• ಇತ್ತೀಚಿನ
  • ರಾಜ್ಯ
  • ರಾಜಕೀಯ
  • ಜಿಲ್ಲೆ
    • ಉಡುಪಿ
    • ಉತ್ತರಕನ್ನಡ
    • ಕಲ್ಬುರ್ಗಿ
    • ಕೊಡಗು
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣಕನ್ನಡ
    • ದಾವಣಗೆರೆ
    • ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೆಂಗಳೂರು ಗ್ರಾಮಾಂತರ
    • ಬೆಂಗಳೂರು ನಗರ
    • ಬೆಳಗಾವಿ
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯನಗರ
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
  • ದೇಶ
  • ಪ್ರಪಂಚ
  • ಸಿನಿಮಾ
  • ಕ್ರೀಡೆ
  • ಇತರೆ
  • E-paper
Reading: ಅಕ್ಟೋಬರ್ 5 ರಂದು ಇಂಡಿಯಾ ಪಾಕಿಸ್ತಾನ್ ಮ್ಯಾಚ್
Share
Aa
Rajyadharma NewsRajyadharma News
  • ರಾಜಕೀಯ
  • ಸಿನಿಮಾ
  • ಕ್ರೀಡೆ
  • ಅಪರಾಧ
  • ಪ್ರವಾಸ
  • ವಿಜ್ಞಾನ
  • ತಂತ್ರಜ್ಞಾನ
  • ಫ್ಯಾಷನ್
Search
  • Home
  • Categories
    • ರಾಜಕೀಯ
    • ಸಿನಿಮಾ
    • ತಂತ್ರಜ್ಞಾನ
    • ಪ್ರವಾಸ
    • ಫ್ಯಾಷನ್
    • ವ್ಯವಹಾರ
    • ವಿಜ್ಞಾನ
    • ಆರೋಗ್ಯ
  • ಜಿಲ್ಲೆ
    • ಮೈಸೂರು
    • ಮಂಡ್ಯ
    • ಚಾಮರಾಜನಗರ
    • ಬೆಂಗಳೂರು ನಗರ
    • ಬೆಂಗಳೂರು ಗ್ರಾಮಾಂತರ
Follow US
  • Advertise
© 2022 Foxiz News Network. Ruby Design Company. All Rights Reserved.
Rajyadharma News > Blog > ಕ್ರೀಡೆ > ಅಕ್ಟೋಬರ್ 5 ರಂದು ಇಂಡಿಯಾ ಪಾಕಿಸ್ತಾನ್ ಮ್ಯಾಚ್
ಕ್ರೀಡೆದೇಶ

