ಮೈಸೂರು : ಅಯೋಧ್ಯಾ ರಾಮಮಂದಿರ ಲೋಕಾರ್ಪಣೆ ವಿಚಾರಕ್ಕೆ ರಾಜ್ಯದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ರಾಜಕೀಯ ಸಂಘರ್ಷ ಏರ್ಪಟ್ಟಿದ್ದು
ಬಿಜೆಪಿಗೆ ಸಚಿವ ಡಾ ಎಚ್ ಸಿ ಮಹದೇವಪ್ಪ ತಿರುಗೇಟು ಕೊಟ್ಟಿದ್ದಾರೆ.
ರಾಜ್ಯಗಳು ನೀಡುವ ತೆರಿಗೆ ಹಣವನ್ನು ರಾಜ್ಯಗಳ ಅಗತ್ಯಕ್ಕೆ ತಕ್ಕಂತೆ ನೀಡಬೇಕಿದ್ದ ಕೇಂದ್ರ ಸರ್ಕಾರ
ಚುನಾವಣಾ ಉದ್ದೇಶದಿಂದ ನೀಡುವ ಕೆಟ್ಟ ಪ್ರವೃತ್ತಿಗೆ ಚಾಲನೆ ನೀಡಿದ ಕಾರಣದಿಂದ ಅನುದಾನದ ಹಂಚಿಕೆಯಲ್ಲಿ ಅಸಮಾನತೆ ಉಂಟಾಗಿದೆ.
ಧಾರ್ಮಿಕವಾಗಿ ಬಹಳಷ್ಟು ಆಸಕ್ತಿ ತೋರಿಸುತ್ತಿರುವ ಬಿಜೆಪಿ ಸಂಸದರಿಗೆ ತೆರಿಗೆ ಹಣ ಕೇಳಿ ರಾಜ್ಯದ ಬರದ ಸ್ಥಿತಿಗೆ ನೆರವಾಗಬೇಕೆಂಬ ಕನಿಷ್ಠ ಪ್ರಜ್ಞೆ ಇಲ್ಲ.
ಜನರ ಬದುಕಿಗೆ ನೆರವಾಗದ ಇವರಿಗೆ ಧರ್ಮದ ಆಶಯಗಳ ಪರಿಚಯ ಎಂದಿಗೂ ಇಲ್ಲ ಎಂದು
ಸಾಮಾಜಿಕ ಜಾಲತಾಣದ ಮೂಲಕ ಡಾ ಎಚ್ ಸಿ ಮಹದೇವಪ್ಪ ವಾಗ್ದಾಳಿ ನಡೆಸಿದ್ದಾರೆ