ಮೈಸೂರು: ಬಿಜೆಪಿಯಲ್ಲಿ ಕೆ.ಆರ್ ಕ್ಷೇತ್ರದ ಟಿಕೆಟ್ ಇನ್ನೂ ಘೋಷಣೆಯಾಗದ ಹಿನ್ನಲೆ ಶಾಸಕ ರಾಮದಾಸ್ ಗೆ ಕಾಂಗ್ರೆಸ್ ಗಾಳ ಹಾಕಿದೆ ಎನ್ನಲಾಗಿದೆ.
ಕಾಂಗ್ರೆಸ್ ಮುಖಂಡರಿಂದ ರಾಮದಾಸ್ಗೆ ಗಾಳ ಹಾಕಲು ಈಗಾಗಲೇ ಅನೇಕ ಕರೆಗಳು ಹೋಗಿವೆ ಎನ್ನಲಾಗಿದೆ. ಒಂದು ವೇಳೆ ಬಿಜೆಪಿಯಲ್ಲಿ ಟಿಕೆಟ್ ಮಿಸ್ ಆಗಿದ್ದೆ ಆದರೆ ನಮ್ಮ ಪಕ್ಷಕ್ಕೆ ಬನ್ನಿ ಇಲ್ಲಿಂದ ಟಿಕೆಟ್ ಕೊಡುತ್ತೇವೆ ಎಂದು ಅಫರ್ ಕೂಡ ಕೊಡಲಾಗಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಕೈ ಮುಖಂಡರಿಂದ ರಾಮದಾಸ್ಗೆ ಎರಡು ಬಾರಿ ಕರೆ ಹೋಗಿದ್ದು ಆದರೆ ಬಿಜೆಪಿಯಲ್ಲೇ ಟಿಕೆಟ್ ಫೈನಲ್ ಆಗುವ ನಿರೀಕ್ಷೆಯಲ್ಲಿರುವ ರಾಮದಾಸ್ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ ಎಂದು ತಿಳಿದುಬಂದಿದೆ,
ಸದ್ಯ ಕೆ.ಆರ್.ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ಇನ್ನು ಘೋಷಣೆ ಆಗಿಲ್ಲ. ಬಿಜೆಪಿ ಟಿಕೆಟ್ ಘೋಷಣೆ ಬಳಿಕ ಕೈ ಅಭ್ಯರ್ಥಿ ಹೆಸರು ಘೋಷಣೆ ಮಾಡಬಹುದು ಎಂಬ ಮಾಹಿತಿಯಿದೆ.
ಇಂದು ಬಿಜೆಪಿಯ 3ನೇ ಪಟ್ಟಿ ರಿಲೀಸ್ ಆಗುವ ಸಾಧ್ಯತೆಯಿದ್ದು ,ಬಿಜೆಪಿ ಪಟ್ಟಿ ಬಿಡುಗಡೆ ಬಳಿಕ ಅಸಮಾಧಾನಿತರನ್ನ ಸೆಳೆಯಲು ಕೈ ಪಾಳಯ ಈಗಾಗಲೇ ಪ್ಲ್ಯಾನ್ ರೂಪಿಸಿದೆ. ಆ ಲಿಸ್ಟ್ನಲ್ಲಿ ರಾಮದಾಸ್ಗು ಕಾಂಗ್ರೆಸ್ ಗಾಳ ಹಾಕಬಹುದು ಎನ್ನಲಾಗಿದೆ.