ಮೈಸೂರು : ಸಾಲಭಾದೆಯಿಂದ ಕೆರೆಗೆ ಹಾರಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಣಸೂರು ತಾಲ್ಲೂಕು ಅತ್ತಿಗುಪ್ಪೆ ಗ್ರಾಮದಲ್ಲಿ ನಡೆದಿದೆ
ಕುಮಾರ್ 45 ಆತ್ಮಹತ್ಯೆ ಮಾಡಿಕೊಂಡ ರೈತ.
ಎರಡು ಎಕರೆ ಜಮೀನು ಹೊಂದಿದ್ದ ರೈತ ಕುಮಾರ್
ತಂಬಾಕು ಹಾಗೂ ಶುಂಠಿ ಬೆಳೆ ಬೆಳೆದಿದ್ದ ರೈತ
ಮಳೆ ಕೈ ಕೊಟ್ಟು ಹಿನ್ನೆಲೆ ಬೆಳೆ ನಷ್ಟವಾಗಿತ್ತು.
ಕರ್ನಾಟಕ ಬ್ಯಾಂಕ್ನಲ್ಲಿ 5 ಲಕ್ಷ ಕೈ ಸಾಲ ಮೂರು ಲಕ್ಷ ಸೇರಿ ಒಟ್ಟು 10 ಲಕ್ಷ ಸಾಲ ಮಾಡಿಕೊಂಡಿದ್ದ.
ಸಾಲ ಹಿಂದಿರುಗಿಸಲಾಗದೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.