• ಇತ್ತೀಚಿನ
  • ರಾಜ್ಯ
  • ರಾಜಕೀಯ
  • ಜಿಲ್ಲೆ
    • ಉಡುಪಿ
    • ಉತ್ತರಕನ್ನಡ
    • ಕಲ್ಬುರ್ಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೆಂಗಳೂರು ಗ್ರಾಮಾಂತರ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ದೇಶ
  • ಪ್ರಪಂಚ
  • ಸಿನಿಮಾ
  • ಕ್ರೀಡೆ
  • ಇತರೆ
  • E-paper
Reading: ಅಕ್ರಮ ಗೋ ಸಾಗಾಣೆ ಮೇಲೆ ದಾಳಿ 200ಕ್ಕು ಹೆಚ್ಚು ಗೋವುಗಳ ರಕ್ಷಣೆ
Share
Aa
Rajyadharma NewsRajyadharma News
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಅಪರಾಧ
  • ಪ್ರವಾಸ
  • ವಿಜ್ಞಾನ
  • ತಂತ್ರಜ್ಞಾನ
  • ಫ್ಯಾಷನ್
Search
  • Home
  • Categories
    • ರಾಜಕೀಯ
    • ಸಿನಿಮಾ
    • ತಂತ್ರಜ್ಞಾನ
    • ಪ್ರವಾಸ
    • ಫ್ಯಾಷನ್
    • ವ್ಯವಹಾರ
    • ವಿಜ್ಞಾನ
    • ಆರೋಗ್ಯ
  • ಜಿಲ್ಲೆ
    • ಮೈಸೂರು
    • ಮಂಡ್ಯ
    • ಚಾಮರಾಜನಗರ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
Follow US
  • Advertise
© 2022 Foxiz News Network. Ruby Design Company. All Rights Reserved.
Rajyadharma News > Blog > ಜಿಲ್ಲೆ > ಮೈಸೂರು > ಅಕ್ರಮ ಗೋ ಸಾಗಾಣೆ ಮೇಲೆ ದಾಳಿ 200ಕ್ಕು ಹೆಚ್ಚು ಗೋವುಗಳ ರಕ್ಷಣೆ
ಅಪರಾಧಜಿಲ್ಲೆಮೈಸೂರು

ಅಕ್ರಮ ಗೋ ಸಾಗಾಣೆ ಮೇಲೆ ದಾಳಿ 200ಕ್ಕು ಹೆಚ್ಚು ಗೋವುಗಳ ರಕ್ಷಣೆ

admin
Last updated: 2023/09/28 at 1:59 AM
admin
Share
3 Min Read
SHARE

ಹ್ಯಾಂಡ್ ಪೋಸ್ಟ್ : ಅಕ್ರಮವಾಗಿ ಕೇರಳಕ್ಕೆ ಸಾಗಣಿಕೆಯಾಗುತ್ತಿದ್ದ ಸುಮಾರು ೨೦೦ಕ್ಕೂ ಅಧಿಕ ಗೋವುಗಳನ್ನು ಖಚಿತ ಮಾಹಿತಿ ಮೇರೆಗೆ ಬೆಂಗಳೂರಿನ ಗೋಗ್ಯಾನ್ ಫೌಂಡೇಷನ್ ಮತ್ತು ಪ್ರಾಣಿದಯಾ ಸಂಘದವರು ದಾಳಿ ನಡೆಸಿ ವಾಹನ ಸಮೇತ ಹಿಡಿದು ಅಂತರಸಂತೆ ಠಾಣೆ ಪೊಲೀಸರ ವಶಕ್ಕೆ ನೀಡುವಲ್ಲಿ ಯಶಸ್ವಿಯಾಗಿದ್ದಾರೆ.