ಅಕ್ಟೋಬರ್ 5 ರಂದು ಇಂಡಿಯಾ ಪಾಕಿಸ್ತಾನ್ ಮ್ಯಾಚ್

admin
Last updated: 2023/06/27 at 8:43 AM
admin
Share
2 Min Read
SHARE

ಕಿವೀಸ್‌-ಆಂಗ್ಲರ ನಡುವೆ ಮೊದಲ ಪಂದ್ಯ
ದೆಹಲಿ: ಬಹುನಿರೀಕ್ಷಿತ ವಿಶ್ವಕಪ್‌-೨೦೨೩ರ ಸಂಪೂರ್ಣ ವೇಳಾಪಟ್ಟಿ ಮಂಗಳವಾರ ಮಧ್ಯಾಹ್ನ ಮುಂಬೈನಲ್ಲಿ ಬಿಡುಗಡೆಗೊಂಡಿದೆ. ಅಕ್ಟೋಬರ್‌ ೫ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಕಳೆದ ಬಾರಿ ಫೈನಲಿಸ್ಟ್‌ ಇಂಗ್ಲೆಂಡ್‌ ಹಾಗೂ ನ್ಯೂಜಿಲ್ಯಾಂಡ್‌ ಕಾದಾಟದ ಮೂಲಕ ಟೂರ್ನಿಗೆ ಶುಭಾರಂಭ ಲಭಿಸಲಿದೆ. ಅತ್ತ ಚೆನ್ನೈನ ಚಿಪಾಕ್‌ ಮೈದಾನದಲ್ಲಿ ಅಕ್ಟೋಬರ್‌ ೮ರಂದು ಆಸ್ಟ್ರೇಲಿಯಾ ವಿರುದ್ಧ ಕಾದಾಟ ನಡೆಸುವ ಮೂಲಕ ಟೀಮ್‌ ಇಂಡಿಯಾ ತನ್ನ ಅಭಿಯಾನವನ್ನು ಆರಂಭಿಸಲಿದೆ.
ಮುಖ್ಯ ಸುತ್ತಿನಲ್ಲಿ ಪ್ರತಿಯೊಂದು ತಂಡಗಳು ಉಳಿದ ೯ ತಂಡಗಳ ವಿರುದ್ಧ ರೌಂಡ್‌ ರಾಬಿನ್‌ ಅನ್ವಯ ಕಾದಾಟ ನಡೆಸಲಿದ್ದು, ಈ ಪೈಕಿ ಹೆಚ್ಚು ಅಂಕ ಗಳಿಸುವ ನಾಲ್ಕು ತಂಡಗಳು ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಳ್ಳಲಿದೆ. ೨೦೧೯ರ ವಿಶ್ವಕಪ್‌ನಲ್ಲಿ ಫೈನಲ್‌ ಪ್ರವೇಶಿಸಿದ್ದ ಇಂಗ್ಲೆಂಡ್‌ ಹಾಗೂ ಕಿವೀಸ್‌ ನಡುವೆ ಅಹ್ಮದಾಬಾದ್‌ನಲ್ಲಿ ಟೂರ್ನಿಯ ಉದ್ಘಾಟನಾ ಪಂದ್ಯಗಳು ನಡೆಯಲಿದೆ. ಇನ್ನು ಭಾರತದ ಪಂದ್ಯಗಳತ್ತ ಗಮನ ಹರಿಸಿದರೆ ಅಕ್ಟೋಬರ್‌ ೮ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ ಕಾದಾಟ ನಡೆಸಲಿದ್ದರೆ ಅ.೧೧ರಂದು ದೆಹಲಿಯ ಅರುಣ್‌ ಜೇಟ್ಲಿ ಮೈದಾನದಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಡಲಿದೆ. ಅ.೧೫ರಂದು ಅಹ್ಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ ಕುತೂಹಲ ಪಂದ್ಯದಲ್ಲಿ ಭಾರತ ಪಡೆ ಆಡಲಿದ್ದು, ಕ್ರಿಕೆಟ್‌ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಪುಣೆಯಲ್ಲಿ ಅ.೧೯ರಂದು ಬಾಂಗ್ಲಾ ವಿರುದ್ಧ ಕಾದಾಟ ನಡೆಯಲಿದ್ದರೆ ಅ.೨೨ರಂದು ಧರ್ಮಶಾಲಾದಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ರೋಚಕ ಕಾಳಗ ನಡೆಯಲಿದೆ. ಉಳಿದಂತೆ ಅ.೨೯ರಂದು ಲಕ್ನೋದಲ್ಲಿ ಇಂಗ್ಲೆಂಡ್‌ ವಿರುದ್ಧ ಆಡಲಿದ್ದರೆ ನವೆಂಬರ್‌ ೨ರಂದು ಟೂರ್ನಿಗೆ ಎರಡನೇ ಸ್ಥಾನಿಯಾಗಿ ಅರ್ಹತೆ ಗಳಿಸುವ ತಂಡದ ಜೊತೆ ಟೀಮ್‌ ಇಂಡಿಯಾ ಆಡಲಿದೆ. ನವೆಂಬರ್‌ ೫ರಂದು ಕೊಲ್ಕತ್ತಾದ ಈಡನ್‌ ಗಾರ್ಡನ್‌ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದ್ದರೆ ನವೆಂಬರ್‌ ೧೧ರಂದು ಟೂರ್ನಿಗೆ ಅರ್ಹತೆ ಗಳಿಸುವ ಮೊದಲ ಸ್ಥಾನದ ತಂಡದ ವಿರುದ್ಧ ಅಂತಿಮ ಲೀಗ್‌ ಪಂದ್ಯದಲ್ಲಿ ಭಾರತ ಆಡಲಿದೆ. ಇನ್ನು ಎರಡೂ ಸೆಮಿಫೈನಲ್‌ ಪಂದ್ಯಗಳು (ನವೆಂಬರ್‌ ೧೫ ಹಾಗೂ ೧೬) ಮುಂಬೈನ ಈಡನ್‌ ಗಾರ್ಡನ್‌ ಮೈದಾನದಲ್ಲಿ ನಡೆಯಲಿದ್ದರೆ ನವೆಂಬರ್‌ ೧೯ರಂದು ನರೇಂದ್ರ ಮೋದಿ ಮೈದಾನದಲ್ಲಿ ಫೈನಲ್‌ ಕಾದಾಟ ನಡೆಯಲಿದೆ. ಟೂರ್ನಿಯಲ್ಲಿ ಒಟ್ಟು ೪೫ ಲೀಗ್‌ ಪಂದ್ಯಗಳು ನಡೆಯಲಿದೆ.

