ಕರ್ನಾಟಕ ವಿಧಾನ ಸಭಾ ಚುನಾವಣೆಯು ರಂಗೇರಿದ್ದು ಈ ಬಾರಿಯೂ ಅತಂತ್ರ ಪರಿಸ್ಥಿತಿ ಉಂಟಾಗುವ ಸಾದ್ಯತೆಗಳು ದಟ್ಟವಾಗಿವೆ.
ಕಳೆದ ಬಾರಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು.ಆದ್ರೆ ಕಾಂಗ್ರೆಸ್ ಜೆಡಿಎಸ್ ಒಟ್ಟಾಗಿ ಸರ್ಕಾರವನ್ನು ರಚಿಸಿ ಬಿಜೆಪಿ ಶಾಕ್ ನೀಡಿತು. ಕಾಂಗ್ರೆಸ್ ಹಾಗೂ ಜೆಡಿಎಸ್ ಗೆ ಲೋಕಸಭೆಯಲ್ಲಿ 25 ಸೀಟು ಗಳನ್ನೂ ಗೆಲ್ಲುವ ಮೂಲಕ ಟಾಂಗ್ ನೀಡಿದ ಬಿಜೆಪಿ ಅಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದಿದ್ದು ಈಗ ಇತಿಹಾಸ
ಈ ಬಾರಿ ಶಾತಾಯ ಗಾತಯ ಅಧಿಕಾರಕ್ಕೆ ಬರಲೇಬೇಕು ಎಂದು ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಪಕ್ಷಗಳು ಪಣತೊಟ್ಟ ರೀತಿಯಲ್ಲಿ ಕಾಣುತ್ತಿದೆ. ಇದಕ್ಕೆ ಪೂರಕಎಂಬಂತೆ ಚುನಾವಣೆ ಗೆಲ್ಲಲು ಅನೇಕ ಯೋಜನೆಗಳನ್ನು ರೂಪಿಸಿದೆ.ಅದರಂತೆಯೇ ರೋಡ್ ಶೋ ರ್ಯಾಲಿ ಗಾಳನ್ನು ಆಯೋಜಿಸಿ ಮತದಾರರ ಮನ ಗೆಲ್ಲಲು ಮುಂದಾಗಿದೆ.
ಈ ಬಾರಿಯು ಕರ್ನಾಟಕದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬರಲ್ಲ ಎಂದು ಸಮೀಕ್ಷೆಗಳು ಹೇಳುತ್ತವೆ. ಒಂದು ಕಡೆ ಬಿಜೆಪಿ ಮೋದಿ.ಅಮಿತ್ ಶಾ ಯಡಿಯೂರಪ್ಪ ಯೋಗಿ ಅಧಿತ್ಯನಾಥ್ ಕರ್ನಾಟಕಕ್ಕೆ ಲಗ್ಗೆ ಇಡುತ್ತಿದ್ದಾರೆ. ಕಾಂಗ್ರೆಸ್ ನಿಂದ ಈಗಾಗಲೇ ರಾಹುಲ್ ಗಾಂಧಿ ಎಂಟ್ರಿ ಕೊಟ್ಟಿದ್ದು ಪ್ರಿಯಾಂಕ ಗಾಂಧಿ ಕೂಡ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ನಡೆಸುತ್ತಿದ್ದಾರೆ.
ಜೆಡಿಎಸ್ ಪಕ್ಷ ಕೂಡ ಪಂಚರತ್ನ ಯೋಜನೆಯ ಮೂಲಕ ಮತದಾರನ ಮನಸ್ಸನ್ನು ತನ್ನತ್ತ ಸೆಳೆಯಲು ಮುಂದಾಗಿದೆ. ಈ ಬಾರಿ ಸಂಪೂರ್ಣ ಬಹುಮತದಿಂದ ಅಧಿಕಾರಕ್ಕೆ ಬರಲು ಕುಮಾರಸ್ವಾಮಿ ಶ್ರಮಿಸುತ್ತಿದ್ದಾರೆ. ಆದರೆ ಯಾವ ಪಕ್ಷವೂ ಅಧಿಕಾರಕ್ಕೆ ಬರಲ್ಲ ಎನ್ನುತ್ತಿದೆ ಕರ್ನಾಟಕ ಮತದಾರ ಪ್ರಭುವಿನ ಮನಸ್ಸು.
ಈ ಬಾರಿ ಬಿಜೆಪಿಗೆ ಬೆಲೆ ಏರಿಕೆ, ಸೇರಿದಂತೆ ಲಿಂಗಾಯತ ವಿರೋಧಿ ಅಲೆ ಕೂಡ ಸ್ವಲ್ಪ ಮಟ್ಟಿಗೆ ಒಡೆತ ಕೊಡುವ ಸಾದ್ಯತೆಯಿದೆ. ಯಡಿಯೂರಪ್ಪರನ್ನು ಅವಧಿಗೂ ಮುನ್ನ ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದ್ದು. ಲಿಂಗಾಯತರ ವೋಟ್ ಬ್ಯಾಂಕ್ ಯಾವ ರೀತಿ ಬಿಜೆಪಿ ಕೈ ಹಿಡಿಯುತ್ತೆ ಕಾದು ನೋಡಬೇಕಿದೆ. ಅಲ್ಲದೆ ಇತ್ತ ಕಾಂಗ್ರೆಸ್ ಈ ಬಾರಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು 200 ಯೂನಿಟ್ ಫ್ರೀ ಕರೆಂಟ್ ,ಮನೆಯ ಯಜಮಾನಿಗೆ ,2000 ಸಾವಿರ ರೂಪಾಯಿ ಕೊಡುವುದಾಗಿ ಘೋಷಣೆ ಮಾಡಿದೆ.
ಒಟ್ಟಿನಲ್ಲಿ ಈ ಬಾರಿ ಕರ್ನಾಟಕದ ಜನರು ಯಾರಿಗೆ ಮಣೆ ಹಾಕುತ್ತಾರೋ ಯಾವ ಪಕ್ಷಕ್ಕೆ ಜೈ ಅನ್ನುತ್ತಾರೋ, ಯಾರಿಗೆ ಅಧಿಕಾರ ಕೊಡುತ್ತಾರೋ ಕಾದು ನೋಡಬೇಕಿದೆ.
ಆನಂದ್ ಕೆ.ಎಸ್