ಚಾಮರಾಜನಗರ : ಕೆ.ಎಸ್ ಆರ್ ಟಿ ಸಿ ಬಸ್ ಗೆ ಸಿಕ್ಕಿ ಗುಡ್ಡಗಾಡು ಮಹಿಳೆಯೊಬ್ಬರು ಸಾವನ್ನಪ್ಪಿದ ಘಟನೆ ಚಾಮರಾಜನಗರ ತಾಲ್ಲೂಕಿನ ಪುಣಜನೂರು ಸಮೀಪ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ಪುಣಜನೂರು ಕಡೆಯಿಂದ ಚಾಮರಾಜನಗರ ಕಡೆಗೆ ಬರುತ್ತಿದ್ದ ಕೆ.ಎಸ್. ಆರ್. ಟಿ.ಸಿ ಬಸ್ ಗೆ ಬೂಡಿಪಡಗ (ರಂಗಸಂದ್ರ) ಗ್ರಾಮದ ರುಕ್ಕಿಬಾಯಿ (70) ಸ್ಥಳದಲ್ಲೇ ಸಾವಪ್ಪಿದ್ದಾರೆ.
ರಸ್ತೆ ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿದ್ದರಿಂದ ಬಸ್ ಚಲಿಸಲಾಗದೆ ಸ್ಥಳದಲ್ಲೇ ನಿಂತಿದೆ. ಬಸ್ ನಿಲ್ಲಿದ್ದ ಪ್ರಯಾಣಿಕರು ಬೇರೆ ಬಸ್ ನಲ್ಲಿ ಪ್ರಯಾಣಿಸಿದರು. ರಾಮಸಮುದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಮಹಜರ್ ನಡೆಯಬೇಕಾಗಿದೆ.