• ಇತ್ತೀಚಿನ
  • ರಾಜ್ಯ
  • ರಾಜಕೀಯ
  • ಜಿಲ್ಲೆ
    • ಉಡುಪಿ
    • ಉತ್ತರಕನ್ನಡ
    • ಕಲ್ಬುರ್ಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೆಂಗಳೂರು ಗ್ರಾಮಾಂತರ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ದೇಶ
  • ಪ್ರಪಂಚ
  • ಸಿನಿಮಾ
  • ಕ್ರೀಡೆ
  • ಇತರೆ
  • E-paper
Reading: ಅವ್ಯವಸ್ಥೆಯ ಆಗರವಾದ ಅಂಬೇಡ್ಕರ್ ವಸತಿ ಶಾಲೆ !
Share
Aa
Rajyadharma NewsRajyadharma News
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಅಪರಾಧ
  • ಪ್ರವಾಸ
  • ವಿಜ್ಞಾನ
  • ತಂತ್ರಜ್ಞಾನ
  • ಫ್ಯಾಷನ್
Search
  • Home
  • Categories
    • ರಾಜಕೀಯ
    • ಸಿನಿಮಾ
    • ತಂತ್ರಜ್ಞಾನ
    • ಪ್ರವಾಸ
    • ಫ್ಯಾಷನ್
    • ವ್ಯವಹಾರ
    • ವಿಜ್ಞಾನ
    • ಆರೋಗ್ಯ
  • ಜಿಲ್ಲೆ
    • ಮೈಸೂರು
    • ಮಂಡ್ಯ
    • ಚಾಮರಾಜನಗರ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
Follow US
  • Advertise
© 2022 Foxiz News Network. Ruby Design Company. All Rights Reserved.
Rajyadharma News > Blog > ಜಿಲ್ಲೆ > ಮೈಸೂರು > ಅವ್ಯವಸ್ಥೆಯ ಆಗರವಾದ ಅಂಬೇಡ್ಕರ್ ವಸತಿ ಶಾಲೆ !
ಜಿಲ್ಲೆಮೈಸೂರು

ಅವ್ಯವಸ್ಥೆಯ ಆಗರವಾದ ಅಂಬೇಡ್ಕರ್ ವಸತಿ ಶಾಲೆ !

admin
Last updated: 2024/01/09 at 3:21 AM
admin
Share
3 Min Read
SHARE

ಮೈಸೂರು : ಸಾಲಿಗ್ರಾಮ ತಾಲ್ಲೋಕಿನ ಸಕ್ಕರೆ ಗ್ರಾಮದ ಅಂಬೇಡ್ಕರ್ ವಸತಿ ಶಾಲೆಯೇ ಅವ್ಯವಸ್ಥೆಯಿಂದ ಕೂಡಿದ್ದು ಶಾಲೆಯಲ್ಲಿ ವಾಸಿಸುವ ಮಕ್ಕಳು ನಿತ್ಯ ಇಂತಹ ವಾತಾವರಣದಲ್ಲಿಯೇ ಕಾಲಕಳೆಯುವಂತಾಗಿದ್ದು ಶೌಚಾಲಯಗಳ ಪರಿಸ್ಥಿತಿಯಂತೂ ಹೇಳತೀರದಾಗಿದ್ದು ಗಂಡು ಮತ್ತು ಹೆಣ್ಣು ಮಕ್ಕಳ ಎರಡೂ ವಿಭಾಗದಲ್ಲಿಯೂ ಇಂತಹದೇ ವಾತಾವರಣದಲ್ಲಿ ಮಕ್ಕಳು ಕಲಿಯಬೇಕಾದ ಅನಿವಾರ್ಯತೆಯಲ್ಲಿರುವುದು ದುರದೃಷ್ಟಕರ ಸಂಗತಿ.


