜಿಐ ಟ್ಯಾಗ್ ಪಟ್ಟಿಯಲ್ಲಿ ಮೊದಲನೆಯದು ನಂಜನಗೂಡು ಬಾಳೆಹಣ್ಣು. ಇದನ್ನು ನಂಜನಗೂಡು ರಸಬಾಳೆಹಣ್ಣು ಎಂದೂ ಕರೆಯುತ್ತಾರೆ. ಇದು ವಿಶಿಷ್ಟವಾದ ರುಚಿ ಮತ್ತು ಅನುಭವಕ್ಕೆ ಹೆಸರುವಾಸಿಯಾಗಿದೆ. ಇದನ್ನು ಸಾಮಾನ್ಯವಾಗಿ ಮೈಸೂರು ಜಿಲ್ಲೆ, ನಂಜನಗೂಡು ಮತ್ತು ಚಾಮರಾಜನಗರ ಜಿಲ್ಲೆಯಲ್ಲಿ ಬೆಳೆಯಲಾಗುತ್ತದೆ. ಮೈಸೂರು ಮಲ್ಲಿಗೆ ಮೈಸೂರು ಪ್ರದೇಶದಲ್ಲಿ ಮತ್ತು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕೆಲವು ಭಾಗದಲ್ಲಿ ಬೆಳೆಯುವ ಮಲ್ಲಿಗೆ ಹೂವನ್ನು ಉಲ್ಲೇಖಿಸುತ್ತದೆ. ಇದನ್ನು ಇತರ ಯಾವುದೇ ಮಲ್ಲಿಗೆ ಹೂವುಗಳಿಗಿಂತ ಪ್ರಬಲ ಪರಿಮಳದಿಂದಾಗಿ ಹೂಗಳ ರಾಣಿ ಎಂದು ಕರೆಯಲಾಗುತ್ತದೆ. ಈ ಹೂವನ್ನು ಮೈಸೂರು ಸಾಮ್ರಾಜ್ಯದ ಒಡೆಯರ್ ಗೌರವಿಸಿದರು ಮತ್ತು ಬಳಸುತ್ತಿದ್ದರು. ದಸರಾ ಹಬ್ಬದ ಸಮಯದಲ್ಲಿ ಮೈಸೂರು ಅರಮನೆ ಅಲಂಕರಿಸಲು ಬಳಸುತ್ತಾರೆ.

