ಚಾಮರಾಜನಗರ : ಅವಧಿ ಮೀರಿದ,ಕಳಪೆ ಬಿತ್ತನೆ ಬೀಜ ಕೊಟ್ಟಿರುವ ಹಿನ್ನಲೆ ರೈತನಿಗೆ ಕೈಕೊಟ್ಟ ಫಸಲು ಕೈಕೊಟ್ಟಿದ್ದು ಬೀಜ ಖರೀದಿ ಮಾಡಿದ ಕಂಪನಿ ವಿರುದ್ಧ ಕಾನೂನು ಕ್ರಮಕ್ಕೆ ರೈತ ಒತ್ತಾಯ ಮಾಡಿರುವ ಘಟನೆ
ಗುಂಡ್ಲುಪೇಟೆ ತಾಲೂಕಿನ ಹಸಗೂಲಿ ಗ್ರಾಮದಲ್ಲಿ ನಡೆದಿದೆ.
ಲೋಕೇಶ್ ಎಂಬ ರೈತನಿಗೆ ಫಸಲು ಕೈಕೊಟ್ಟಿದೆ.
ಲಲಿತಾ ಸೀಡ್ಸ್ ಎಂಬ ಸೀಡ್ಸ್ ಕಂಪನಿಯಿಂದ ವಂಚನೆಯಾಗಿದೆ ಎಂದು ರೈತರ ಆರೋಪವಾಗಿದೆ.
ಗುಂಡು ಬದನೆ ಬೀಜ ಖರೀಸಿಸಿ ಬಿತ್ತನೆ ಮಾಡಿದ್ದ ರೈತ.
ಒಂದೂವರೆ ಎಕರೆ ಜಮೀನಿನಲ್ಲಿ ಗುಂಡು ಬದನೆ ಬಿತ್ತಿದ್ದ ರೈತನಿಗೆ ನಿರಾಸೆ. ಫಲ ಕೊಡದ ಬದನೆ ಬೆಳೆ.
4400 ಪೈರುಗಳನ್ನ ಹಾಕಿ ಪೋಷಿಸಿದ್ದ ರೈತನಿಗೆ ಸಿಕ್ಕಿದ್ದು ಒಣಗಿದ ಮೊಗ್ಗು. ಒಂದು ಲಕ್ಷಕ್ಕೂ ಹೆಚ್ಚು ಹಣವನ್ನ ವ್ಯಯಿಸಿದ್ದ ರೈತನಿಗೆ ನಿರಾಸೆ. ಕಂಪನಿ ವಿರುದ್ಧ ಕ್ರಮಕ್ಕೆ ರೈತನ ಒತ್ತಾಯ. ಸೂಕ್ತ ಪರಿಹಾರ ಒದಗಿಸಿಕೊಡಿ ಇಲ್ಲವಾದರೆ ಕಾನೂನು ಹೋರಾಟ ಮಾಡುತ್ತೇನೆ ಎಂದು ರೈತ ಪಟ್ಟು ಹಿಡಿದಿದ್ದಾರೆ