ಟಿ.ನರಸೀಪುರ : ನರಸೀಪುರ ಮೀಸಲು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾಕ್ಟರ್ ರೇವಣ್ಣ ಅವರಿಗೆ ಹೋದ ಕಡೆಯಲ್ಲೆಲ್ಲ ಅಭೂತಪೂರ್ವ ಬೆಂಬಲ ಸಿಗುತ್ತಿದ್ದು ತಮ್ಮ ಮನೆ ಮಗನ ರೀತಿ ಕ್ಷೇತ್ರದ ಜನರು ಸ್ವಾಗತ ಕೊರುತ್ತಿದ್ದಾರೆ
ನಾಮ ಪತ್ರ ಸಲ್ಲಿಕೆಗೆ ಸ್ವತಃ ನಾಡಿನ ದೊರೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಂದಿದ್ದು ತಿ.ನರಸೀಪುರ ಕ್ಷೇತ್ರದ ಇತಿಹಾಸದಲ್ಲೇ ಇದು ಸುದಿನ ಎಂದು ರೇವಣ್ಣ ಹೇಳಿದರು. ಕ್ಷೇತ್ರದ ಪ್ರತಿ ಹಳ್ಳಿಗಳಲ್ಲೂ ರೇವಣ್ಣರಿಗೆ ಭರ್ಜರಿ ಸ್ವಾಗತ ಸಿಗುತ್ತಿದ್ದು. ಈ ಬಾರಿ ಕಮಲ ಅರಳುವುದು ಖಚಿತವಾಗಿದೆ ಎಂದು ಕಾರ್ಯಕರ್ತರು ಹುಮ್ಮಸಿನಿಂದ ಕೆಲಸ ಮಾಡುತ್ತಿರುವುದು ಕಂಡು ಬಂದಿದೆ
ಪ್ರತಿದಿನ ಹತ್ತಾರು ಹಳ್ಳಿಗಳಿಗೆ ಬೇಟಿ ನೀಡಿ ಮತಬೇಟೆ ಮುಂದುವರೆಸಿರುವ ರೇವಣ್ಣ ಅವರು, ಜನರ ಪ್ರೀತಿಯ ಬಗ್ಗೆ ಹೇಳಿದ್ದು ಹೀಗೆ,, ನಾನು ಕ್ಷೇತ್ರದ ಜನರ ಪ್ರೀತಿಯನ್ನು ಮರೆಯುವುದಿಲ್ಲ, ಈ ಬಾರಿ ಸ್ಥಳಿಯನಾದ ನನಗೆ ಜನರು ಮತ ನೀಡುತ್ತಾರೆ, ನನಗೆ ನೀಡುವ ಒಂದೊಂದು ಮತ ಕೂಡ ಮೋದಿಯವರ ಕೈ ಬಲ ಪಡಿಸುತ್ತಾ ನಾಡಿನಲ್ಲಿ ಬಿಜೆಪಿ ಡಬಲ್ ಇಂಜಿನ್ ಸರ್ಕಾರ ಬರಲು ಕಾರಣವಾಗುತ್ತೆ ಎಂದು ತಿಳಿಸಿದರು.