ಮೈಸೂರು : ಶಾಸಕರ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿದ್ದ ಹಿನ್ನಲೆ ಮುಂಬರುವ ಚುನಾವಣೆಗಳಿಗೆ ಸಿದ್ದವಿರುವಂತೆ ಸಿಎಂ ಸೂಚಿಸಿದ್ದಾರೆ ಎಂದು
ಶಾಸಕ ಹರೀಶ್ ಗೌಡ ಹೇಳಿದರು.
ರಾಜ್ಯದ ಎಲ್ಲಾ ಜಿಲ್ಲೆಯ ಶಾಸಕರು ಸಚಿವರ ಸಭೆ ನಡೆಸಿದ್ದಾರೆ.ಮುಂಬರುವ ಲೋಕಸಭೆ,ಸ್ಥಳೀಯ ಸಂಸ್ಥೆ,ಜಿಪಂ,ತಾಪಂ ಚುನಾವಣೆಗಳಿಗೆ ಸಿದ್ದರಾಗುವಂತೆ ಸಿಎಂ ಕರೆ ನೀಡಿದ್ದಾರೆ.20ಕ್ಕೂ ಹೆಚ್ಚು ಸ್ಥಾನ ಗೆಲ್ಲಲೇಕೆಂದು ಸೂಚನೆ ನೀಡಿದ್ದಾರೆ ಎಂದರು.
ಮೈಸೂರು ಮಹಾನಗರ ಪಾಲಿಕೆ ಚುನಾವಣೆ ವಿಚಾರವಾಗಿ ಮಾತನಾಡಿದ ಅವರು, ಮೈಸೂರು ನಗರದ ಶಾಸಕರು ನಾವು ಸಹ ಚರ್ಚೆ ಮಾಡಿದ್ವಿ.ಪಾಲಿಕೆ ಚುನಾವಣೆಗೂ ಕೂಡ ಸಿದ್ದರಾಗುವಂತೆ ತಿಳಿಸಿದ್ದಾರೆ.ಪಾರ್ಲಿಮೆಂಟ್ ಚುನಾವಣೆಗು ಮುನ್ನ ಡಿಸೆಂಬರ್ ನಲ್ಲಿ ಮೈಸೂರು ಮಹಾನಗರ ಪಾಲಿಕೆ ನಡೆಸಲು ಸಿದ್ಧತೆ ನಡೆದಿದೆ.
ಚಾಮರಾಜ,ಎನ್ ಆರ್ ಕ್ಷೇತ್ರಗಳಲ್ಲಿ ಹೆಚ್ಚಿನ ಮತ ಕೊಡಿಸಲು ಸಿಎಂ ತಿಳಿಸಿದ್ದಾರೆ ಎಂದರು.
ವಿಶ್ವ ವಿಖ್ಯಾತ ದಸರಾ ಆಚರಣೆ ವಿಚಾರ
ದಸರಾ ಆಚರಣೆಗೆ ಅನಗತ್ಯವಾಗಿ ಹಣ ಪೋಲು ಮಾಡೋದು ಬೇಡ ಎಂದಿದ್ದಾರೆ.
ಅದನ್ನ ಬಿಟ್ರೆ ಅದ್ದೂರಿ ದಸರಾ ಆಚರಣೆ ಮಾಡಲು ಸಿಎಂ ತಿಳಿಸಿದ್ದಾರೆ.ಲೋಕಸಭಾ ಚುನಾವಣೆಗೆ ಮೈಸೂರು ಕೊಡಗು ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ವಿಚಾರ.
7ರಿಂದ 8ಜನ ಟಿಕೆಟ್ ಆಕಾಂಕ್ಷಿಗಳು ಇದ್ದಾರೆ.
ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿ ಆಯ್ಕೆ ಮಾಡ್ತಾರೆ.ಸೂಕ್ತ ಅಭ್ಯರ್ಥಿಯನ್ನು ಪಕ್ಷ ಆಯ್ಕೆ ಮಾಡುತ್ತೆ ಎಂದು ತಿಳಿಸಿದರು.
ಬಿಜೆಪಿ,ಜೆಡಿಎಸ್ ನ ಶಾಸಕರು ಕಾಂಗ್ರೆಸ್ ಸೇರ್ಪಡೆ ವಿಚಾರ.ಕೆಲ ಶಾಸಕರು ಕಾಂಗ್ರೆಸ್ ಸೇರ್ಪಡೆಯಾಗಲಿಕ್ಕೆ ಸಿದ್ದರಿದ್ದಾರೆ.ಹಲವು ಜನ ನಮ್ಮ ಸಂಪರ್ಕದಲ್ಲಿದ್ದಾರೆ.
ಮುಂದಿನ ದಿನಗಳಲ್ಲಿ ಎಲ್ಲವೂ ಗೊತ್ತಾಗಲಿದೆ ಎನ್ನುವ ಮೂಲಕ ಆಪರೇಷನ್ ಹಸ್ತ ನಡೆಯುತ್ತಿರುವ ಬಗ್ಗೆ ಸುಳಿವು ನೀಡಿದರು