ಬೆಳ್ಳಬೆಳ್ಳಿಗೆ ಹ್ಯಾಂಡ್‌ಪೋಸ್ಟ್, ಅಂತರಸಂತೆ, ಕಾರಾಪುರ ಮಾರ್ಗವಾಗಿ ಅರಣ್ಯ ಇಲಾಖೆಯ ಚೆಕ್‌ಪೋಸ್ಟ್‌ಅನ್ನು ದಾಟಿ ಕೇರಳಕ್ಕೆ ೫ ಬೃಹತ್ ಕಂಟೈನರ್ ಲಾರಿ ಮತ್ತು ೫ ಗೂಡ್ಸ್ ವಾಹನಗಳಲ್ಲಿ ಸಾಗಿಸುತ್ತಿದ್ದ ಸುಮಾರು ೨೦೦ಕ್ಕೂ ಅಧಿಕ ಗೋವುಗಳನ್ನು ರಕ್ಷಣೆ ಮಾಡಲಾಗಿದೆ. ಸ್ಥಳೀಯರಿಂದ ಖಚಿತ ಮಾಹಿತಿಯ ಮೇರೆಗೆ ತಡರಾತ್ರಿ ಸಂಪೂರ್ಣ ಪ್ಲಾನ್ ಮಾಡಿಕೊಂಡ ಗೋಗ್ಯಾನ್ ಫೌಂಡೇಷನ್ ಮತ್ತು ಪ್ರಾಣಿಧಯೆ ಸಂಘದ ಸುಮಾರು ೧೩ಜನರ ತಂಡ ಮೂರು ತಂಡಗಳಾಗಿ ಕಾರ್ಯಾಚರಣೆ ಮಾಡಿದ್ದು, ಅಕ್ರಮವಾಗಿ ಗೋ ಸಾಗಿಸುತ್ತಿದ್ದ ೧೨ ವಾಹನಗಳಲ್ಲಿ ಪೈಕಿ ೧೦ ವಾಹನಗಳನ್ನು ಹಿಡಿದ್ದಾರೆ.


ಗೋ ಸಾಗಿಸುತ್ತಿದ್ದ ವಾಹನಗಳ ಪೈಕಿ ೨ ವಾಹನಗಳು ಅರಣ್ಯ ಇಲಾಖೆಯ ಚೆಕ್‌ಪೋಸ್ಟ್ ದಾಟಿದ್ದು, ಅವುಗಳನ್ನು ಮಚ್ಚೂರು ಬಳಿ ಗೋಗ್ಯಾನ್ ಪ್ರಾಣಿಧಯೆ ಸಂಘದವರು ಹಿಡಿದಿದ್ದಾರೆ. ಇದರ ಮಾಹಿತಿ ತಿಳಿದ ಉಳಿದ ವಾಹನಗಳು ಮತ್ತೇ ಹಿಂತಿರುಗಿದ್ದು, ಅಂತರಸಂತೆ ಪೊಲೀಸ್ ಠಾಣೆ ಎದುರು ಅಡ್ಡಗಟ್ಟಿದ ಪೊಲೀಸ್ ಸಿಬ್ಬಂದಿ ಹಾಗೂ ಬ್ಯಾರಿಕೇಡ್‌ಗೆ ಗುದ್ದಿ ವೇಗವಾಗಿ ನುಗ್ಗಿದ್ದಾರೆ. ಬಳಿಕ ಸಿನಿಮಿಯಾ ರೀತಿಯಲ್ಲಿ ಚೇಸ್ ಮಾಡಿದ ಪೊಲೀಸರು ನೂರಲಕುಪ್ಪೆ ಬಳಿ ವಾಹನಗಳನ್ನು ಅಡ್ಡಗಟ್ಟಿ ಕೆ.ಆರ್.ಪೇಟೆ, ಕಿಕ್ಕೇರಿ, ದರ್ಗ, ಮೈಸೂರು ಮೂಲದ ೧೧ ಮಂದಿ ಹಾಗೂ ಸುಮಾರು ೮ ವಾಹನಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬ್ಯಾರಿಕೇಡ್ ಗುದ್ದಿ ಎಸ್ಕೇಪ್ ಆಗಲು ಯತ್ನ: ಮಚ್ಚೂರು ಬಳಿ ಎರಡು ವಾಹನಗಳನ್ನು ಹಿಡಿದ ಕೂಡಲೇ ಉಳಿದ ವಾಹನಗಳು ಮಾರ್ಗ ಬದಲಾಯಿಸಲು ಯತ್ನಿಸಿದ್ದು, ಅಂತರಸಂತೆ ಬಳಿ ಪೊಲೀಸ್ ಠಾಣೆಯ ಮುಂಭಾಗ ಅಡ್ಡಗಟ್ಟಿದ ಸಿಬ್ಬಂದಿಗೆ ಗುದ್ದಿದ್ದಲ್ಲದೇ ಬ್ಯಾರಿಕೇಡ್‌ಗೂ ಡಿಕ್ಕಿ ಹೊಡೆದುಕೊಂಡು ಎಸ್ಕೇಪ್ ಆಗಲು ಯತ್ನಿಸಿದ್ದರು. ಬಳಿಕ ನೂರಲಕುಪ್ಪೆ ಬಳಿ ಪೊಲೀಸ್ ಸಿಬ್ಬಂದಿ ಸುರೇಶ್, ಗುರು, ಸೋಮೇಶ್ ಹಾಗೂ ಗ್ರಾಮಸ್ಥರಾದ ಪ್ರಸನ್ನ ಮತ್ತಿನ್ನಿತ್ತರು ಸೇರಿ ವಾಹನಗಳನ್ನು ಚೇಸ್ ಮಾಡಿ ಅಡ್ಡಗಟ್ಟಿ ಹಿಡಿದಿದ್ದಾರೆ. ಒಟ್ಟಾರೆ ೫ ಬೃಹತ್ ಕಂಟೈನರ್ ಲಾರಿಗಳು ಹಾಗೂ ೫ ಗೂಡ್ಸ್ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಾಹನಗಳಲ್ಲಿದ್ದ ಸುಮಾರು ೨೦೦ಕ್ಕೂ ಅಧಿಕ ಗೋವುಗಳನ್ನು ರಕ್ಷಿಸಿ ಮೈಸೂರಿನ ಪಿಂಜಿರಾ ಪೋಲ್‌ಗೆ ರಾವಾನಿಸಿದ್ದಾರೆ. ಅಲ್ಲದೆ ೧೧ ಜನರನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ.


