ಮೈಸೂರು : ಶಾಲೆಯಲ್ಲಿ ಓದುವ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆದು, ಉನ್ನತ ಮಟ್ಟಕ್ಕೆ ಏರಲು ಅಥವಾ ಉನ್ನತ ಸ್ಥಾನಗಳನ್ನು ಪಡೆಯಲು ಪ್ರಮುಖ ಕಾರಣಕರ್ತರು ಅವರ ಗುರುಗಳೇ ವಿನಃ ಮತ್ತಾರು ಅಲ್ಲ ಎಂದು ಸಾತಗಳ್ಳಿ ಬಳಿಯ ಲರ್ನರ್ಸ್ ಗ್ಲೋಬಲ್ ಸ್ಕೂಲ್ ನ ವಾರ್ಷಿಕೋತ್ಸವದ ಕಾರ್ಯಕ್ರಮದಲ್ಲಿ ಇನ್ಫೋಸಿಸ್ ನ ವೈಸ್ ಪ್ರೆಸಿಡೆಂಟ್ ಆದ ವಿನಾಯಕ್ ಹೆಗ್ಡೆ ಅವರು ಹೇಳಿದರು.
ಇಂದು ಮೈಸೂರಿನ ಸಾತಗಳ್ಳಿ ಬಳಿ ಇರುವ ಲರ್ನರ್ಸ್ ಗ್ಲೋಬಲ್ ಸ್ಕೂಲ್ ನ ವಾರ್ಷಿಕೋತ್ಸವದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಇನ್ಫೋಸಿಸ್ ನ ವೈಸ್ ಪ್ರೆಸಿಡೆಂಟ್ ಆದ ವಿನಾಯಕ್ ಹೆಗ್ಡೆ ಅವರು ಮಾತನಾಡಿ ಗುರು ಬ್ರಹ್ಮ, ಗುರು ವಿಷ್ಣು ಗುರು ದೇವೋ ಮಹೇಶ್ವರ ಎಂಬುವ ಮಾತಿನಂತೆ ಮಕ್ಕಳು ವಿದ್ಯಾಭ್ಯಾಸ ಪಡೆದು ಉನ್ನತ ಸ್ಥಾನಕ್ಕೆ ಏರಲು ಪ್ರಮುಖ ಕಾರಣಕರ್ತರು ಆ ಶಾಲೆಯ ಶಿಕ್ಷಕರೇ ಆಗಿದ್ದಾರೆ ಎಂದು ಶಿಕ್ಷಕರ ಪಾತ್ರವನ್ನು ಕೊಂಡಾಡಿದರು.
ಪೋಷಕರೇ ಮಕ್ಕಳ ಕಾನ್ಫಿಡೆನ್ಸ್ ಗೆ ಮೂಲ ಕಾರಣ : ವಿನಾಯಕ್ ಹೆಗ್ಡೆ.
ಈ ಶಾಲೆ ಸಾರ್ಥಕತೆಯನ್ನ ಮೆರೆಯುತ್ತಿದೆ ಎಂದು ಅನಿಸುತ್ತಿದೆ. ನಾನು ಸಹ ಹಳ್ಳಿಯ ಶಾಲೆಯಲ್ಲಿಯೇ ಓದಿ ಬಂದಿದ್ದು. ಇಲ್ಲಿಯ ಬಗ್ಗೆ ನಾರಾಯಣ ಮೂರ್ತಿಯವರು ಸಹ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಇಂತಹ ಶಾಲೆಯ ವಾರ್ಷಿಕ ದಿನಕ್ಕೆ ಬಂದಿರುವುದು ನನಗೆ ಹೆಮ್ಮೆಯ ವಿಷಯ. ಪೋಷಕರು ಮಕ್ಕಳ ಉತ್ತಮ ಬೆಳವಣಿಗೆಗೆ ಮೂಲ ಕಾರಣ, ಅವರೇ ಮಕ್ಕಳ ಕಾನ್ಫಿಡೆನ್ಸ್ ಗೆ ಮೂಲ ಕಾರಣ. ಪೋಷಕ ಜೊತೆ ಶಾಲೆಯೂ ಸಹ ಮಕ್ಕಳಿಗೆ ಬೆಳವಣಿಗೆಗೆ ಕಾರಣ, ನನಗೆ ಅಷ್ಟು ಮಾರ್ಕ್ಸ್ ಬಂದಿದೆ, ಇಷ್ಟು ಬಂದಿದೆ ಎಂಬುದನ್ನು ತಲೆಯಲ್ಲಿಟ್ಟುಕೊಳ್ಳಬೇಡಿ. ಕೊನೆಯ ಪರೀಕ್ಷೆಯ ಅಂಕವೇ ಮುಖ್ಯ. ನಾನು ಒಂದು ಬಾರಿ ಅಮೇರಿಕಾಗೆ ಹೋದಾಗ ಅಲ್ಲಿ ಒಂದು ೮೦ ಅಂತಸ್ತಿನ ಕಟ್ಟಡ ಇತ್ತು, ಅಲ್ಲಿ ಕೆಲವರು ಅಲ್ಲಿಯ ಗ್ಲಾಸ್ ಚೆನ್ನಾಗಿದೆ, ಅದು ಚೆನ್ನಾಗಿದೆ, ಇದು ಚೆನ್ನಾಗಿದೆ ಎಂದು ಹೇಳುತ್ತಿದ್ದರು, ಆದರೆ ಅದಕ್ಕೆ ಮೂಲ ಕಾರಣ ಅದರ ಫೌಂಡೇಶನ್, ಹಾಗೆಯೇ ಈ ಶಾಲೆಯ ಉತ್ತಮ ಬೆಳವಣಿಗೆಗೆ ಫೌಂಡೇಶನ್ ಮೂಲ ಕಾರಣ ಅಂತಹ ಫೌಂಡೇಶನ್ ಅನ್ನು ಇಲ್ಲಿಯ ಮುರಳಿಯವರು ಮೂಲ ಕಾರಣ ಎಂದು ಹೇಳಬಹುದು ಎಂದು ಇನ್ಫೋಸಿಸ್ ನ ವೈಸ್ ಪ್ರೆಸಿಡೆಂಟ್ ಆದ ವಿನಾಯಕ್ ಹೆಗ್ಡೆ ಅವರು ಲರ್ನರ್ಸ್ ಕಾಲೇಜಿನ ವಾರ್ಷಿಕೋತ್ಸವದಲ್ಲಿ ಹೇಳಿದರು.