– ನಾಳೆ ರಾಮದಾಸ್ ರಾಜೀನಾಮೆ ಸಾದ್ಯತೆ
– ಹಿರಿಯ ನಾಯಕರ ಮೂಲೆ ಗುಂಪು !
– ಯಡಿಯೂರಪ್ಪ ಮಾತಿಗೆ ಕ್ಯಾರೇ ಎನ್ನದ ಬಿಜೆಪಿ ವರಿಷ್ಠರು
ಮೈಸೂರು: ಈಶ್ವರಪ್ಪ ಅವರು ಚುನಾವಣಾ ರಾಜಕೀಯ ಘೋಷಿಸುತ್ತಿದ್ದಂತೆ ಹಲವು ಘಟಾನುಘಟಿಗಳು ನಿವೃತ್ತಿ ಘೋಷಿಸುತ್ತಿದ್ದು, ಮೈಸೂರಿನ ಕೆ.ಆರ್.ಕ್ಷೇತ್ರದ ಮಾಜಿ ಸಚಿವ, ಹಾಲಿ ಶಾಸಕ ನಿವೃತ್ತಿ ಘೋಷಿಸಲಿದ್ದಾರೆ ವಿಷಯ ಹರಿದಾಡುತ್ತಿದೆ.
ಕೆ.ಆರ್.ಕ್ಷೇತ್ರದ ಪ್ರಬಲ ಆಕಾಂಕ್ಷಿಯಾಗಿದ್ದ ಟಿಕೆಟ್ ಎಸ್.ಎ.ರಾಮದಾಸ್ ಅವರು ಕೂಡ ನಿವೃತ್ತಿಯಾಗುತ್ತಾರೆ ಎಂದು ಎಲ್ಲೆಡೆ ಸುದ್ದಿ ಹರಿದಾಡಿದ್ದು, ಕೆ.ಆರ್.ಕ್ಷೇತ್ರಕ್ಕೆ ನೂತನ ಅಭ್ಯರ್ಥಿ ಯಾರು ಎಂಬುದಕ್ಕೆ ಇನ್ನೂ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ.
ಅಭ್ಯರ್ಥಿಗಳ ಪಟ್ಟಿ ಹೊರಬರುವ ಮೊದಲು ರಾಜಕೀಯ ನಿವೃತ್ತಿ ಪಡೆಯುವವರ ಪಟ್ಟಿ ಹೊರಬರುತ್ತಿವೆ! ಟಿಕೆಟ್ ಘೋಷಣೆಯಾಗುವ ಬದಲು ಹಿರಿಯ ನಾಯಕರ ವಿಕೆಟ್ ಬೀಳುತ್ತಿವೆ. ಮಂತ್ರಿಗಿರಿಗಾಗಿ ಲಾಭಿ ಮಾಡಿ ಸುಸ್ತಾದ ಈಶ್ವರಪ್ಪ ಈಗ ಟಿಕೆಟ್’ಗೂ ಲಾಭಿ ನಡೆಸಿ ಸುಸ್ತಾಗಿ ರಾಜೀನಾಮೆ ನೀಡಿದ್ದಾರೆ.
ಬಿಜೆಪಿಯ ಅವಮಾನ ಸಹಿಸದೆ ಹಿರಿಯ ನಾಯಕರು ರಾಜಕೀಯದಿಂದಲೇ ಪಲಾಯನ ಮಾಡಿದ್ದಾರೆ ಎಂದು ಕಾಂಗ್ರೆಸ್ ಟ್ವೀಟ್ ಮೂಲಕ ಬಿಜೆಪಿಯನ್ನು ವ್ಯಂಗ್ಯ ಮಾಡಿದ್ದಾರೆ. ಬಿಜೆಪಿ ಯಡಿಯೂರಪ್ಪನವರ ಕಡೆಗಣಿಸಿ ಅವರ ಕಣ್ತಪ್ಪಿಸಿ, ಮೀಟಿಂಗ್ ಮಾಡ್ತಿರೋದೇಕೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಅವರಿಗೆ ಕೇಂದ್ರೀಯ ಸಂಸದೀಯ ಮಂಡಳಿಯ ಸ್ಥಾನ ನೀಡಿದ್ದು ನಾಮಕಾವಸ್ಥೆಗೆ ಮಾತ್ರವೇ ಎಂದು ಟ್ವೀಟ್ ಮಾಡಿದ್ದಾರೆ.
ಅಲ್ಲದೆ BSYಗಿಂತ ಸಿ.ಟಿ ರವಿ, ಸಂತೋಷ್, ಪ್ರಹ್ಲಾದ್ ಜೋಷಿಯಯವರ ಮಾತು ಮುಖ್ಯವಾಯಿತೆ BSYಗೆ ಕವಡೆ ಕಾಸಿನ ಕಿಮ್ಮತ್ತಿಲ್ಲವೇ ಇಂತಹ ದಯನೀಯ ಸ್ಥಿತಿ BSYರಿಗೆ ಬರಬಾರದಿತ್ತು ಎಂದು ಕಾಂಗ್ರೆಸ್ ಮತ್ತೊಂದು ಟ್ವೀಟ್ ನಲ್ಲಿ ಅನುಕಂಪ ವ್ಯಕ್ತಪಡಿಸಿದೆ.