ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಕಾಂಗ್ರೆಸ್ ಗೆ ಮತ ಹಾಕಿದ ಹಿನ್ನೆಲೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ನಮ್ಮಲ್ಲಿ ಬರಿ ಅಡ್ಜೆಸ್ಟ್ ಮೆಂಟ್ ಆಗಿ ಹೋಗಿದೆ. ನಾನು ಪದೇ ಪದೇ ಈ ವಿಚಾರ ಹೇಳುತ್ತಿದ್ದೇನೆ. ಎಸ್ ಟಿ ಸೋಮಶೇಖರ್ ಈ ರೀತಿ ಮಾಡಬಾರದಿತ್ತು. ಎಸ್ ಟಿ ಸೋಮಶೇಖರ್ ರನ್ನು ಮನವೊಲಿಸುವಲ್ಲಿ ತಂದೆ ಮತ್ತು ಮಗ ವಿಫಲರಾಗಿದ್ದಾರೆ ಎಂದು ಪರೋಕ್ಷವಾಗಿ ಬಿಎಸ್ ವೈ ಮತ್ತು ಬಿವೈ ವಿಜಯೇಂದ್ರ ವಿರುದ್ದ ಕಿಡಿಕಾರಿದರು.
ನಮ್ಮಲ್ಲಿ ಬರಿ ಅಡ್ಜೆಸ್ಟ್ ಮೆಂಟ್ ಆಗಿದೆ. ನಾನು ಪದೇ ಪದೇ ಈ ವಿಚಾರ ಹೇಳುತ್ತಿದ್ದೇನೆ. ಸೋಮಶೇಖರ್ ಈ ರೀತಿ ಮಾಡಬಾರದಿತ್ತು. ಎಸ್ ಟಿ ಸೋಮಶೇಖರ್ ಅವರನ್ನು ಮನವೊಲಿಸುವಲ್ಲಿ ತಂದೆ ಮತ್ತು ಮಗ ವಿಫಲರಾಗಿದ್ದಾರೆ ಎಂದು ಪರೋಕ್ಷವಾಗಿ ಬಿಎಸ್ ವೈ ಮತ್ತು ಬಿವೈ ವಿಜಯೇಂದ್ರ ವಿರುದ್ದ ಹರಿಹಾಯ್ದರು