ಗಬ್ಬೆದ್ದು ನಾರುವ ಶೌಚಾಲಯ _ ಮಕ್ಕಳ ಶೌಚಾಲಯ ವಿಭಾಗವಂತೂ ತೀರಾ ಹದಗೆಟ್ಟಿದ್ದು ಈ ಶಾಲೆ ಉದ್ಘಾಟನೆಯಾಗಿ ಕೇವಲ ೧ವರ್ಷ ಕಳೆದಿದ್ದು ಅಲ್ಲಿನ ಶೌಚಾಲಯಗಳನ್ನು ನೋಡಿದರೆ ಎಷ್ಟೋ ೧೦ ವರ್ಷವಾದಂತೆ ಕಾಣುತ್ತಿದ್ದು ಮಕ್ಕಳು ಬಳಸುವ ವಾಷ್ ಬೇಸಿನ್‌ಗಳು ಪಾಚಿಕಟ್ಟಿ ಕೆಂಪು ಬಣ್ಣಕ್ಕೆ ತಿರುಗಿದ್ದು ಶೌಚಾಲಯಗಳ ಕೊಠಡಿಗಳ ಟೈಲ್ಸ್ಗಳ ಮೇಲೆ ಮಣ್ಣು ಹಾಗೆಯೇ ಇದ್ದು ಮೂತ್ರಾಲಯದ ಬೇಸಿನ್‌ಗಳ ವಾಸನೆ ತಡೆಗಟ್ಟಲು ಮೈಗೆ ಹಾಕುವ ಸೋಪುಗಳನ್ನು ಹಾಕಿದ್ದಾರೆ.

ಅಶುಚಿತ್ವದ ಮಲಗುವ ಕೋಣೆ –ಮಕ್ಕಳು ಮಲಗುವ ಕೋಣೆಯಲ್ಲಿ ಯಾವುದೇ ಹಾಸಿಗೆಯಿಲ್ಲದೇ ಚಾಪೆಯಲ್ಲಿಯೇ ಮಲಗಬೇಕಿದ್ದು ಅದೂ ಕೂಡಾ ವಸತಿ ಶಾಲೆಯಿಂದ ವಿತರಣೆಯಾಗದೇ ಮಕ್ಕಳೇ ಮನೆಯಿಂದ ತರಬೇಕಿದ್ದು ಯಾವುದೇ ಮಂಚ( ಬಂಕರ್ ಕಾಟ್ ) ದ ವ್ಯವಸ್ಥೆ ಇಲ್ಲಿನ ಮಕ್ಕಳಿಗೆ ಕನಸಾಗಿದ್ದು ಋತುಮತಿಯಾದ ಮಕ್ಕಳ ಗೋಳು ಇಲ್ಲಿ ಕೇಳುವವರೇ ಇಲ್ಲದಂತಾಗಿದ್ದು ಆ ಮಕ್ಕಳು ಕೂಡಾ ನೆಲದಲ್ಲಿಯೇ ಮಲಗಬೇಕಿರುವುದು ಆತಂಕದ ಸಂಗತಿಯಾಗಿದ್ದು ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳು ಕಂಡೂ ಕಾಣದಂತಿರುವುದು ದುರದೃಷ್ಟಕರ.


ಕಟ್ಟಡದ ಹಿಂಬಾಗದಲ್ಲಿ ಯಾವುದೇ ಸ್ವಚ್ಚತೆ ಇಲ್ಲವಾಗಿದ್ದು ಇಲ್ಲಿ ಸ್ವಚ್ಚ ಮಾಡಲೂ ಯಾರೂ ಇಲ್ಲವೆನೋ ಎಂಬ ಸ್ಥಿತಿ ಇದ್ದು ವಸತಿ ಶಾಲೆಗಳ ಹಿಂಬಾಗ ಕಸದ ರಾಶಿಯೇ ಇದ್ದರೂ ಅದನ್ನು ಸ್ವಚ್ಚಗೊಳಿಸುವ ಬದಲು ಅಲ್ಲಿಯೇ ಸುಟ್ಟಹಾಕುತ್ತಿದ್ದು ಪತ್ರಕರ್ತರು ಭೇಟಿ ನೀಡಿದ ಸಂಧರ್ಭದಲ್ಲಿ ಮಕ್ಕಳ ಕೋಣೆಗಳನ್ನು ಸ್ವಚ್ಚಗೊಳಿಸಿ ಶೌಚಾಲಯಗಳಿಗೆ ಪೆನಾಯಿಲ್ ಹಾಕುವ ಕೆಲಸವಾಗಿದ್ದು ಇಲ್ಲಿನ ಕೆಲಸಗಾರರ ಸೂಕ್ಷö್ಮತೆಗೆ ಸಾಕ್ಷಿಯಾಯಿತು.


