ಹನೂರು : ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿಯೂ ಅಲ್ಲ, ಬಿಜೆಪಿ ರಾಜ್ಯದ ಅದ್ಯಕ್ಷರು ಅಲ್ಲ ಒಬ್ಬ ಸಾಮಾನ್ಯ ಕಾರ್ಯಕರ್ತರ ರೀತಿಯಲ್ಲಿ 81ನೇ ವಯಸ್ಸಿನಲ್ಲಿ ದುಡಿಯುತ್ತಿದ್ದಾರೆ ಅವ್ರ ರಟ್ಟೆಗಳು ಇನು ಗಟ್ಟಿ ಇದೆ ಎಂದು ವಿಜಯೇಂದ್ರ ಗುಡುಗಿದ್ದಾರೆ
ಹನೂರಿನಲ್ಲಿಂದು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿ ಮಾತನಾಡಿದ ಅವ್ರು, ಯಡಿಯೂರಪ್ಪ ರಟ್ಟೆಗಳು ಗಟ್ಟಿಯಿದೇ ಅವ್ರು ಒಂದು ಹೆಜ್ಜೆ ಮುಂದೆ ಇಟ್ರೆ ಏನೆಲ್ಲಾ ಆಗತ್ತೆ ಅನ್ನೋದು ವಿರೋಧಿಗಳಿಗೆ ಗೊತ್ತು ಅಸ್ಟಿಲ್ಲದೆ ಅವರನ್ನು ರಾಜಾಹುಲಿ ಎಂದು ಜನಗಳು ಸುಮ್ಮನೆ ಕರೆಯಲ್ಲ ಎಂದು ವಿಜಯೇಂದ್ರ ವಿಪಕ್ಷಗಳ ವಿರುದ್ಧ ಗುಟುರು ಹಾಕಿದ್ದಾರೆ
ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರುವ ತನಕ ಅವ್ರು ವಿರಾಮಿಸುವುದಿಲ್ಲ, ಈ ವಯಸ್ಸಿನಲ್ಲಿಯೂ ಪಕ್ಷಕ್ಕಾಗಿ ಕೆಲ್ಸ ಮಾಡ್ತಿದ್ದಾರೆ ಎಂದರು, ಅಲ್ಲದೆ ವರುಣಾದಲ್ಲಿ ದೇವರು ಮೆಚ್ಚುವಂತೆ ಕೆಲಸ ಮಾಡ್ತೀನಿ ಅಲ್ಲಿಯೂ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಹೇಳಿದರು.