• ಇತ್ತೀಚಿನ
  • ರಾಜ್ಯ
  • ರಾಜಕೀಯ
  • ಜಿಲ್ಲೆ
    • ಉಡುಪಿ
    • ಉತ್ತರಕನ್ನಡ
    • ಕಲ್ಬುರ್ಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೆಂಗಳೂರು ಗ್ರಾಮಾಂತರ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ದೇಶ
  • ಪ್ರಪಂಚ
  • ಸಿನಿಮಾ
  • ಕ್ರೀಡೆ
  • ಇತರೆ
  • E-paper
Reading: ರಾಷ್ಟ್ರೀಯ ಮಟ್ಟದ ಯುವ ಬರಹಗಾರ ಯೋಜನೆ : ಕರ್ನಾಟಕದಿಂದ ಮೈಸೂರಿನ ಮಹೇಶ್ ಹಿರೇಮಠ ಆಯ್ಕೆ
Share
Aa
Rajyadharma NewsRajyadharma News
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಅಪರಾಧ
  • ಪ್ರವಾಸ
  • ವಿಜ್ಞಾನ
  • ತಂತ್ರಜ್ಞಾನ
  • ಫ್ಯಾಷನ್
Search
  • Home
  • Categories
    • ರಾಜಕೀಯ
    • ಸಿನಿಮಾ
    • ತಂತ್ರಜ್ಞಾನ
    • ಪ್ರವಾಸ
    • ಫ್ಯಾಷನ್
    • ವ್ಯವಹಾರ
    • ವಿಜ್ಞಾನ
    • ಆರೋಗ್ಯ
  • ಜಿಲ್ಲೆ
    • ಮೈಸೂರು
    • ಮಂಡ್ಯ
    • ಚಾಮರಾಜನಗರ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
Follow US
  • Advertise
© 2022 Foxiz News Network. Ruby Design Company. All Rights Reserved.
Rajyadharma News > Blog > ರಾಜ್ಯ > ರಾಷ್ಟ್ರೀಯ ಮಟ್ಟದ ಯುವ ಬರಹಗಾರ ಯೋಜನೆ : ಕರ್ನಾಟಕದಿಂದ ಮೈಸೂರಿನ ಮಹೇಶ್ ಹಿರೇಮಠ ಆಯ್ಕೆ
ರಾಜ್ಯ

ರಾಷ್ಟ್ರೀಯ ಮಟ್ಟದ ಯುವ ಬರಹಗಾರ ಯೋಜನೆ : ಕರ್ನಾಟಕದಿಂದ ಮೈಸೂರಿನ ಮಹೇಶ್ ಹಿರೇಮಠ ಆಯ್ಕೆ

admin
Last updated: 2024/02/14 at 10:46 AM
admin
Share
3 Min Read
SHARE

ಭಾರತದ ಸರ್ಕಾರದ ಅಧೀನದ ಕೇಂದ್ರ ಶಿಕ್ಷಣ ಸಚಿವಾಲಯವು ಭಾರತದಲ್ಲಿರುವ ಯುವ ಬರಹಗಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ PM’s Scheme for Mentoring Young Authors ಎಂಬ ಯೋಜನೆಯನ್ನು ರೂಪಿಸಿದ್ದು, ರಾಷ್ಟ್ರೀಯ ಮಟ್ಟದಲ್ಲಿ ನಡೆದ ಈ ಯೋಜನೆಗೆ ಕರ್ನಾಟಕದಿಂದ ಮಹೇಶ್‌ ಹಿರೇಮಠ ಎಂಬ ಮೈಸೂರಿನ ಯುವ ಬರಹಗಾರ ಆಯ್ಕೆಯಾಗಿದ್ದಾರೆ.

ಈ ಸ್ಪರ್ಧೆಗೆ ಭಾರತದ ವಿವಿಧ ಭಾಷೆಗಳಿಂದ ಸುಮಾರು 30 ಸಾವಿರಕ್ಕೂ ಅಧಿಕ ಯುವ ಬರಹಗಾರರ ಪ್ರಸ್ತಾವನೆಗಳು ಬಂದಿದ್ದವು. ಅವುಗಳಲ್ಲಿ ಅಂತಿಮವಾಗಿ 200 ಪ್ರಸ್ತಾವನೆಗಳನ್ನು ಆಯ್ಕೆ ಮಾಡಿ, 2023ರ ಅಕ್ಟೋಬರ್‌ 25 ಮತ್ತು 26 ರಂದು ನವದೆಹಲಿಯ ನ್ಯಾಷನಲ್‌ ಬುಕ್‌ ಟ್ರಸ್ಟ್‌ ನಲ್ಲಿ ಉನ್ನತ ತಜ್ಞರ ಸಮಿತಿಯು 200 ಯುವ ಬರಹಗಾರರ ನೇರ ಸಂದರ್ಶನ ನಡೆಸಿತು. ಅಂತಿಮವಾಗಿ 41 ಯುವ ಬರಹಗಾರರನ್ನು ಮಾತ್ರ ಆಯ್ಕೆ ಮಾಡಿತು. ಹೀಗೆ ಆಯ್ಕೆಯಾದ ಯುವ ಬರಹಗಾರರಲ್ಲಿ ಕನ್ನಡ ಭಾಷೆಯಿಂದ ಮಹೇಶ್‌ ಹಿರೇಮಠ ಅವರು ಮಾತ್ರ ಆಯ್ಕೆಯಾಗಿದ್ದಾರೆ.

ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಯುವ 2.0 ಯೋಜನೆಗೆ ಆಯ್ಕೆಯಾದ 41 ಯುವ ಬರಹಗಾರರನ್ನು ಫೆಬ್ರುವರಿ 10ರಂದು ನವದೆಹಲಿಯಲ್ಲಿರುವ ರಾಷ್ಟ್ರಪತಿ ಭವನಕ್ಕೆ ಆಹ್ವಾನಿಸಿ ವಿಶೇಷ ಔತಣಕೂಟ ಏರ್ಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಹೀಗೆ ಭಾರತದ ಗೌರವಾನ್ವಿತ ರಾಷ್ಟ್ರಪತಿಗಳಿಂದ ಅಭಿನಂದನೆಗೆ ಪಾತ್ರರಾದ ವಿವಿಧ ಭಾಷೆಗಳ ಯುವ ಬರಹಗಾರರಲ್ಲಿ ಮಹೇಶ್‌ ಹಿರೇಮಠ ಅವರು ಮಾತ್ರ ಕನ್ನಡ ಭಾಷೆಯನ್ನು ಪ್ರತಿನಿಧಿಸಿದ್ದರು.

ಮಹೇಶ್‌ ಹಿರೇಮಠ ಅವರ ಪುಸ್ತಕ ಪ್ರಸ್ತಾವನೆಯ ವಿಶೇಷತೆ :
ಈ ಸ್ಪರ್ಧೆಗೆ ಯುವ ಬರಹಗಾರ ಮಹೇಶ್‌ ಹಿರೇಮಠ ಅವರ “ಪ್ರಜಾಪ್ರಭುತ್ವದ ರಾಯಭಾರಿಗಳು”ಎಂಬ ಪ್ರಸ್ತಾವನೆ ಆಯ್ಕೆಯಾಗಿದೆ. ಪ್ರಜಾಪ್ರಭುತ್ವದ ರಾಯಭಾರಿಗಳು ಪ್ರಸ್ತಾವನೆಯು ಕನ್ನಡ ವಚನ ಸಾಹಿತ್ಯದಲ್ಲಿರುವ ಪ್ರಜಾತಾಂತ್ರಿಕ ಮೌಲ್ಯಗಳ ಮೇಲೆ ಬೆಳಕು ಚೆಲ್ಲುತ್ತದೆ. 12ನೇ ಶತಮಾನದ ಸುಮಾರು 211ಕ್ಕೂ ಹೆಚ್ಚು ವಚನಕಾರರ 25 ಸಾವಿರಕ್ಕೂ ಹೆಚ್ಚು ವಚನಗಳಲ್ಲಿ ಅಡಗಿರುವ ಪ್ರಜಾತಾಂತ್ರಿಕ ವಿಚಾರಧಾರೆಗಳನ್ನು 21ನೇ ಶತಮಾನದ ಯುವ ಪೀಳಿಗೆಗೆ ತಲುಪಿಸುವ ಮಹತ್ವದ ಉದ್ದೇಶವನ್ನು “ಪ್ರಜಾಪ್ರಭುತ್ವದ ರಾಯಭಾರಿ”ಗಳು ಪುಸ್ತಕ ಹೊಂದಿದೆ. ಅಗಾಧವಾದ ವಚನ ಸಾಹಿತ್ಯದ ವಿಚಾರಧಾರೆಯಲ್ಲಿ ಹೆಕ್ಕಿದಷ್ಟು ಹೊಸ ವಿಚಾರಗಳು ಹರಿದು ಬರುತ್ತವೆ. ಕನ್ನಡ ವಚನಕಾರರ ವಿಚಾರಧಾರೆಗಳು ಎಲ್ಲ ದೃಷ್ಟಿಯಿಂದಲೂ ವಿಶ್ವಮಾನ್ಯವಾಗಿವೆ. ಪ್ಲೇಟೋನ ಚಿಂತನೆಗಳು ಮತ್ತು ಬುದ್ಧನ ಸಂಘಜೀವನಕ್ರಮ ಬಿಟ್ಟರೆ ವಿಶ್ವಕ್ಕೆ ಪ್ರಜಾಪ್ರಭುತ್ವದ ಕಲ್ಪನೆಯೇ ಇರಲಿಲ್ಲ. 12ನೇ ಶತಮಾನದಲ್ಲಿ ಅಮೆರಿಕ ದೇಶವೇ ಇರಲಿಲ್ಲ. ಇಂಗ್ಲಂಡ್, ಫ್ರಾನ್ಸ್, ಜರ್ಮನಿ, ಚೀನ, ರಷ್ಯಾ ಹೀಗೆ ಎಲ್ಲೆಡೆ ರಾಜಪ್ರಭುತ್ವದ ಅಟ್ಟಹಾಸವೇ ಮೆರೆಯುತ್ತಿತ್ತು. ಆ ಮಧ್ಯಯುಗದಲ್ಲಿ ಕನ್ನಡ ವಚನಕಾರರು ಪ್ರಜಾಪ್ರಭುತ್ವದ ಕನಸು ಕಂಡರು. ರಾಜ್ಯಶಕ್ತಿಯನ್ನು ಪ್ರಜಾಪ್ರಭುತ್ವ ಶಕ್ತಿಯಾಗಿ ಪರಿವರ್ತಿಸುವ ಮೊದಲು ಜನರಲ್ಲಿ ಪ್ರಜಾಪ್ರಭುತ್ವದ ಪ್ರಜ್ಞೆ ತುಂಬ ಬಯಸಿದರು. ಆ ಮೂಲಕ ಇದ್ದ ಸಂಪ್ರದಾಯಬದ್ಧ ಸಮಾಜದಲ್ಲೇ ಪ್ರಜಾಪ್ರಭುತ್ವವಾದಿ ಪರ್ಯಾಯ ಸಮಾಜ ರಚಿಸುವ ಮಹತ್ವದ ಕಾರ್ಯಕ್ಕೆ 12ನೇ ಶತಮಾನದಲ್ಲೇ ವಚನಕಾರರು ಮುನ್ನಡಿ ಬರೆದರು. 12ನೇ ಶತಮಾನದಲ್ಲಿ ವಚನಗಳನ್ನು ಬರೆದು ಪ್ರಜಾತಾಂತ್ರಿಕ ಮೌಲ್ಯಗಳ ನವಸಮಾಜದ ರೂಪುರೇಷೆಗಳನ್ನು ತೋರಿಸಿಕೊಟ್ಟರು. ಈ ಎಲ್ಲ ಹೊಸ ವಿಚಾರಧಾರೆಯನ್ನು ಹೆಕ್ಕಿ ತೆಗೆಯುವ, ಆ ಮೂಲಕ ವಚನಗಳಲ್ಲಿ ಅಡಗಿರುವ ಪ್ರಜಾತಾಂತ್ರಿಕ ಮೌಲ್ಯಗಳನ್ನು ಮತ್ತು ಪರಿಕಲ್ಪನೆಗಳನ್ನು ಗುರುತಿಸುವುದೇ ಈ ಪುಸ್ತಕದ ಮುಖ್ಯ ಆಶಯವಾಗಿದೆ.