ಹುಳು ತುಂಬಿದ ಅಕ್ಕಿ : ಇದೇ ವೇಳೆ ಅಡುಗೆ ಕೋಣೆಯ ದಾಸ್ತಾನು ಕೊಠಡಿಯಲ್ಲಿ ಅಕ್ಕಿ ಚೀಲ ತೆರೆದು ನೋಡಿದರೆ ಜಿರಳೆಗಳು ಕಂಡುಬAದಿದ್ದು ಈ ಬಗ್ಗೆ ಶಾಲೆಯ ವಾರ್ಡನ್ ಅವರು ಅದು ಸ್ವಚ್ಚಗೊಳಿಸಿ ಇಟ್ಟಿರುವ ನುಚ್ಚು ಅಕ್ಕಿ ಎಂದು ಸಮಜಾಯಿಸಿ ನೀಡಿದ್ದು ಪೋಷಕರು ಮಾತ್ರ ಯಾವುದೇ ಸ್ವಚ್ಚತೆ ಮಾಡದೇ ಅದೇ ಅಕ್ಕಿಯನ್ನು ಊಟಕ್ಕೆ ನೀಡುತ್ತಾರೆ ಎಂದು ಆರೋಪಿಸಿದ್ದಾರೆ.


ಹೆಣ್ಣು ಮಕ್ಕಳಿಗೆ ವಾರ್ಡನ್ ಇಲ್ಲ : ಯಾವುದೇ ವಸತಿ ಶಾಲೆಗಳಲ್ಲಿ ಹೆಣ್ಣು ಮಕ್ಕಳನ್ನು ದಾಖಲು ಮಾಡಿಕೊಂಡಲ್ಲಿ ಮಹಿಳಾ ವಾರ್ಡನ್ ಇರಲೇಬೇಕೆಂಬ ಬಾಲನ್ಯಾಯ ಕಾಯ್ದೆಯ ನಿಯಮ ಇದ್ದರೂ ಇಲ್ಲಿ ಮಹಿಳಾ ವಾರ್ಡನ್ ಇಲ್ಲದೇ ಮಕ್ಕಳನ್ನು ನೋಡಿಕೊಳ್ಳಲಾಗುತ್ತಿದ್ದು ಈ ಬಗ್ಗೆ ಪತ್ರಿಕೆ ಪ್ರಶ್ನಿಸಿದರೆ ಶಾಲೆಯ ಶಿಕ್ಷಕಿಯೊಬ್ಬರು ನೋಡಿಕೊಳ್ಳುತ್ತಾರೆ ಎಂಬ ಉತ್ತರ ಬಂದಿದ್ದು ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ವಸತಿ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಏನು ಕ್ರಮಕೈಗೊಳ್ಳುವುದೋ ಕಾದು ನೋಡಬೇಕಿದೆ.


ಶಿಕ್ಷಕರೇ ಇಲ್ಲ : ೨೦೦ಕ್ಕೂ ಹೆಚ್ಚಿನ ಮಕ್ಕಳಿಗೆ ಶಿಕ್ಷಣ ನೀಡಬೇಕಾದ ಶಾಲೆಯಲ್ಲಿ ೯ಮಂದಿ ಶಿಕ್ಷಕರಿಗೆ ಅವಕಾಶವಿದ್ದು ಇರುವುದು ಕೇವಲ ೪ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದು ಹೊರಗುತ್ತಿಗೆ ಮೂಲಕ ಶಿಕ್ಷಕರನ್ನು ನೇಮಿಸಿಕೊಂಡು ಶಾಲೆ ನಡೆಸುತ್ತಿರುವುದು ಇಲ್ಲಿನ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.


