• ಇತ್ತೀಚಿನ
  • ರಾಜ್ಯ
  • ರಾಜಕೀಯ
  • ಜಿಲ್ಲೆ
    • ಉಡುಪಿ
    • ಉತ್ತರಕನ್ನಡ
    • ಕಲ್ಬುರ್ಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೆಂಗಳೂರು ಗ್ರಾಮಾಂತರ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ದೇಶ
  • ಪ್ರಪಂಚ
  • ಸಿನಿಮಾ
  • ಕ್ರೀಡೆ
  • ಇತರೆ
  • E-paper
Reading: ಸಂಸತ್ ಭವನ ಉದ್ಘಾಟನೆ ಸಂವಿಧಾನದ ಅಣಕ
Share
Aa
Rajyadharma NewsRajyadharma News
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಅಪರಾಧ
  • ಪ್ರವಾಸ
  • ವಿಜ್ಞಾನ
  • ತಂತ್ರಜ್ಞಾನ
  • ಫ್ಯಾಷನ್
Search
  • Home
  • Categories
    • ರಾಜಕೀಯ
    • ಸಿನಿಮಾ
    • ತಂತ್ರಜ್ಞಾನ
    • ಪ್ರವಾಸ
    • ಫ್ಯಾಷನ್
    • ವ್ಯವಹಾರ
    • ವಿಜ್ಞಾನ
    • ಆರೋಗ್ಯ
  • ಜಿಲ್ಲೆ
    • ಮೈಸೂರು
    • ಮಂಡ್ಯ
    • ಚಾಮರಾಜನಗರ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
Follow US
  • Advertise
© 2022 Foxiz News Network. Ruby Design Company. All Rights Reserved.
Rajyadharma News > Blog > ಜಿಲ್ಲೆ > ಮೈಸೂರು > ಸಂಸತ್ ಭವನ ಉದ್ಘಾಟನೆ ಸಂವಿಧಾನದ ಅಣಕ
ಜಿಲ್ಲೆಮೈಸೂರುರಾಜಕೀಯರಾಜ್ಯ

ಸಂಸತ್ ಭವನ ಉದ್ಘಾಟನೆ ಸಂವಿಧಾನದ ಅಣಕ

Arjun Gowda
Last updated: 2023/06/02 at 5:44 AM
Arjun Gowda
Share
2 Min Read
SHARE

ಅಂಬೇಡ್ಕರ್, ರಾಷ್ಟ್ರಪತಿ, ದೇಶದ ಜನತೆಗೆ ಮಾಡಿದ ಅಪಮಾನ : ವಿಶ್ವನಾಥ್

ಮೈಸೂರು : ನೂತನ ಸಂಸತ್ ಭವನ ಉದ್ಘಾಟನೆಯಾದ ರೀತಿ ದೇಶದ ಸಂವಿಧಾನವನ್ನೇ ಅಣಕ‌ ಮಾಡಿದಂತಿದೆ. ಕಾರ್ಯಕ್ರಮ ಕೇವಲ ಪ್ರಧಾನಿ‌ ನರೇಂದ್ರ ಮೋದಿ ಅವರ ಪಟ್ಟಾಭಿಷೇಕದಂತಾಗಿದ್ದು ಅಂಬೇಡ್ಕರ್, ರಾಷ್ಟ್ರಪತಿಗೆ ಅಪಮಾನ ಮಾಡಲಾಗಿದೆ ಎಂದು ಎಂಎಲ್ಸಿ ಹೆಚ್.ವಿಶ್ವನಾಥ್ ವಾಗ್ದಾಳಿ ನಡೆಸಿದರು.

ಸಂಸತ್ ನಲ್ಲಿ ರಾಜದಂಡ , ಹೊರಗೆ ಕುಸ್ತಿಪಟುಗಳಿಗೆ ಪೊಲೀಸರ ದಂಡ. ಮಹಿಳಾ ಕುಸ್ತಿಪಟುಗಳು ತಾವು ಗೆದ್ದ ಪದಕಗಳನ್ನು ಗಂಗೆಗೆ ಎಸೆಯಲು ಮುಂದಾಗಿದ್ದಾರೆ ಎಂದರೆ ಅವರಿಗೆ ಎಷ್ಟು ನೋವಾಗಿರಬೇಡ. ಅವರ ಕಣ್ಣೀರು ಮೋದಿಯನ್ನು ಸುಮ್ಮನೆ ಬಿಡುವುದಿಲ್ಲ. –

