ಮೈಸೂರು : ಕೇಜೇಹಳ್ಳಿ ಡಿಕೆ ಹಳ್ಳಿ ಗಲಾಟೆ ಪ್ರಕರಣ ಸಂಬಂಧ ಗೃಹ ಸಚಿವ ಪರಮೇಶ್ವರ್ ಗೆ ಶಾಸಕ ತನ್ವೀರ್ ಸೇಠ್ ಪತ್ರ ವಿಚಾರಕ್ಕೆ ಪಶುಸಂಗೋಪನಾ ಸಚಿವ ಕೆ.ವೆಂಕಟೇಶ್ ಪ್ರತಿಕ್ರಿಯೆ ನೀಡಿದರು
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮರುಪರಿಶೀಲನೆ ಮಾಡುವುದರಲ್ಲಿ ತಪ್ಪೇನಿದೆ.
ತನ್ವೀರ್ ಸೇಠ್ ಪತ್ರದ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳಲು ಸಚಿವರಿದ್ದಾರೆ.
ಗಲಭೆ ಪ್ರಕರಣಗಳಲ್ಲಿ ನಿಜವಾಗಿಯೂ ಭಾಗವಹಿಸಿದ್ದಾರಾ, ಸುಮ್ಮನೇ ಆರೋಪ ಮಾಡಿದ್ದಾರಾ ನೋಡಬೇಕಲ್ವಾ.? ಎಂದು ತನ್ವೀರ್ ಬರೆದ
ಪತ್ರವನ್ನೂ ಸಚಿವ ವೆಂಕಟೇಶ್ ಸಮರ್ಥಿಸಿಕೊಂಡರು.
ಸಚಿವರ ವಿರುದ್ಧ ಶಾಸಕರ ಅಸಮಾಧಾನ ವಿಚಾರವಾಗಿ ಮಾತನಾಡಿದ ಅವರು, ಒಂದು ಮನೆಲೀ ನಾಲ್ಕು ಜನ ಇದ್ದರೆ ಅವರಲ್ಲೇ ಭಿನ್ನಾಭಿಪ್ರಾಯ ಇರುತ್ತದೆ.
ಇನ್ನೂ ಸರಕಾರ ಅಂದಮೇಲೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದ್ದೆ ಇರುತ್ತದೆ.ಎಲ್ಲವನ್ನ ಸರಿಪಡಿಸಿಕೊಂಡು ಹೋಗುತ್ತೇವೆ.ಒಂದಷ್ಟು ಶಾಸಕರು ಪತ್ರ ಬರೆದಿರುವುದು ನಿಜ, ಅಂದ ಮಾತ್ರಕ್ಕೆ ಏನೋ ಆಗಿದೆ ಅಂದುಕೊಳ್ಳಬೇಕಿಲ್ಲ.ಸರ್ಕಾರ ಸುಭದ್ರವಾಗಿದೆ ಎಂದರು.
ಅಲ್ಲದೆ ಇದನ್ನು ಕಂಡು ವಿರೋಧ ಪಕ್ಷದವರಿಗೆ ಹೊಟ್ಟೆ ಹುರಿ ಬಂದಿದೆ.ಅದಕ್ಕೆ ಸಿಂಗಾಪುರ ಮತ್ತೊಂದು ಮಗದೊಂದು ಎಂದು ಏನೇನೋ ಮಾಡಿದ್ದಾರೆ.
ಅದ್ಯಾವುದೂ ಇಲ್ಲಿ ನಡೆಯುವುದಿಲ್ಲ.
ನಮ್ಮ ಸರ್ಕಾರ ಸುಭದ್ರವಾಗಿದೆ. ಯಾರು ಏನೂ ಮಾಡೋಕೆ ಆಗಲ್ಲ ಎಂದು ವೆಂಕಟೇಶ್ ಹೇಳಿದರು.