ಯುವಬರಹಗಾರ ಮಹೇಶ್‌ ಹಿರೇಮಠ ಬಗ್ಗೆ :
ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದವರಾದ ಮಹೇಶ್‌ ಹಿರೇಮಠ ಅವರು ತಮ್ಮ ಪದವಿ ವ್ಯಾಸಾಂಗವನ್ನು ಧಾರವಾಡದ ಪ್ರತಿಷ್ಠಿತ ಕರ್ನಾಟಕ ಕಾಲೇಜಿನಲ್ಲಿ ಅಪರಾಧಶಾಸ್ತ್ರ ಮತು ಪತ್ರಿಕೋಧ್ಯಮ ವಿಷಯದಲ್ಲಿ ಪೂರೈಸಿದ್ದಾರೆ. ನಂತರ ಮೈಸೂರು ವಿಶ್ವವಿದ್ಯಾಲಯದಿಂದ M.sc in electronic media ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡಿದ್ದಾರೆ. ಸದ್ಯ ಮೈಸೂರಿನಲ್ಲಿ ನೆಲೆಸಿರುವ ಮಹೇಶ್‌ ಹಿರೇಮಠ, ತಮ್ಮ 20ನೇ ವಯಸ್ಸಿನಲ್ಲೇ ಧರ್ಮ ಮತ್ತು ಕಾಮದ ನಡುವಿನ ಸಂಘರ್ಷದ ಕಥಾಹಂದರವನ್ನು ಹೊಂದಿರುವ “ಆ ನೆನಪುಗಳು” ಎಂಬ ಕಾದಂಬರಿಯನ್ನು ಬರೆದಿದ್ದಾರೆ. ಇನ್ನು ವಿದ್ಯಾರ್ಥಿದೆಸೆಯಿಂದಲೂ ಬರಹ ಮತ್ತು ಸಾಕ್ಷ್ಯಚಿತ್ರ ನಿರ್ಮಾಣದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಮಹೇಶ್‌ ಹಿರೇಮಠ ಅವರು ಮೂರು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರು ನಿರ್ದೇಶಿಸಿರುವ ಸಾಕ್ಷ್ಯಚಿತ್ರಗಳು ಕೇಂದ್ರ ಸರ್ಕಾರದ ವಿಜ್ಞಾನ ಪ್ರಸಾರ ಆಯೋಜಿಸಿದ್ದ “ರಾಷ್ಟ್ರೀಯ ವಿಜ್ಞಾನ ಚಲನಚಿತ್ರೋವ”ಕ್ಕೆ ಆಯ್ಕೆಯಾಗಿ, ಮುಂಬೈ, ಕೋಲ್ಕತ್ತಾ ಮತ್ತು ಗುವಾಹಟಿಯಲ್ಲಿ ಪ್ರದರ್ಶನಗೊಂಡಿವೆ.