ಪ್ರತಿಭಟನೆ ಮಾಡಿದ ಪೋಷಕರು : ಈ ಬಗ್ಗೆ ಇಂದು ಶಾಲೆಯ ಆವರಣದಲ್ಲಿ ಪೋಷಕರು ಜಮಾಯಿಸಿ ಪ್ರತಿಭಟನೆ ಮಾಡಿದ್ದು ರಾತ್ರಿ ವೇಳೆ ಕರೆಂಟ್ ಇಲ್ಲವಾದರೆ ಮಕ್ಕಳೇ ಮೇಣದ ಬತ್ತಿ ಹಚ್ಚಿ ಓದಬೇಕು ಇಲ್ಲ ಶಾಲೆಯ ವತಿಯಿಂದ ಕನಿಷ್ಠ ಲ್ಯಾಂಪ್‌ಗಳನ್ನು ನೀಡಿಲ್ಲ ಹಾಗೂ ಮಕ್ಕಳು ಮಲಗುವ ಕೋಣೆಯಲ್ಲಿ ಅವರ ವಸ್ತುಗಳು ಇರುವ ಟ್ರಂಕ್‌ಗಳನ್ನು ಒಡೆದು ಹಾಕಿರುವ ಘಟನೆಗಳು ನಡೆದಿದ್ದು ಶಾಲೆಯ ಪ್ರಿನ್ಸಿಪಾಲ್ ಸುರೇಶ್ ಅವರನ್ನು ಈ ಬಗ್ಗೆ ಕೇಳಿದರೆ ಉಢಾಫೆ ಮಾತನಾಡುತ್ತಿದ್ದು ಅವರನ್ನು ತಕ್ಷಣ ವರ್ಗಾವಣೆ ಮಾಡಿ ಎಂದು ಆಡಳಿತ ಕಚೇರಿ ಎದುರು ೧೫ಕ್ಕೂ ಹೆಚ್ಚು ಮಕ್ಕಳ ಪೋಷಕರು ಆಗ್ರಹಪಡಿಸಿದ ಘಟನೆಯೂ ಜರುಗಿತು.


ಒಟ್ಟಾರೆ ಹಿಂದೊಮ್ಮೆ ಶೌಚಾಲಯವನ್ನು ಮಕ್ಕಳಿಂದ ಸ್ವಚ್ಚಗೊಳಿಸಿ ವಿವಾದಕ್ಕೀಡಾಗಿದ್ದ ಈ ವಸತಿ ಶಾಲೆ ಮತ್ತೊಮ್ಮೆ ಪೋಷಕರ ಕೆಂಗಣ ್ಣಗೆ ಗುರಿಯಾಗಿದ್ದು ಈಗಲಾದರೂ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತ ಗಮನಹರಿಸಿ ಕೋಟ್ಯಾಂತರ ರೂಗಳನ್ನು ವೆಚ್ಚ ಮಾಡಿ ಕಟ್ಟಿದ ಮೊರಾರ್ಜಿ ಶಾಲೆ ಗುಣಮಟ್ಟದ ಶಿಕ್ಷಣ ನೀಡಲಿ ಎಂಬುದೇ ಆಶಯವಾಗಿದೆ.ಪ್ರತಿಭಟನೆಯಲ್ಲಿ ಸಾಲಿಗ್ರಾಮ ಗ್ರಾಪಂ ಸದಸ್ಯ ಹರೀಶ್,ಚನ್ನಕಲ್ ಕಾವಲ್‌ನ ಮೋಹನ್,ಜೈಸ್ವಾಮಿ,ರಘು,ಶಿವಶಂಕರ್,ಮAಚಯ್ಯ,ಸುನೀಲ್,ರಮೇಶ,ರೇಖಾ,,ಮೋಹನಕುಮಾರಿ ಮನುಪ್ರವೀಣ್ ಅವರುಗಳು ಪ್ರತಿಭಟನೆಯಲ್ಲಿ ಇದ್ದರು.