ಮೈಸೂರು ಸಿಲ್ಕ್ ಲೋಗೋ : ಮೈಸೂರಿನ ನಾಲ್ಕನೇ ಪ್ರಮುಖ ಜಿಐ ಟ್ಯಾಗ್ ಮೈಸೂರು ಸಿಲ್ಕ್. ಕರ್ನಾಟಕ ೯,೦೦೦ ಮೆಟ್ರಿಕ್ ಟನ್ ಮಲ್ಬೆರಿ ರೇಷ್ಮೆ ಉತ್ಪಾದಿಸುತ್ತದೆ. ಒಟ್ಟು ೨೦,೦೦೦ ಮೆಟ್ರಿಕ್ ಟನ್ ಮಲ್ಬೆರಿ ರೇಷ್ಮೆಯನ್ನು ದೇಶದಲ್ಲಿ ಉತ್ಪಾದಿಸಲಾಗುತ್ತದೆ. ಹೀಗಾಗಿ ದೇಶದ ಒಟ್ಟು ಮಲ್ಬೆರಿ ರೇಷ್ಮೆಯ ಸುಮಾರು ಶೇ.೪೫ರಷ್ಟು ರಾಜ್ಯದಲ್ಲೇ ಉತ್ಪಾದನೆಯಾಗುತ್ತದೆ. ಕರ್ನಾಟಕದಲ್ಲಿ ರೇಷ್ಮೆಯನ್ನು ಮುಖ್ಯವಾಗಿ ಮೈಸೂರು ಭಾಗದಲ್ಲಿ ಉತ್ಪಾದಿಸಲಾಗುತ್ತದೆ. ಇದು ಕೆಎಸ್‌ಐಸಿ ಅಡಿಯಲ್ಲಿ ಪೇಟೆಂಟ್ ನೋಂದಾಯಿತ ಉತ್ಪನ್ನವಾಗಿದೆ.
ಮೈಸೂರು ಅಗರಬತ್ತಿ: ಮೈಸೂರಿನ ಐದನೇ ಪ್ರಮುಖ ಜಿಐ ಟ್ಯಾಗ್ ಮೈಸೂರು ಅಗರಬತ್ತಿ. ಇದು ಮೊದಲು ರಾಜ್ಯದಲ್ಲಿ ಮಾತ್ರ ಕಂಡುಬರುವ ಸ್ಥಳೀಯವಾಗಿ ಬೆಳೆದ ಪದಾರ್ಥಗಳನ್ನು ಬಳಸಿಕೊಂಡು ಮೈಸೂರಿನಲ್ಲಿ ತಯಾರಿಸಲಾದ ವಿವಿಧ ಧೂಪದ್ರವ್ಯವಾಗಿದೆ. ಈ ಧೂಪದ್ರವ್ಯ ಅದರ ಐತಿಹಾಸಿಕ ಹಿನ್ನೆಲೆ ಮತ್ತು ಬಳಸಿದ ವಸ್ತುಗಳ ದೂರದ ಲಭ್ಯತೆಯ ಕಾರಣದಿಂದ ೨೦೦೫ರಲ್ಲಿ ಭಾರತ ಸರ್ಕಾರದಿಂದ ಭೌಗೋಳಿಕ ಸೂಚಕ ಟ್ಯಾಗ್ ನೀಡಲಾಗಿದೆ.

ಮೈಸೂರು ಶ್ರೀಗಂಧದ ಎಣ್ಣೆ : ಮೈಸೂರು ಶ್ರೀಗಂಧದ ಎಣ್ಣೆಯು ಮೈಸೂರು ಜಿಲ್ಲೆಯಲ್ಲಿ ರಾಯಲ್ ಟ್ರೀ ಎಂದು ಕರೆಯಲ್ಪಡುವ ಶ್ರೀಗಂಧದ ಮರದಿಂದ ಹೊರತೆಗೆಯಲಾದ ಸುಗಂಧ ತೈಲವಾಗಿದೆ. ಮೈಸೂರಿನಲ್ಲಿ ಉತ್ಪಾದನೆಯಾಗುವ ಗಂಧದ ಎಣ್ಣೆಗೆ ಜಾಗತಿಕ ಮಟ್ಟದಲ್ಲಿ ಬೇಡಿಕೆಯಿದೆ.
ಮೈಸೂರು ಸ್ಯಾಂಡಲ್ ಸೋಪ್ ಮೈಸೂರು ಸ್ಯಾಂಡಲ್ ಸೋಪ್ ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್‌ನಿಂದ ತಯಾರಿಸಲ್ಪಟ್ಟ ಸಾಬೂನಿನ ಬ್ರ್ಯಾಂಡ್. ಇದು ಭಾರತದಲ್ಲಿ ಸರ್ಕಾರದ ಒಡೆತನದಲ್ಲಿದೆ. ೧೯೧೬ರಲ್ಲಿ ಮೈಸೂರಿನ ರಾಜ ಕೃಷ್ಣ ರಾಜ ಒಡೆಯರ್ ಬೆಂಗಳೂರಿನಲ್ಲಿ ಸರ್ಕಾರಿ ಸಾಬೂನು ಕಾರ್ಖಾನೆ ಸ್ಥಾಪಿಸಿದಾಗಿನಿಂದ ಈ ಸಾಬೂನು ತಯಾರಿಸಲ್ಪಟ್ಟಿದೆ. ಕಾರ್ಖಾನೆಯನ್ನು ಸ್ಥಾಪಿಸಲು ಮುಖ್ಯ ಪ್ರೇರಣೆ ಮೈಸೂರು ಸಾಮ್ರಾಜ್ಯದ ಮಿತಿಮೀರಿದ ಶ್ರೀಗಂಧದ ಮೀಸಲು ಆಗಿತ್ತು. ಮೈಸೂರು ಪಾಕ್: ಮೈಸೂರು ಪಾಕ್ ದಕ್ಷಿಣ ಭಾರತದಲ್ಲಿ ಜನಪ್ರಿಯವಾಗಿರುವ ತುಪ್ಪದಲ್ಲಿ ತಯಾರಿಸಲಾದ ಭಾರತೀಯ ಸಿಹಿ. ಇದನ್ನು ಉದಾರ ಪ್ರಮಾಣದಲ್ಲಿ ತುಪ್ಪ, ಸಕ್ಕರೆ, ಕಡಲೆ ಹಿಟ್ಟು ಮತ್ತು ಏಲಕ್ಕಿಯಿಂದ ತಯಾರಿಸಲಾಗುತ್ತದೆ. ಈ ಸಿಹಿತಿಂಡಿಯ ವಿನ್ಯಾಸ ಮಿಠಾಯಿಯಂತೆಯೇ ಇರುತ್ತದೆ.

