– ಮುಂದಿನ ಮೂರು ವರ್ಷಗಳಲ್ಲಿ ಮೈಸೂರು ರೈಲ್ವೆ ನಿಲ್ದಾಣಕ್ಕೆ ೪೮೩ ಕೋಟಿ ಅಭಿವೃದ್ಧಿ ಮಂಜೂರು
ಮೈಸೂರು : ಕೇಂದ್ರ ಸರ್ಕಾರ ೯ ವರ್ಷಗಳನ್ನು ಪೂರೈಸಿ ಪ್ರಧಾನಿ ನರೇಂದ್ರ ಮೋದಿಯವರ ಜನಪರ ಅಭಿವೃದ್ಧಿ ಯೋಜನೆಗಳ ಕಾರ್ಯಗಳನ್ನು ಇಟ್ಟುಕೊಂಡು ದೇಶದ ನೂರು ಕಡೆ ಸೆಲ್ಫಿ ಸ್ಪಾಟ್ ಮಾಡಲಾಗಿದ್ದು. ಇಲ್ಲಿಗೆ ಜನರು ಬಂದು ಸೆಲ್ಫಿ ತೆಗೆದುಕೊಂಡು ಅದರ ಜೊತೆ ಒಂದು ಸಂದೇಶ ರವಾನೆ ಮಾಡುವ ಸೆಲ್ಫಿ ಸ್ಪಾಟ್ ಅನ್ನು ಸಂಸದ ಪ್ರತಾಪ್ ಸಿಂಹ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಉದ್ಘಾಟನೆ ಮಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಂಸದರು ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ೯ ವರ್ಷಗಳನ್ನು ಪೂರೈಸಿ, ಹಲವು ಜನಪರ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತಂದಿದ್ದು. ಇದರಲ್ಲಿ ವಿಶೇಷವಾಗಿ ಸ್ವಚ್ಛ ಭಾರತ್, ಜಲಜೀವನ್ ಮಿಷನ್ ಸೇರಿದಂತೆ ೧೨ ವಿಶೇಷ ಕಾರ್ಯಕ್ರಮಗಳನ್ನು ಇಟ್ಟುಕೊಂಡು ದೇಶಾದ್ಯಂತ ನ್ಯೂ ಇಂಡಿಯಾ ಥೀಮ್ ಗಳನ್ನು ಇಟ್ಟುಕೊಂಡು. ಸುಮಾರು ನೂರು ಕಡೆ ಸೆಲ್ಫಿ ಸ್ಪಾಟ್ ಗಳನ್ನು ಹಾಕಲಾಗಿದ್ದು. ಇಲ್ಲಿಗೆ ಜನರು ಬಂದು ಸೆಲ್ಫಿ ತೆಗೆದುಕೊಂಡು, ಅದರ ಜೊತೆಗೆ ಒಂದು ಸಂದೇಶವನ್ನು ಸಹ ಕಳಿಸಬೇಕು. ಈ ರೀತಿಯ ಸೆಲ್ಫಿ ಪಾಯಿಂಟ್ ಅನ್ನು ಸ್ವಚ್ಛ ರೈಲ್ವೆ ನಿಲ್ದಾಣ ಎಂಬ ಖ್ಯಾತಿ ಪಡೆದಿರುತ್ತದೆ.
ಮೈಸೂರು ರೈಲ್ವೆ ನಿಲ್ದಾಣದ ಅಭಿವೃದ್ಧಿ :
ಮುಂದಿನ ಮೂರು ವರ್ಷಗಳಲ್ಲಿ ಮೈಸೂರು ರೈಲ್ವೆ ನಿಲ್ದಾಣದಲ್ಲಿ ಸುಮಾರು ೪೮೩ ಕೋಟಿ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳಲಾಗಿದ್ದು. ಮೈಸೂರು ನಗರದ ಯಾದಗಿರಿ ಬಡಾವಣೆಯ ಕಡೆಯಿಂದ ಮೂರನೇ ಎಂಟ್ರಿ ಮಾಡಿದ್ದೇವೆ. ಹೊಸ ಟರ್ಮಿನಲ್ ಕೂಡ ಬರುತ್ತಿದ್ದು. ಸಬ್ ವೇ ಹಾಗೂ ಟರ್ಮಿನಲ್ ಗೆ ೨೦೦ ಕೋಟಿ ಹಾಗೂ ೭೦೦ ರಿಂದ ೮೦೦ ಕೋಟಿ ಖರ್ಚು ಮಾಡಿ, ಸುಸಜ್ಜಿತವಾದ ರೈಲ್ವೆ ನಿಲ್ದಾಣ, ೪ ಸ್ಟೇಬಲಿಂಗ್ ಲೈನ್, ೪ ಪಿಟ್ ಲೈನ್, ೩ ಫ್ಲಾಟ್ ಫಾರಂಗಳು ಹಾಗೆ ನಾಗನಹಳ್ಳಿಯಲ್ಲಿ ರೈಲ್ವೆ ಷೆಡ್ ಗಳು ಬರುತ್ತಿವೆ ಎಂದ ಸಂಸದರು ತಿಳಿಸಿದರು.
ಬೆಂಗಳೂರಿನಲ್ಲಿ ಯಾವ ರೀತಿ ಸಮಸ್ಯೆಗಳು ಆಗುತ್ತಿವೆ, ಆ ರೀತಿ ಸಮಸ್ಯೆ ಮುಂದಿನ ನೂರು ವರ್ಷಗಳವರೆಗೆ ಮೈಸೂರಿನಲ್ಲಿ ಆಗಬಾರದು ಎಂಬ ಕಲ್ಪನೆಯನ್ನು ಇಟ್ಟುಕೊಂಡು ಈ ರೀತಿಯ ಕೆಲಸ ಮಾಡುತ್ತಿದ್ದು. ಮೈಸೂರಿನ ಮುಂದಿನ ಭವಿಷ್ಯಕ್ಕೆ ಇದು ಪೂರಕವಾಗಲಿದ್ದು. ಈಗಾಗಲೇ ಹಲವು ಕಾಮಗಾರಿಗಳಿಗೆ ಟೆಂಡರ್ ಸಹ ಕರೆಯಲಾಗಿದ್ದು. ಡಿಸೆಂಬರ್ ನಲ್ಲಿ ಕೆಲಸ ಶುರುವಾಗಲಿದೆ. ಟರ್ಮಿನಲ್ ಗೂ ಕೂಡ ಡಿಪಿಆರ್ ರೆಡಿಯಾಗಿದ್ದು. ಅದಕ್ಕೂ ಸಹ ಚಾಲನೆ ಸಿಗಲಿದೆ ಎಂದು ಇದೇ ಸಂದರ್ಭದಲ್ಲಿ ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದರು.