ಮೈಸೂರು : ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ವಿಚಾರ, ಬಿಜೆಪಿಗೆ ಯಾವುದೇ ವಿಚಾರಗಳು ಇಲ್ಲ
ಲೋಕಸಭಾ ಚುನಾವಣೆ ಬಂದಾಗ ಪಾಕಿಸ್ತಾನ ಭಯೋತ್ಪಾದನೆ ಅಂತಾ ವಿಚಾರ ಹೇಳಿ ಮತ ಪಡೆಯುತ್ತಾರೆ ಎಂದು ಮಾಜಿ ಶಾಸಕ ಡಾ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಕೆಲ ಮಾಧ್ಯಮಗಳು ಪಾಕಿಸ್ತಾನ ಪರ ಘೋಷಣೆ ಕೂಗಿಲ್ಲ ಅಂತಾ ವರದಿ ಮಾಡಿದ್ದವು.ಆದರೂ ನಮ್ಮ ಸರ್ಕಾರ ಎಫ್ ಎಸ್ ಎಲ್ ಪರೀಕ್ಷೆಗೆ ಕಳುಹಿಸಿದೆ.ಆದರೂ ಬಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ದೇವಸ್ಥಾನದ ಹಣ ಮಸೀದಿ ಚರ್ಚ್ಗೆ ಕೊಡುತ್ತಾರೆ ಅಂತಾ ಸುಳ್ಳು ಹೇಳಿದರು
ಕೆಲ ಮಾಧ್ಯಮಗಳು ಅದು ಸುಳ್ಳು ಅಂತಾ ಗೊತ್ತಿದ್ದರು ಪ್ರಸಾರ ಮಾಡಿದವು. ಬೇಕು ಅಂತಾ ಧರ್ಮ ಪಾಕಿಸ್ತಾನ ಭಯೋತ್ಪಾದನೆ ಈ ಹೆಸರಿನಲ್ಲಿ ಭಾವನಾತ್ಮಕವಾಗಿ ಮಾತನಾಡಿ ಜನರ ಮತ ಪಡೆಯಲು ಯತ್ನ
ಭಾರತದಲ್ಲಿ ಪ್ರತಿ ಬಾರಿ ಜನರನ್ನು ಪೆದ್ದರನ್ನಾಗಿಸಲು ಸಾಧ್ಯವಿಲ್ಲ. ಜನರು ಎಚ್ಚೆತ್ತುಕೊಂಡಿದ್ದಾರೆ ಯಾರು ನಿಜ ವಿಚಾರಗಳ ಬಗ್ಗೆ ಮಾತನಾಡುತ್ತಾರೆ ಅವರಿಗೆ ಮತ ಹಾಕುತ್ತಾರೆ ಎಂದಿದ್ದಾರೆ.