You Might Also Like

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ

ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್

ದಸರಾ ಉದ್ಘಾಟಕರ ಪರ ಪ್ರತಿಭಟನೆ

ಕಾರ್ಮಿಕರ ಸ್ಥಳಕ್ಕೆಬಂದ ಕೈ ಶಾಸಕ ಧರಣಿಕೂರುವ ಎಚ್ವರಿಕೆ ಕೊಟ್ಟು ಕೆಂಡಾಮಂಡಲ!?

ಚುಂಚನಕಟ್ಟೆ ಜಲಪಾತದ ಮೆರಗು

Arjun Gowda April 30, 2023
Share this Article
Facebook Twitter Whatsapp Whatsapp LinkedIn Copy Link
Previous Article ಅಭಿವೃದ್ಧಿಗೆ ಮತ ನೀಡಿ : ಶ್ರೀನಿವಾಸ್ ಪ್ರಸಾದ್
Next Article ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಗೆಲುವು
Leave a comment Leave a comment

Leave a Reply Cancel reply

Your email address will not be published. Required fields are marked *

Join our group

Stay Connected

235.3k Followers Like
69.1k Followers Follow
56.4k Followers Follow
- Advertisement -
Ad imageAd image

Latest News

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ
ಜಿಲ್ಲೆ ಮೈಸೂರು ರಾಜ್ಯ September 8, 2025
ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್
ಜಿಲ್ಲೆ ಮೈಸೂರು ರಾಜ್ಯ September 7, 2025
ದಸರಾ ಉದ್ಘಾಟಕರ ಪರ ಪ್ರತಿಭಟನೆ
ಇತರೆ ಮೈಸೂರು September 6, 2025
ಕಾರ್ಮಿಕರ ಸ್ಥಳಕ್ಕೆಬಂದ ಕೈ ಶಾಸಕ ಧರಣಿಕೂರುವ ಎಚ್ವರಿಕೆ ಕೊಟ್ಟು ಕೆಂಡಾಮಂಡಲ!?
ಜಿಲ್ಲೆ ಮೈಸೂರು August 1, 2024

ರಾಜ್ಯ ರಾಜಕೀಯ, ಸಿನಿಮಾ ಸುದ್ದಿಗಳು, ಕ್ರೈಮ್ ಸ್ಟೋರಿಗಳು ಮೈಸೂರು ಸುತ್ತಮುತ್ತಲಿನ ಇಂಟ್ರೆಸ್ಟಿಂಗ್ ಸುದ್ದಿಗಳಿಗಾಗಿ ನೋಡ್ತಾ ಇರಿ ರಾಜ್ಯಧರ್ಮ ನ್ಯೂಸ್ ಸತ್ಯವೇ ನಮ್ಮ ಧರ್ಮ

Follow US

© 2023 Rajyadharma News. All Rights Reserved | Developed By Interwebplus.com

Removed from reading list

Undo
Welcome Back!

Sign in to your account

Lost your password?