ಹೆಚ್.ವಿಶ್ವನಾಥ್, ಎಂಎಲ್ಸಿ

ಜಿಲ್ಲಾ ಪತ್ರಕರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸತ್ತಿನ ಬಗ್ಗೆ ಅಪಾರ ಅಭಿಮಾನ,‌ ನಂಬಿಕೆಯಿಂದ. ಮೇ 28ರಂದು ನಡೆದ ಉದ್ಘಾಟನಾ ಕಾರ್ಯಕ್ರಮ ಸಂವಿಧಾನದ ಅಣಕದಂತಿದೆ. ಇದು ಪ್ರಧಾನಮಂತ್ರಿ ನೇತೃತ್ವದಲ್ಲಿ ಆಗಿದ್ದು‌ ನೋವು ತಂದಿದೆ. ಅಂದು ಅಂಬೇಡ್ಕರ್ ಅವರಿಗೂ ಗೌರವ ಕೊಡಲಿಲ್ಲ. ರಾಷ್ಟ್ರಪತಿ ಗಳನ್ನೂ ಕರೆಯಲಿಲ್ಲ. ಕಾರ್ಯಕ್ರಮ ಕೇವಲ ಮೋದಿ ಪಟ್ಟಾಭಿಷೇಕದಂತಿತ್ತು. ಸಂಸತ್ ಭವನ ಇರಲೇ ಇಲ್ಲವೇನೋ, ಯಾರೂ ದೇಶಕ್ಕೆ ಏನು ಮಾಡಲಿಲ್ಲವೇನೋ, ನಾನಷ್ಟೇ ದೇಶದ ಸಂರಕ್ಷಕ‌ ಎಂದು ಯುವಜನತೆಯಲ್ಲಿ ಭ್ರಮೆ ಬಿತ್ತುವ ಕೆಲಸವನ್ನು ಮೋದಿ ಮಾಡಿದರು. ಇದು ದೇಶದ 140 ಕೋಟಿ ಜನರಿಗೆ ಮಾಡಿದ ಅವಮಾನ ಎಂದು ಕಿಡಿ ಕಾರಿದರು.

ಸಂಸತ್ ನಲ್ಲಿ ಸ್ಥಾಪನೆಯಾಗಬೇಕಿರುವುದು ರಾಷ್ಟ್ರಲಾಂಛನ. ಆದರೆ ಪ್ರಧಾನಿ ಮೋದಿ ಧರ್ಮ ಲಾಂಛನ ಸ್ಥಾಪನೆ ಮಾಡಿದ್ದಾರೆ. ಇದರಿಂದ ಧರ್ಮನಿರಪೇಕ್ಷತೆಗೆ‌ ಪೆಟ್ಟು ಬಿದ್ದಿದ್ದು ಸಂವಿಧಾನಕ್ಕೆ ಅಪಚಾರ ಆಗಿದೆ. ಒಂದು ರೀತಿಯಲ್ಲಿ ಪುರೋಹಿತಶಾಹಿ ವ್ಯವಸ್ಥೆ ಮರು ಸ್ಥಾಪನೆ ಆಗಿದೆ. ಧರ್ಮದ ಬಗ್ಗೆ ಗೌರವ ಇದ್ದರೆ ನಿಮ್ಮ ಮನೆಯಲ್ಲಿಟ್ಟಕೊಳ್ಳಿ. ಸಂಸತ್ ನಲ್ಲಿ ಅಲ್ಲ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಮೋದಿ ಅವರು ೯ ವರ್ಷಗಳ ಹಿಂದೆ ಪ್ರಥಮ ಬಾರಿಗೆ ಸಂಸತ್ ಪ್ರವೇಶಿಸಿದಾಗ ತಲೆ ಬಗ್ಗಿ ನಮಸ್ಕರಿಸಿ, ದೇಶದ ಜನತೆಯ ಪಾದಗಳಿಗೆ ನಮಸ್ಕಾರ ಮಾಡುತ್ತಿದ್ದೇನೆ ಎಂದು ಹೇಳಿದ್ದರು. ಆದರೆ ಈಗ ಮಾಡುತ್ತಿರುವುದೇನು? ನೀವು ಹೇಳಿದ್ದೆಲ್ಲಾ ಸುಳ್ಳಾ? ಜನ ಈ ಬಗ್ಗೆ ಯೋಚಿಸಬೇಕು. ಇದರ ಚರ್ಚೆ ಆಗಬೇಕು ಎಂದರು.ರಾಷ್ಟ್ರಪತಿ ಮುರ್ಮು ಅವರನ್ನು ದೂರದಲ್ಲಿ ನಿಲ್ಲಿಸಿಅಸ್ಪೃಶ್ಯತೆ ಆಚರಣೆ ಮಾಡಲಾಗಿದೆ. ಇದು ಶೋಷಿತ, ಶ್ರಮಿಕ ವರ್ಗಗಳಿಗೆ ಮಾಡಿದ ಅವಮಾನ. ಇಂದೋರ್ ನ ಮಹಾರಾಣಿ ಸಂಸತ್ ಭವನಕ್ಕೆ ಜಾಗ ಕೊಟ್ಟಿದ್ದರು. ಅವರ ಸ್ಮರಣೆಯನ್ನೂ ಮಾಡಲಿಲ್ಲ ಎಂದು‌ ಕಿಡಿ ಕಾರಿದರು.ನೂತನ ಸಂಸತ್ ಭವನದಲ್ಲಿ 1200 ಜನಕ್ಕೆ ಅವಕಾಶ ನೀಡಲಾಗಿದೆ. 2029 ಸಂಸತ್ ಸದಸ್ಯರ ಸಂಖ್ಯೆ ಹೆಚ್ಚಾಗುತ್ತದೆ. ಆದರೆ ದಕ್ಷಿಣಕ್ಕೆ ಅಧಿಕಾರವಾಗಲಿ ಅರ್ಥವ್ಯವಸ್ಥೆಯಾಗಲಿ ಸಮಾಧಾನಕರವಾಗಿ ಆಗುವುದಿಲ್ಲ. ಜಿಎಸ್ಟಿ ಸರಿಯಾಗಿ ಹಂಚಿಕೆಯಾಗುತ್ತಿಲ್ಲ. 2014ರ ಚುನಾವಣೆಯೇ ಇನ್ನೂ ಆಗಿಲ್ಲ. ಆಗಲೇ 2029 ರ ಚುನಾವಣೆ‌ ಬಗ್ಗೆ ಮಾತನಾಡುತ್ತಿದ್ದಾರೆ. ಉತ್ತರ ಭಾರತಕ್ಕೆ ಹೆಚ್ಚು ಅಧಿಕಾರ ಹಂಚಿಕೆಯಾಗುತ್ತಿದೆ. ಈ ಬಗ್ಗೆ ಹೆಚ್ಚು ಚರ್ಚೆಯಾಗಬೇಕು ಎಂದರು. ಮೋದಿ ಬಸವಣ್ಣನ ವಚನ ಹೇಳುತ್ತಾರೆ. ಆದರೆ ಅದು ಬೊಗಳೆ ಮಾತ್ರ. ಬಣವಣ್ಣನ ವಚನ ಕೇವಲ ಮಾತಿಗಷ್ಟೇ. ಅಂತರಂಗದಲ್ಲಿ ಬಿಜೆಪಿಯ ಮನಸ್ಥಿತಿಯೇ ಇದೆ ಎಂದರು.ಗೋಷ್ಠಿಯಲ್ಲಿ ರೇವಣ್ಣ ಸೇರಿದಂತೆ ಹಲವರು ಇದ್ದರು.