ಈ ಭಾಗದಲ್ಲಿ ಅಕ್ರಮವಾಗಿ ಗೋ ಸಾಗಾಣಿಕೆ ನಡೆಯುತ್ತಿದ್ದು, ಈ ಭಾಗದ ಮುಖಂಡರು ಹಾಗೂ ಕೆಲ ಅಧಿಕಾರಿಗಳೇ ಇದಕ್ಕೆ ಸಾತ್ ನೀಡುತ್ತಿದ್ದಾರೆ ಎಂದು ಠಾಣೆ ಮುಂದೆ ನೆರೆದಿದ್ದ ಗ್ರಾಮಸ್ಥರು ಆರೋಪಿಸಿದ್ದಾರೆ. ಇಂದು ಗೋಗ್ಯಾನ್ ಫೌಂಡೇಷನ್ ಮತ್ತು ಪ್ರಾಣಿ ದಯೆ ಸಂಘದವರು ಈ ದಾಳಿ ನಡೆಸದಿದ್ದಲ್ಲಿ ಈ ಪ್ರಕರಣ ಬೆಳಕಿಗೇ ಬರುತ್ತಿರಲಿಲ್ಲ. ಎಲ್ಲಿಂದಲೋ ಗೋವುಗಳನ್ನು ತುಂಬಿಕೊಂಡು ವಾಹನಗಳು ಕರ್ನಾಟಕದ ಗಡಿಯನ್ನು ತಲುಪಿವೆ ಎಂದರೆ ಇದಕ್ಕೆ ದೊಡ್ಡ ದೊಡ್ಡ ಕೈಗಳ ಬೆಂಬಲವೇ ಇರಬೇಕು ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇದೇ ವೇಳೆ ಗೋ ಸಾಗಿಸುತ್ತಿದ್ದ ವಾಹನ ಚಾಲಕನೊಬ್ಬ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ‘ಕಳೆದ ೧೫ ದಿನಗಳಲ್ಲಿ ಮೂರು ಭಾರಿ ಕೇರಳಕ್ಕೆ ಗೋಗಳನ್ನು ಇದೇ ಮಾರ್ಗವಾಗಿ ಸಾಗಿಸಲಾಗಿದೆ. ಪೊಲೀಸ್ ಮತ್ತು ಅರಣ್ಯ ಇಲಾಖೆಯ ಚೆಕ್‌ಪೊಸ್ಟ್‌ನಲ್ಲಿ ಗೋವುಗಳಿವೆ ಎಂದರೆ ಅವರು ಚೆಕ್ ಮಾಡುವುದಿಲ್ಲ ನಾವು ಸುಲಭವಾಗಿ ಕೇರಳಕ್ಕೆ ಸಾಗಿಸುತ್ತೇವೆ’ ಎಂದಿರುವ ವಿಡಿಯೋ ವೈರಲ್ ಆಗಿದ್ದು, ಗೋವುಗಳ ಸಾಗಣಿಕೆಯಲ್ಲಿ ತಾಲ್ಲೂಕಿನ ಕೆಲ ಅಧಿಕಾರಿಗಳು ಹಾಗೂ ಮುಖಂಡರು ಶಾಮಿಲಾಗಿರುವ ಬಗ್ಗೆ ಸಾರ್ವಜನಿಕರು ಆರೋಪಿಸಿರುವುದಕ್ಕೆ ಪುಷ್ಠಿಕೊಡುವಂತಿದೆ.
ಸ್ಥಳಕ್ಕೆ ಡಿವೈಎಸ್‌ಪಿ ಮಹೇಶ್, ಸರಗೂರು ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ ರೆಡ್ಡಿ, ಅಂತರಸಂತೆ ಪಿಎಸ್‌ಐ ರವಿಶಂಕರ್ ಹಾಗೂ ಕ್ರೈಂ ವಿಭಾಗದ ಸಿಬ್ಬಂದಿ, ಅಂತರಸಂತೆ ಠಾಣೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹಾಜರಿದ್ದರು.

