ಮೈಸೂರು : ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕಾಲಿಗೆ ಬಿದ್ದದ್ದನ್ನು ವೈಭವೀಕರಿಸುವ ಅಗತ್ಯವಿಲ್ಲ ಎಂದು ಸಂಸದ ಪ್ರತಾಪಸಿಂಹ ಹೇಳಿದರು.
ನಾನು ಎಲ್ಲರ ಕಾಲಿಗೂ ನಮಸ್ಕಾರ ಮಾಡುತ್ತೇನೆ.
ನಾನು ಸಿದ್ದರಾಮಯ್ಯ ಅವರ ಕಾಲಿಗೂ ನಮಸ್ಕರಿಸಿದ್ದೇನೆ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಾಲಿಗೂ ಬಿದ್ದಿದ್ದೇನೆ.ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ, ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಆರ್.ಅಶೋಕ್ ಎಲ್ಲರ ಕಾಲಿಗೆ ಬಿದ್ದಿದ್ದೇನೆ.
ದೊಡ್ಡವರ ಕಾಲಿಗೆ ನಮಸ್ಕರಿಸುವುದು ನನ್ನ ರೂಢಿ.
ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.
ಮಾಜಿ ಪ್ರಧಾನಿ ದೇವೇಗೌಡರು ಹಿರಿಯರು.
ದೇಶದ ಪ್ರಧಾನಿಯಾಗಿ ಕೆಲಸ ಮಾಡಿದವರು.
ಅವರಷ್ಟು ಕೆಲಸ ಮಾಡಿದವರು ಬೇರೊಬ್ಬರಿಲ್ಲ.
ಅಂತಹವರು ಹಿಂದೆ ಇರಲಿಲ್ಲ, ಮುಂದೆ ಬರೋದು ಇಲ್ಲ.
ಮೋದಿ ಅವರೇ ದೇವೇಗೌಡರನ್ನ ಬಹಳ ಗೌರವಯುತವಾಗಿ ನೋಡಿಕೊಳ್ತಾರೆ.ಜಿಎಸ್ ಟಿ ಉದ್ಘಾಟನೆ ವೇಳೆ ಕೈ ಹಿಡಿದು ಕರೆದುಕೊಂಡು ಹೋದರು.
ಪಾರ್ಲಿಮೆಂಟ್ ಉದ್ಘಾಟನೆ ವೇಳೆ ಖುದ್ದು ಕರೆ ಮಾಡಿ ಆಹ್ವಾನಿಸಿದ್ದರು.ಅಂತಹವರ ಬಗ್ಗೆ ಹೆಚ್ಚು ಗೌರವ ಇಟ್ಟುಕೊಂಡಿದ್ದೇನೆ.ನಾನು ಮೈಸೂರಿಗೆ ಮಾತ್ರ ಸಂಸದನಲ್ಲ.ಕೊಡಗು ಭಾಗಕ್ಕೂ ನಾನು ಸಂಸದ ಮಲೆನಾಡಿನಲ್ಲಿ ಹಿರಿಯರಿಗೆ ಗೌರವ ಕೊಡುವುದು ಇದೆ.
ಆ ಹಿನ್ನೆಲೆ ನಾನು ದೊಡ್ಡವರಿಗೆ ನಮಸ್ಕರಿಸಿರುವೆ ಎಂದು
ಮಾಜಿ ಪ್ರಧಾನಿ ದೇವೇಗೌಡರನ್ನ ಪ್ರತಾಪ್ ಸಿಂಹ ಹಾಡಿ ಹೊಗಳಿದರು.