You Might Also Like

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ

ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್

ಕರ್ನಾಟಕದಲ್ಲಿ ಕನ್ನಡ ವಾತಾವರಣವನ್ನು ನಿರ್ಮಾಣ ಮಾಡುವುದು ಅತ್ಯಂತ ಅವಶ್ಯಕ: ಸಿಎಂ ಸಿದ್ದರಾಮಯ್ಯ

ಮೈಸೂರು ಮಾರುಕಟ್ಟೆಗೆ ಪರಿಸರ ಸ್ನೇಹಿ ಇವಿ ಪೆಸೆಂಜರ್ ಹಾಗೂ ಗೂಡ್ಸ್ ಆಟೋ ಎಂಟ್ರಿ : ಬಿಬಿ ಮೋಟಾರ್ಸ್ ಗೆ ಮತ್ತೊಂದು ಗರಿ

ಎಲ್ಲರಲ್ಲೂ ಮನುಷ್ಯತ್ವ ಬೆಳೆಯಲಿ. ಸಹಿಷ್ಣುತೆ, ಪ್ರೀತಿ ವಿಶ್ವಾಸ ಬೆಳೆಯಲಿ : ಮುಖ್ಯಮಂತ್ರಿ ಸಿದ್ದರಾಮಯ್ಯ

TAGGED: young author karmataka Writers
admin February 14, 2024
Share this Article
Facebook Twitter Whatsapp Whatsapp LinkedIn Copy Link
Previous Article ಪಿಕಪ್ ವಾಹನ ಬೈಕ್ ನಡುವೆ ಅಪಘಾತ ಗೃಹಿಣಿ ಸ್ಥಳದಲ್ಲೇ ಸಾವು
Next Article ವಿವಿಧ ಯೋಜನೆ ಅಡಿ ಪ್ರೋತ್ಸಾಹ ಧನ ವಿತರಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
Leave a comment Leave a comment

Leave a Reply Cancel reply

Your email address will not be published. Required fields are marked *

Join our group

Stay Connected

235.3k Followers Like
69.1k Followers Follow
56.4k Followers Follow
- Advertisement -
Ad imageAd image

Latest News

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ
ಜಿಲ್ಲೆ ಮೈಸೂರು ರಾಜ್ಯ September 8, 2025
ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್
ಜಿಲ್ಲೆ ಮೈಸೂರು ರಾಜ್ಯ September 7, 2025
ದಸರಾ ಉದ್ಘಾಟಕರ ಪರ ಪ್ರತಿಭಟನೆ
ಇತರೆ ಮೈಸೂರು September 6, 2025
ಕಾರ್ಮಿಕರ ಸ್ಥಳಕ್ಕೆಬಂದ ಕೈ ಶಾಸಕ ಧರಣಿಕೂರುವ ಎಚ್ವರಿಕೆ ಕೊಟ್ಟು ಕೆಂಡಾಮಂಡಲ!?
ಜಿಲ್ಲೆ ಮೈಸೂರು August 1, 2024

ರಾಜ್ಯ ರಾಜಕೀಯ, ಸಿನಿಮಾ ಸುದ್ದಿಗಳು, ಕ್ರೈಮ್ ಸ್ಟೋರಿಗಳು ಮೈಸೂರು ಸುತ್ತಮುತ್ತಲಿನ ಇಂಟ್ರೆಸ್ಟಿಂಗ್ ಸುದ್ದಿಗಳಿಗಾಗಿ ನೋಡ್ತಾ ಇರಿ ರಾಜ್ಯಧರ್ಮ ನ್ಯೂಸ್ ಸತ್ಯವೇ ನಮ್ಮ ಧರ್ಮ

Follow US

© 2023 Rajyadharma News. All Rights Reserved | Developed By Interwebplus.com

Removed from reading list

Undo
Welcome Back!

Sign in to your account

Lost your password?