ಮೈಸೂರು : ಎಲ್ಲಾ ಸರ್ಕಾರಗಳು ರೈತರ ಮೇಲೆ ಗದಾಪ್ರಹಾರ ಮಾಡುತ್ತಿವೆ. ರೈತರು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ.ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಹಲವು ಬೇಡಿಕೆಗಳನ್ನ ಇಟ್ಟುಕೊಂಡು ಪ್ರತಿಭಟನೆ ಮಾಡಿತ್ತು.ಪ್ರಧಾನಿಗಳು ಸ್ವಾಮಿನಾಥನ್ ವರದಿ ಜಾರಿ ಮಾಡುತ್ತೇವೆ ಪ್ರತಿಭಟನೆ ಕೈಬಿಡಿ ಎಂದಿದ್ರು.
ಇಲ್ಲಯವರೆಗೆ ಸ್ವಾಮಿನಾಥನ್ ವರದಿ ಜಾರಿಗೆ ಮುಂದಾಗಿಲ್ಲ.ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದರು.
ನಗರದ ಜಲದರ್ಶಿನಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರೈತರನ್ನ ಜಾಗೃತಿ ಮೂಡಿಸಲು ಕೇಂದ್ರಕ್ಕೆ ಎಚ್ಚರಿಕೆ ನೀಡಲು ರೈತ ಅಧಿವೇಶನ ಆಯೋಜನೆ ಮಾಡಿದ್ದೇವೆ.ತಮಿಳುನಾಡು, ಕೇರಳ, ತೆಲಂಗಾಣ, ಕರ್ನಾಟಕದಲ್ಲಿ ರೈತ ಅಧಿವೇಶನ ಹಮ್ಮಿಕೊಂಡಿದ್ದೇವೆ.
ಡಿಸೆಂಬರ್ 23ರಂದು ಬೆಂಗಳೂರಿನಲ್ಲಿ ರೈತ ಮಹಾ ಅಧಿವೇಶನ ನಡೆಯುತ್ತಿದೆ.ವಿವಿಧ ರಾಜ್ಯದ ರೈತ ನಾಯಕರು,ರೈತರು ಅಧಿವೇಶನಕ್ಕೆ ಆಗಮಿಸುತ್ತಾರೆ ಎಂದರು.
ರಾಜ್ಯ ಸರ್ಕಾರದಿಂದ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ವಿಚಾರಕ್ಕೆ ಮಾತನಾಡಿದ ಅವರು, ರೈತರಿಗೆ ಬ್ಯಾಂಕ್ ಗಳು ಬಡ್ಡಿ ರಹಿತ ಸಾಲ ನೀಡುತ್ತಿವೆ.
ಈ ವೇಳೆ ಸರ್ಕಾರ ರೈತರ ಸಾಲದ ಮೇಲಿನ ಬಡ್ಡಿ ಮನ್ನಾ ಮಾಡಿದರೆ ಸಾಲದು.ರಾಷ್ಟ್ರೀಕೃತ ಬ್ಯಾಂಕ್ ಸೇರಿದಂತೆ ಎಲ್ಲಾ ಬ್ಯಾಂಕ್ ಗಳ ಸಾಲ ಮನ್ನಾ ಮಾಡಬೇಕು.
ಸರ್ಕಾರದಿಂದ 2ಸಾವಿರ ಪರಿಹಾರ ಘೋಷಣೆ ವಿಚಾರ.
ಸರ್ಕಾರ ರೈತರಿಗೆ ಏನು ಭಿಕ್ಷೆ ನೀಡುತ್ತಿದೆಯ.
ರೈತರ ಕಣ್ಣಿಗೆ ಮಣ್ಣೇರಚುವ ಕೆಲಸ ಸರ್ಕಾರ ಮಾಡುತ್ತಿದೆ.
ಎರಡು ಸಾವಿರ ಅವರು ಕೊಡೋದು ಬೇಡ.
ನಮಗೆ ಗೊತ್ತಿದೆ ಪರಿಹಾರ ಹೇಗೆ ತಕೋಬೇಕು ಎಂಬುದು.
ಎಕರೆಗೆ 25ಸಾವಿರ ಪರಿಹಾರ ಕೊಡಬೇಕು.
ರೈತರಿಗೆ ಪರಿಹಾರ ಕೊಡಿಸುವಂತ ನಿಟ್ಟಿನಲ್ಲಿ ನಮ್ಮ ಹೋರಾಟ ನಿರಂತರ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು