ಬೆಂಗಳೂರು : ಯಡಿಯೂರಪ್ಪ ಇಲ್ಲದೆ ಬಿಜೆಪಿ 50 ಸೀಟ್ ಕೂಡ ಗೆಲ್ಲಲ್ಲ ಎಂದು ಟಿಕೆಟ್ ವಂಚಿತ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳಿದ್ದಾರೆ.
ನನಗೆ ಟಿಕೆಟ್ ಕೈ ತಪ್ಪಲು ಸಿಟಿ ರವಿ ಕಾರಣ, ಅವರಿಗೆ ನಾಯಿ ನಿಷ್ಟೆ ತೋರಿಸಬೇಕು ಅದು ನನ್ನ ಕೈನಲ್ಲಿ ಸಾದ್ಯವಿಲ್ಲ, ಆದ್ದರಿಂದ ನನ್ನ ಮೇಲೆ ವಯಕ್ತಿಕ ದ್ವೇಷದಿಂದ ಟಿಕೆಟ್ ಕೈ ತಪ್ಪಿಸಿದ್ದಾರೆ ಎಂದು ಸಿಟಿ ರವಿ ವಿರುದ್ಧ ಕಿಡಿಕಾರಿದರು .
ಬಿಜೆಪಿ ಕಟ್ಟಿ ಬೆಳೆಸಿದ್ದು ಯಡಿಯೂರಪ್ಪ , ಅವರಿಲ್ಲದೆ ಬಿಜೆಪಿ ಗೆಲ್ಲಲ್ಲ, ಯಡಿಯೂರಪ್ಪ ಇದ್ರೆ ಮಾತ್ರ ಜನ ಬಿಜೆಪಿ ಕಡೆ ಮುಖ ಮಾಡೋದು, ಸಿಟಿ ರವಿ ದೊಡ್ಡವರಿದ್ದಾರೆ ಚಿಕ್ಕಮಗಳೂರು ಹಾಗೂ ರಾಜ್ಯದಲ್ಲಿ ಬಿಜೆಪಿ ಸೋಲಲು ಸಿಟಿ ರವಿ ನೇರ ಕಾರಣ ಎಂದು ಹೇಳಿದರು .