You Might Also Like

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ

ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್

ದಸರಾ ಉದ್ಘಾಟಕರ ಪರ ಪ್ರತಿಭಟನೆ

ಕಾರ್ಮಿಕರ ಸ್ಥಳಕ್ಕೆಬಂದ ಕೈ ಶಾಸಕ ಧರಣಿಕೂರುವ ಎಚ್ವರಿಕೆ ಕೊಟ್ಟು ಕೆಂಡಾಮಂಡಲ!?

ಚುಂಚನಕಟ್ಟೆ ಜಲಪಾತದ ಮೆರಗು

Arjun Gowda June 2, 2023
Share this Article
Facebook Twitter Whatsapp Whatsapp LinkedIn Copy Link
Previous Article ಕಾವೇರಿಯಿಂದ ಧವಳಗಿರಿಗೆ ಯಡಿಯೂರಪ್ಪ ಶಿಫ್ಟ್
Next Article ನವೆಂಬರ್ ಗೆ ಮೇಯರ್ ಶಿವಕುಮಾರ್ ಅವಧಿ ಮುಕ್ತಾಯ
Leave a comment Leave a comment

Leave a Reply Cancel reply

Your email address will not be published. Required fields are marked *

Join our group

Stay Connected

235.3k Followers Like
69.1k Followers Follow
56.4k Followers Follow
- Advertisement -
Ad imageAd image

Latest News

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ
ಜಿಲ್ಲೆ ಮೈಸೂರು ರಾಜ್ಯ September 8, 2025
ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್
ಜಿಲ್ಲೆ ಮೈಸೂರು ರಾಜ್ಯ September 7, 2025
ದಸರಾ ಉದ್ಘಾಟಕರ ಪರ ಪ್ರತಿಭಟನೆ
ಇತರೆ ಮೈಸೂರು September 6, 2025
ಕಾರ್ಮಿಕರ ಸ್ಥಳಕ್ಕೆಬಂದ ಕೈ ಶಾಸಕ ಧರಣಿಕೂರುವ ಎಚ್ವರಿಕೆ ಕೊಟ್ಟು ಕೆಂಡಾಮಂಡಲ!?
ಜಿಲ್ಲೆ ಮೈಸೂರು August 1, 2024

ರಾಜ್ಯ ರಾಜಕೀಯ, ಸಿನಿಮಾ ಸುದ್ದಿಗಳು, ಕ್ರೈಮ್ ಸ್ಟೋರಿಗಳು ಮೈಸೂರು ಸುತ್ತಮುತ್ತಲಿನ ಇಂಟ್ರೆಸ್ಟಿಂಗ್ ಸುದ್ದಿಗಳಿಗಾಗಿ ನೋಡ್ತಾ ಇರಿ ರಾಜ್ಯಧರ್ಮ ನ್ಯೂಸ್ ಸತ್ಯವೇ ನಮ್ಮ ಧರ್ಮ

Follow US

© 2023 Rajyadharma News. All Rights Reserved | Developed By Interwebplus.com

Removed from reading list

Undo
Welcome Back!

Sign in to your account

Lost your password?