ಪಾಕ್‌ ಮನವಿಗಳ ತಿರಸ್ಕಾರ
ಇನ್ನು ಭಾರತ ವಿರುದ್ಧದ ಮೊದಲ ಪಂದ್ಯವನ್ನು ಅಹ್ಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಆಡಲ್ಲ ಎಂದು ಭಿನ್ನ ರಾಗ ತೋಡಿಕೊಂಡಿದ್ದ ಪಾಕಿಸ್ತಾನ ಮನವಿಯನ್ನು ಐಸಿಸಿ ಹಾಗೂ ಬಿಸಿಸಿಐ ತಿರಸ್ಕರಿಸಿದೆ. ಅಲ್ಲದೆ ಸ್ಪಿನ್‌ ಸ್ನೇಹಿ ಚೆನ್ನೈನಲ್ಲಿ ಅಫ್ಘಾನಿಸ್ತಾನ ವಿರುದ್ಧ ಕೂಡ ಆಡಲ್ಲ, ಬದಲಾಗಿ ಬೇರೆ ಮೈದಾನದ ವ್ಯವಸ್ಥೆ ಮಾಡಿ ಎಂಬ ಬಗ್ಗೆ ಕೂಡ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ ಅಪಸ್ವರ ಎಬ್ಬಿಸಿತ್ತು. ಸದ್ಯ ಈ ಮನವಿಯನ್ನು ಕೂಡ ಐಸಿಸಿ, ಬಿಸಿಸಿಐ ತಿರಸ್ಕರಿಸಿದೆ. ಎಲ್ಲರಿಗೂ ತಿಳಿದಿರುವಂತೆ ಚೆನ್ನೈ ಪಿಚ್‌ ಸ್ಪಿನ್ನರ್ಸ್‌ಗಳಿಗೆ ಹೆಚ್ಚಿನ ನೆರವು ನೀಡುತ್ತದೆ. ಅದೂ ಅಲ್ಲದೆ ಅಫ್ಘಾನ್‌ ತಂಡದಲ್ಲಿ ಘಟಾನುಘಟಿ ಸ್ಪಿನ್ನರ್ಸ್‌ಗಳೇ ತುಂಬಿಕೊಂಡಿರುವ ಹಿನ್ನೆಲೆಯಲ್ಲಿ ಭಯದಿಂದ ಪಾಕ್‌ ಈ ಭಿನ್ನ ಮನವಿಯನ್ನು ಮುಂದಿರಿಸಿತ್ತು. ಇದೀಗ ಅಂತಿಮವಾಗಿ ಪಾಕ್‌ನ ಎರಡೂ ಬೇಡಿಕೆಗಳನ್ನು ತಿರಸ್ಕರಿಸಲಾಗಿದೆ.