ನಾವು ಶಿಕ್ಷಣಕ್ಕಾಗಿ ಪಿರಿಯಾಪಟ್ಟಣ ತಾಲ್ಲೋಕಿನಿಂದ ಇಲ್ಲಿಗೆ ದಾಖಲಾತಿ ಮಾಡಿದ್ದು ಇಷ್ಟು ಉತ್ತಮವಾದ ಕಟ್ಟಡವಿದ್ದರು ಸೌಲಭ್ಯಗಳು ಮಾತ್ರ ನಿಕೃಷ್ಟವಾಗಿದೆ,ಸರ್ಕಾರ ಉತ್ತಮ ಪ್ರಿನ್ಸಿಪಾಲ್ ಅವರನ್ನು ನೇಮಕ ಮಾಡಿ ಇನ್ನಾದರೂ ಮಕ್ಕಳಿಗೆ ಉತ್ತಮ ಶಿಕ್ಷಣ,ಸೌಲಭ್ಯಗಳನ್ನು ನೀಡಲಿ ಇಲ್ಲವಾದರೆ ನಮ್ಮ ಮಕ್ಕಳನ್ನು ವಾಪಸ್ ಮನೆಗೆ ಕಳುಹಿಸಲಿ
ಮೊಹನ್ ಕುಮಾರ್

You Might Also Like

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ

ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್

ದಸರಾ ಉದ್ಘಾಟಕರ ಪರ ಪ್ರತಿಭಟನೆ

ಕಾರ್ಮಿಕರ ಸ್ಥಳಕ್ಕೆಬಂದ ಕೈ ಶಾಸಕ ಧರಣಿಕೂರುವ ಎಚ್ವರಿಕೆ ಕೊಟ್ಟು ಕೆಂಡಾಮಂಡಲ!?

ಚುಂಚನಕಟ್ಟೆ ಜಲಪಾತದ ಮೆರಗು

TAGGED: mysuru Saligrama Ambedkar Residential school hcmahadevappa Krnagar siddaramiah dkshivakumar
admin January 9, 2024
Share this Article
Facebook Twitter Whatsapp Whatsapp LinkedIn Copy Link
Previous Article ವಿದ್ಯುನ್ಮಾನ ಮತಯಂತ್ರಗಳ ಪ್ರಾತ್ಯಕ್ಷಿಕೆಗೆ ಜಿಲ್ಲಾಧಿಕಾರಿಗಳಾದ ಕೆವಿ ರಾಜೇಂದ್ರ ಚಾಲನೆ
Next Article ಪ್ರೀತಿಸಿ ಕೈಕೊಟ್ಟ ಪ್ರಿಯತಮನ ಮನೆ ಮುಂದೆ ಯುವತಿ ಪ್ರತಿಭಟನೆ
Leave a comment Leave a comment

Leave a Reply Cancel reply

Your email address will not be published. Required fields are marked *

Join our group

Stay Connected

235.3k Followers Like
69.1k Followers Follow
56.4k Followers Follow
- Advertisement -
Ad imageAd image

Latest News

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ
ಜಿಲ್ಲೆ ಮೈಸೂರು ರಾಜ್ಯ September 8, 2025
ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್
ಜಿಲ್ಲೆ ಮೈಸೂರು ರಾಜ್ಯ September 7, 2025
ದಸರಾ ಉದ್ಘಾಟಕರ ಪರ ಪ್ರತಿಭಟನೆ
ಇತರೆ ಮೈಸೂರು September 6, 2025
ಕಾರ್ಮಿಕರ ಸ್ಥಳಕ್ಕೆಬಂದ ಕೈ ಶಾಸಕ ಧರಣಿಕೂರುವ ಎಚ್ವರಿಕೆ ಕೊಟ್ಟು ಕೆಂಡಾಮಂಡಲ!?
ಜಿಲ್ಲೆ ಮೈಸೂರು August 1, 2024

ರಾಜ್ಯ ರಾಜಕೀಯ, ಸಿನಿಮಾ ಸುದ್ದಿಗಳು, ಕ್ರೈಮ್ ಸ್ಟೋರಿಗಳು ಮೈಸೂರು ಸುತ್ತಮುತ್ತಲಿನ ಇಂಟ್ರೆಸ್ಟಿಂಗ್ ಸುದ್ದಿಗಳಿಗಾಗಿ ನೋಡ್ತಾ ಇರಿ ರಾಜ್ಯಧರ್ಮ ನ್ಯೂಸ್ ಸತ್ಯವೇ ನಮ್ಮ ಧರ್ಮ

Follow US

© 2023 Rajyadharma News. All Rights Reserved | Developed By Interwebplus.com

Removed from reading list

Undo
Welcome Back!

Sign in to your account

Lost your password?