You Might Also Like

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ

ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್

ದಸರಾ ಉದ್ಘಾಟಕರ ಪರ ಪ್ರತಿಭಟನೆ

ಕಾರ್ಮಿಕರ ಸ್ಥಳಕ್ಕೆಬಂದ ಕೈ ಶಾಸಕ ಧರಣಿಕೂರುವ ಎಚ್ವರಿಕೆ ಕೊಟ್ಟು ಕೆಂಡಾಮಂಡಲ!?

ಚುಂಚನಕಟ್ಟೆ ಜಲಪಾತದ ಮೆರಗು

TAGGED: Mysuru police antarasante cows
admin September 28, 2023
Share this Article
Facebook Twitter Whatsapp Whatsapp LinkedIn Copy Link
Previous Article ಬಿಜೆಪಿ ಜೆಡಿಎಸ್ ಮೈತ್ರಿ ನಮ್ಮ ತಕರಾರಿಲ್ಲ ನಾನು ಅಡ್ವಾಣಿ ಭೇಟಿ ಮಾಡಿದ್ದು ನಿಜ – ಸಿಎಂ ಸಿದ್ದರಾಮಯ್ಯ
Next Article ನಾಯಿ ದಾಳಿಯಿಂದ ಗಾಯಗೊಂಡಿದ್ದ ಜಿಂಕೆ ರಕ್ಷಣೆ
Leave a comment Leave a comment

Leave a Reply Cancel reply

Your email address will not be published. Required fields are marked *

Join our group

Stay Connected

235.3k Followers Like
69.1k Followers Follow
56.4k Followers Follow
- Advertisement -
Ad imageAd image

Latest News

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ
ಜಿಲ್ಲೆ ಮೈಸೂರು ರಾಜ್ಯ September 8, 2025
ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್
ಜಿಲ್ಲೆ ಮೈಸೂರು ರಾಜ್ಯ September 7, 2025
ದಸರಾ ಉದ್ಘಾಟಕರ ಪರ ಪ್ರತಿಭಟನೆ
ಇತರೆ ಮೈಸೂರು September 6, 2025
ಕಾರ್ಮಿಕರ ಸ್ಥಳಕ್ಕೆಬಂದ ಕೈ ಶಾಸಕ ಧರಣಿಕೂರುವ ಎಚ್ವರಿಕೆ ಕೊಟ್ಟು ಕೆಂಡಾಮಂಡಲ!?
ಜಿಲ್ಲೆ ಮೈಸೂರು August 1, 2024

ರಾಜ್ಯ ರಾಜಕೀಯ, ಸಿನಿಮಾ ಸುದ್ದಿಗಳು, ಕ್ರೈಮ್ ಸ್ಟೋರಿಗಳು ಮೈಸೂರು ಸುತ್ತಮುತ್ತಲಿನ ಇಂಟ್ರೆಸ್ಟಿಂಗ್ ಸುದ್ದಿಗಳಿಗಾಗಿ ನೋಡ್ತಾ ಇರಿ ರಾಜ್ಯಧರ್ಮ ನ್ಯೂಸ್ ಸತ್ಯವೇ ನಮ್ಮ ಧರ್ಮ

Follow US

© 2023 Rajyadharma News. All Rights Reserved | Developed By Interwebplus.com

Removed from reading list

Undo
Welcome Back!

Sign in to your account

Lost your password?