You Might Also Like

ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ : ದೇಶದ ಜನರಿಗೆ ಮೋದಿ ಮನವಿ

ನಾಳೆ ಮಧ್ಯಾಹ್ನ 3ಕ್ಕೆ ಲೋಕಸಭೆ ಚುನಾವಣೆ ದಿನಾಂಕ ಪ್ರಕಟಿಸಲಿರುವ ಚುನಾವಣಾ ಆಯೋಗ

ಇಂದು ಪ್ಲೇಆಫ್‌ ಪಂದ್ಯ, ಆರ್‌ಸಿಬಿ -ಮುಂಬೈ ಇಂಡಿಯನ್ಸ್ ಮುಖಾಮುಖಿ

ಮುಂದಿನ 10 ವರ್ಷಗಳು ಮೋದಿಯೇ ಪ್ರಧಾನಿ : ಅಮಿತ್ ಶಾ

ಲೋಕ ಮಹಾ ಸಮರ: ಇಂದು ಬಿಜೆಪಿಯ 125 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ? 

TAGGED: cricket india pakistan cricket
admin June 27, 2023
Share this Article
Facebook Twitter Whatsapp Whatsapp LinkedIn Copy Link
Previous Article ನನ್ನನ್ನು ಎದುರು ಹಾಕಿಕೊಂಡು ಯಾರು ಗೆಲ್ಲಲ್ಲ ಸಚಿವ ರಾಜಣ್ಣ ದರ್ಪದ ವಿಡಿಯೋ ಎಲ್ಲೆಡೆ ವೈರಲ್
Next Article ಬಿಜೆಪಿ ಸರ್ಕಾರದ ಪ್ರಮುಖ ಹಗರಣಗಳ ತನಿಖೆ – ಸಿಎಂ ಸಿದ್ದರಾಮಯ್ಯ
Leave a comment Leave a comment

Leave a Reply Cancel reply

Your email address will not be published. Required fields are marked *

Join our group

Stay Connected

235.3k Followers Like
69.1k Followers Follow
56.4k Followers Follow
- Advertisement -
Ad imageAd image

Latest News

ಬಾನು ಮುಷ್ತಾಕ್ ಕ್ಷಮೆ ಕೇಳಲಿ: ಕೇಸ್ ವಾಪಸ್ ತಗೋತೀನಿ – ಮಾಜಿ ಸಂಸದ ಪ್ರತಾಪ್ ಸಿಂಹ
ಜಿಲ್ಲೆ ಮೈಸೂರು ರಾಜ್ಯ September 8, 2025
ಶಿಕ್ಷಣವು ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಬೇಕು – ಶಾಸಕ ತನ್ವೀರ್ ಸೇಠ್
ಜಿಲ್ಲೆ ಮೈಸೂರು ರಾಜ್ಯ September 7, 2025
ದಸರಾ ಉದ್ಘಾಟಕರ ಪರ ಪ್ರತಿಭಟನೆ
ಇತರೆ ಮೈಸೂರು September 6, 2025
ಕಾರ್ಮಿಕರ ಸ್ಥಳಕ್ಕೆಬಂದ ಕೈ ಶಾಸಕ ಧರಣಿಕೂರುವ ಎಚ್ವರಿಕೆ ಕೊಟ್ಟು ಕೆಂಡಾಮಂಡಲ!?
ಜಿಲ್ಲೆ ಮೈಸೂರು August 1, 2024

ರಾಜ್ಯ ರಾಜಕೀಯ, ಸಿನಿಮಾ ಸುದ್ದಿಗಳು, ಕ್ರೈಮ್ ಸ್ಟೋರಿಗಳು ಮೈಸೂರು ಸುತ್ತಮುತ್ತಲಿನ ಇಂಟ್ರೆಸ್ಟಿಂಗ್ ಸುದ್ದಿಗಳಿಗಾಗಿ ನೋಡ್ತಾ ಇರಿ ರಾಜ್ಯಧರ್ಮ ನ್ಯೂಸ್ ಸತ್ಯವೇ ನಮ್ಮ ಧರ್ಮ

Follow US

© 2023 Rajyadharma News. All Rights Reserved | Developed By Interwebplus.com

Removed from reading list

Undo
Welcome Back!

Sign in to your account

Lost your password?