ಸ್ಯಾಂಡಲ್ವುಡ್ ಸ್ಟಾರ್, ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಮತ್ತು ನಟಿ ಪವಿತ್ರಾ ಗೌಡ ನಡುವೆ ಇನ್ಸ್ಟಾ ವಾರ್ ನಡೆದಿದೆ. ಪವಿತ್ರಾ ಗೌಡ ಡಿ ಬಾಸ್ ಜೊತೆಗಿನ ಫೋಟೋ ಹಂಚಿಕೊಂಡಿದಲ್ಲದೆ, ‘ನಮ್ಮಿಬ್ಬರ ರಿಲೇಶನ್ಶಿಪ್ಗೆ 10 ವರ್ಷ’ ಎಂದು ಬರೆಯುವ ಮೂಲಕ ಪೋಸ್ಟ್ ಮಾಡಿದ್ದರು. ಆದರೆ ಇದನ್ನು ಕಂಡು ವಿಜಯಲಕ್ಷ್ಮೀಯವರು ಆಕ್ರೋಶ ಹೊರಹಾಕುವ ಮೂಲಕ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆಯನ್ನು ಸಹ ನೀಡಿದ್ದಾರೆ.
ನಿನ್ನೆ ವಿಜಯಲಕ್ಷ್ಮೀ ಪತಿ ದರ್ಶನ್ ಮತ್ತು ಮಗ ವಿನಿಶ್ ಜೊತೆಗೆ ಫೋಟೋವನ್ನು ಇನ್ಸ್ಟಾದಲ್ಲಿ ಹಂಚಿಕೊಂಡಿದ್ದರು. ಜೊತೆಗೆ ‘‘ಇದು ನಾವು, ನಮ್ಮ ಒಬ್ಬ ಮಗನ ಜೊತೆ ನನ್ನ ಫ್ಯಾಮಿಲಿಯೇ ನನಗೆಲ್ಲ’ ಎಂದು ಬರೆದುಕೊಂಡಿದ್ದರು. ಈ ಫೋಟೋ ಹೊರಬಿದ್ದಿದ್ದೇ ತಡ ಅತ್ತ ಪವಿತ್ರಾ ಗೌಡ ದರ್ಶನ್ ಜೊತೆಗಿನ ಫೋಟೋ ಹಂಚಿಕೊಂಡಿದ್ದರು. ಪವಿತ್ರಾ ಗೌಡ ಹಂಚಿಕೊಂಡಿದ್ದ ವೀಡಿಯೋ ಸಾಕಷ್ಟು ವೈರಲ್ ಆಗಿತ್ತು. ಇದೇ ವಿಚಾರ ವಿಜಯಲಕ್ಷ್ಮೀ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಪವಿತ್ರಾ ಗೌಡ ಮತ್ತು ಆಕೆಯ ಪತಿ ಸಂಜಯ್ ಸಿಂಗ್ ಫೋಟೋ ಹಾಕಿಕೊಂಡು, ಬೇರೊಬ್ಬರ ಗಂಡನ ಚಿತ್ರವನ್ನು ಪೋಸ್ಟ್ ಮಾಡುವ ಮೊದಲು ಈ ಮಹಿಳೆ ಪ್ರಜ್ಞೆ ಇರಬೇಕು ಎಂದು ನಾನು ಭಾವಿಸುತ್ತೇನೆ. ಈ ಫೋಟೋದಲ್ಲಿರೋದು ಪವಿತ್ರಾ ಗೌಡ ಮತ್ತು ಸಂಜಯ್ ಸಿಂಗ್ ಅವರ ಮಗಳು ಕುಶಿ ಗೌಡ ಎಂಬುದು ಸ್ಪಷ್ಟವಾಗಿ ಕಾಣಿಸುತ್ತದೆ.
ನಾನು ಸಾಮಾನ್ಯವಾಗಿ ವೈಯಕ್ತಿಕ ವಿಷಯಗಳ ಬಗ್ಗೆ ಧ್ವನಿ ಎತ್ತಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳುವುದಿಲ್ಲ. ಆದರೆ ಈಗ ನನ್ನ ಕುಟುಂಬದ ಹಿತದೃಷ್ಟಿಯಿಂದ ಧ್ವನಿ ಎತ್ತುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಇಡೀ ಸಮಾಜಕ್ಕೆ ವಿಭಿನ್ನ ಚಿತ್ರಣ ನೀಡಲು ಯತ್ನಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬರೆಯುವ ಮೂಲಕ ಸಂಜಯ್ ಸಿಂಗ್, ಖುಷಿ ಗೌಡ, ಶಾನ್ವಿ ಸಂಸೂರಿ ಹಾಗೂ ಪವಿತ್ರಾ ಗೌಡ ಅಕೌಂಟ್ಗೆ ಟ್ಯಾಗ್ ಮಾಡಿದ್ದಾರೆ.ಇದೆಲ್ಲದರ ಮಧ್ಯೆ ಬೆಳಗ್ಗೆ ಗುರುವಾರ ಆಯೋಜಿಸಲಾಗಿದ್ದ ದರ್ಶನ್ ಅಭಿನಯದ ‘ಕಾಟೇರ’ ಚಿತ್ರದ ಪತ್ರಿಕಾಗೋಷ್ಟಿ ಕಾರಣಾಂತರದಿಂದ ರದ್ದಾಗಿದೆ. ದಯವಿಟ್ಟು ಎಲ್ಲರೂ ಸಹಕರಿಸಿ ಎಂದು ಚಿತ್ರತಂಡ ಹೇಳಿದೆ. ಸುದ್ದಿಗೋಷ್ಟಿ ಕ್ಯಾನ್ಸಲ್ ಆಗಿದೆ.